Asianet Suvarna News Asianet Suvarna News

ರಹಸ್ಯಗಳನ್ನೇ ಒಡಲಲ್ಲಿಟ್ಟುಕೊಂಡಿರುವ ಈ ಕುಂಡ 5000 ವರ್ಷ ಕಳೆದರೂ ಬತ್ತಿಲ್ಲ!

ಋಷಿಗಳು ಕಠೋರ ತಪಸ್ಸಿನಿಂದ ನಿರ್ಮಾಣವಾದ ಈ ಕುಂಡ 5000 ವರ್ಷಗಳ ನಂತರವೂ ಒಣಗಿಲ್ಲ, ನೀರಿನ ತೊರೆ ಇನ್ನೂ ಹರಿಯುತ್ತದೆ. ಈ ಕುಂಡ ಎಲ್ಲಿದೆ? ಇದರ ವೈಶಿಷ್ಠ್ಯತೆ ಏನು?

Satkumbha Kund did not dry even after 5000 years the sages had built it with severe penance skr
Author
First Published Jun 1, 2023, 4:12 PM IST

ಭಾರತದಲ್ಲಿ ಅನೇಕ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಿವೆ, ಅವುಗಳು ಅನೇಕ ಹಳೆಯ ನಂಬಿಕೆಗಳೊಂದಿಗೆ ಸಂಬಂಧ ಹೊಂದಿವೆ. ಉತ್ತರ ಭಾರತದ ಹರಿಯಾಣದ ಸೋನಿಪತ್ ಗ್ರಾಮದ ಖೇಡಿ ಗುರ್ಜರ್‌ನಲ್ಲಿ ಇಂತಹದೊಂದು ಐತಿಹಾಸಿಕ ಸ್ಥಳವಿದೆ. ಇಲ್ಲಿ 5000 ವರ್ಷಗಳಷ್ಟು ಹಳೆಯದಾದ ಸತ್ಕುಂಭ ಕುಂಡವಿದೆ. ಈ ಕುಂಡವನ್ನು ಏಳು ಋಷಿಗಳು ಕಠಿಣ ತಪಸ್ಸಿನ ಬಳಿಕ ನಿರ್ಮಿಸಿದರು. ಇಲ್ಲಿ ಇಂದಿಗೂ ಎಲ್ಲಾ ದಿಕ್ಕುಗಳಿಂದಲೂ ತೊರೆಗಳು ಹರಿಯುತ್ತವೆ. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಈ ಕುಂಡ ಬತ್ತಿಲ್ಲ. ಈ ಸತ್ಕುಂಭ ಕುಂಡದ ಇತಿಹಾಸ ಮತ್ತು ಅದಕ್ಕೆ ಸಂಬಂಧಿಸಿದ ನಂಬಿಕೆಗಳು ಕುತೂಹಲಕಾರಿಯಾಗಿವೆ.

ಸತ್ಕುಂಭ ಕುಂಡಕ್ಕೆ ಸಂಬಂಧಿಸಿದ ಪ್ರಾಚೀನ ನಂಬಿಕೆಗಳು
ಪ್ರಾಚೀನ ಕಾಲದಲ್ಲಿ, ಈ ಸ್ಥಳವನ್ನು ಸ್ವರ್ಗ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಪ್ರಾಚೀನ ಕಾಲದಲ್ಲಿ, ಚಕ್ವಾ ಬೈನ್ ನ್ಯಾಯ-ಪ್ರೀತಿಯಿಂದ ಪ್ರಜೆಗಳನ್ನು ನಡೆಸಿಕೊಳ್ಳುವ ಚಕ್ರವರ್ತಿಯಾಗಿದ್ದರು. ಖಜಾನೆಯಿಂದ ಯಾವುದೇ ಖರ್ಚನ್ನು ತೆಗೆದುಕೊಳ್ಳದೆ ಕೃಷಿ ಮತ್ತು ಉಳುಮೆ ಮಾಡುತ್ತಾ ಕುಟುಂಬದ ಖರ್ಚನ್ನು ಕಳೆಯುತ್ತಿದ್ದರು. ಅವರ ಪತ್ನಿ ರಾಣಿ ಬಿಂದುಮತಿ ಕೂಡ ತಾವೇ ನೀರು ತರುತ್ತಿದ್ದರು. ರಾಜ ಚಕ್ವಾ ಬೈನ್‌ನ ಮಹಿಮೆ ಎಷ್ಟಿತ್ತೆಂದರೆ ಎಲ್ಲಾ ರಾಜರು ಅವನಿಗೆ ವಾರ್ಷಿಕ ತೆರಿಗೆಯಾಗಿ ಚಿನ್ನವನ್ನು ನೀಡುತ್ತಿದ್ದರು. ರಾವಣ ಕೂಡ ಅವರಿಗೆ ತೆರಿಗೆ ವಿಧಿಸುತ್ತಿದ್ದ!

ಋಷಿಗಳ ಸ್ಥಳ
ಈ ಸ್ಥಳವು ಋಷಿಮುನಿಗಳ ಸ್ಥಳವಾಗಿದೆ. ಚುಂಕತ್ ಋಷಿ ಇಲ್ಲಿ ಕಠಿಣ ತಪಸ್ಸು ಮಾಡಿದ್ದರು. ಅವರು ಮಹರ್ಷಿ ಅಂಗೀರರಿಂದ ಜ್ಞಾನವನ್ನು ಪಡೆದರು. ಚುಂಕತ್ ಋಷಿಯ ಬಾಲ್ಯದ ಹೆಸರು ಶ್ರೀಕಾಂತ್.
ಒಮ್ಮೆ ಚುಂಕತ್ ಋಷಿಯು ರಾಜ ಚಕ್ವಾ ಬೈನ್ ಜೊತೆ ಯುದ್ಧಕ್ಕೆ ಬಂದನು. ಇದರಿಂದಾಗಿ ರಾಜ ಚಕ್ವಾನ ಸಂಪೂರ್ಣ ಸೈನ್ಯ ಮತ್ತು ರಾಜಧಾನಿ ನಾಶವಾಯಿತು. ಯುದ್ಧದ ನಂತರ, ಚಕ್ವಾ ಬೈನ್ ಚುಂಕತ್ ಋಷಿಯಲ್ಲಿ ಕ್ಷಮೆ ಯಾಚಿಸಿದನು ಮತ್ತು ತಪಸ್ಸಿಗಾಗಿ ಹಿಮಾಲಯ ಪರ್ವತಗಳಿಗೆ ಹೋದನು.

Vastu Tips: ಬಡತನ ದೂರಾಗಿಸಲು ಈ 6 ಪ್ರಾಣಿಗಳ ವಿಗ್ರಹ ಮನೆಯಲ್ಲಿಡಿ..

ಯುದ್ಧದ ನಂತರ ಈ ಸ್ಥಳವು ನಿರ್ಜೀವವಾಯಿತು..
ರಾಜ ಚಕ್ವಾ ಬೈನ್ ಜೊತೆಗಿನ ಋಷಿಯ ಯುದ್ಧದ ನಂತರ, ಈ ಸ್ಥಳವು ಸಂಪೂರ್ಣವಾಗಿ ನಿರ್ಜೀವವಾಯಿತು. ನಂತರ ಏಳು ಋಷಿಗಳು ಮಹಾ ತಪಸ್ಸು ಮಾಡಿ ಇಲ್ಲಿ ಸತ್ಕುಂಭ ಕುಂಡವನ್ನು ನಿರ್ಮಿಸಿದರು. ಇಲ್ಲಿ ಋಷಿಗಳು ಏಳು ಬಾವಿಗಳನ್ನು ತೋಡಿ ಕೊಳಗಳನ್ನು ಸ್ಥಾಪಿಸಿದ್ದರು. ಈ ಸತ್ಕುಂಭ ಕುಂಡದಲ್ಲಿ 67 ಯಾತ್ರಾ ಸ್ಥಳಗಳ ನೀರನ್ನು ಸಂಗ್ರಹಿಸಲಾಗಿದೆ. ಈ ಕಾರಣಕ್ಕಾಗಿ ಇದನ್ನು 68ನೇ ತೀರ್ಥಯಾತ್ರೆ ಎಂದೂ ಕರೆಯುತ್ತಾರೆ. 11 ಅಮಾವಾಸ್ಯೆ, ಹುಣ್ಣಿಮೆ, ಭಾನುವಾರ ಇಲ್ಲಿ ಸ್ನಾನ ಮಾಡುವುದರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಈ ಸತ್ಕುಂಭ ಕುಂಡದ ನಂಬಿಕೆ. ಪ್ರಾಚೀನ ಕಾಲದಿಂದಲೂ ಈ ಸತ್ಕುಂಭ ಕುಂಡದ ನೀರು ಇಂದಿಗೂ ಬತ್ತಿ ಹೋಗಿಲ್ಲ.

ಗರ್ಭಪಾತ ತಪ್ಪಿಸಲು ಮಹಾಭಾರತದಲ್ಲಿದೆ ಸರಳ ಸೂತ್ರ; ಧರಿಸಿ ಈ ಶ್ರೀವಾಸುದೇವ ರಕ್ಷಾಸೂತ್ರ

ಸತ್ಕುಂಭ ದೇವಾಲಯ
ಈ ಸತ್ಕುಂಭವಿರುವಲ್ಲಿ ದೇವಾಲಯವಿದೆ. ಖೇಡಿ ಗುಜ್ಜರ್ ಗ್ರಾಮದಲ್ಲಿರುವ ಸತ್ಕುಂಭ ದೇವಾಲಯದ ಇತಿಹಾಸವು ಬಹಳ ಪ್ರಾಚೀನವಾಗಿದೆ. ಖೇಡಿ ಗುಜ್ಜರ್ ಗ್ರಾಮದ ಎತ್ತರದ ದಿಬ್ಬದ ಮೇಲೆ ಉತ್ಖನನ ನಡೆಸಿದಾಗ, ಗುರ್ಜರ್ ಪ್ರತಿಹಾರ್ ಕಂಬಳದ 16 ಕಂಬಗಳು ಕಂಡುಬಂದಿವೆ. ಸತ್ಕುಂಭ ದೇವಾಲಯದ ಹಿಂದೆ ಸುಮಾರು 45 ಅಡಿ ಆಳದ ಬಾವಿಯ ಸುರಂಗವಿದೆ. ಬಾಬಾ ಸೀತಾರಾಮ್ ಈ ಪುರಾತನ ಸ್ಥಳವನ್ನು ಮತ್ತೊಮ್ಮೆ ಪುನರುಜ್ಜೀವನಗೊಳಿಸಿದರು ಮತ್ತು 36 ವರ್ಷಗಳ ಕಾಲ ಇಲ್ಲಿ ತಪಸ್ಸು ಮಾಡಿದರು. 1877ರಲ್ಲಿ ಬಾಬಾ ಸಮಾಧಿಯನ್ನು ತೆಗೆದುಕೊಂಡರು. ಇದರ ನಂತರ ಬ್ರಹ್ಮಚಾರಿ ಪಂಡಿತ್ ದೇರಮ್ ಈ ಸ್ಥಳವನ್ನು ಅಭಿವೃದ್ಧಿಪಡಿಸಿದರು ಮತ್ತು ತಪಸ್ಸು ಮಾಡುವಾಗ ಸಮಾಧಿಯನ್ನು ಪಡೆದರು. ಇಲ್ಲಿ ವರ್ಷಕ್ಕೆ ಎರಡು ಬಾರಿ ಜಾತ್ರೆ ನಡೆಯುತ್ತದೆ. ಮೊದಲ ಜಾತ್ರೆ ಕಾರ್ತಿಕ ಹುಣ್ಣಿಮೆಯಂದು ಮತ್ತು ಎರಡನೇ ಜಾತ್ರೆ ಶ್ರಾವಣದ ಕೊನೆಯ ಭಾನುವಾರದಂದು ನಡೆಯುತ್ತದೆ. ಜಾತ್ರೆಯ ದಿನ ಸಾವಿರಾರು ಭಕ್ತರು ಪುಣ್ಯ ಕೊಳದಲ್ಲಿ ಸ್ನಾನ ಮಾಡಿ ಪುಣ್ಯ ಸಂಪಾದಿಸುತ್ತಾರೆ.

Follow Us:
Download App:
  • android
  • ios