ರಾಮ ಕಲ್ಲಲ್ಲ, ದೇಶದ ಹೆಗ್ಗುರುತು: ಮಂದಿರ ಟೀಕೆಗೆ ರಾಜನಾಥ್ ತಿರುಗೇಟು
ಭಗವಾನ್ ಶ್ರೀರಾಮ ದೇಶದ ಅಸ್ಮಿತೆ ಹಾಗೂ ಹೆಗ್ಗುರುತೇ ಹೊರತು ಕೇವಲ ಕಲ್ಲು ಅಥವಾ ಮರದ ಮೂರ್ತಿಯಲ್ಲ ಎಂದು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ನವದೆಹಲಿ: ಭಗವಾನ್ ಶ್ರೀರಾಮ ದೇಶದ ಅಸ್ಮಿತೆ ಹಾಗೂ ಹೆಗ್ಗುರುತೇ ಹೊರತು ಕೇವಲ ಕಲ್ಲು ಅಥವಾ ಮರದ ಮೂರ್ತಿಯಲ್ಲ ಎಂದು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ. ರಾಮನವಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ರಾಮಮಂದಿರ ಸ್ಥಳದಲ್ಲಿ ಆಸ್ಪತ್ರೆ, ಶಾಲೆ, ಕೈಗಾರಿಕೆ ಸ್ಥಾಪಿಸಬೇಕಿತ್ತು ಎಂದರು. ಇವರು ರಾಮನನ್ನು ಅರ್ಥೈಸಿಕೊಳ್ಳದ, ಅಪ್ಪಿಕೊಳ್ಳದ ಜನರು. ರಾಮ ಕೇವಲ ಕಲ್ಲು, ಮಣ್ಣು, ಮರದ ಮೂರ್ತಿಯಲ್ಲ, ನಮ್ಮ ಸಂಸ್ಕೃತಿ ಮತ್ತು ನಂಬಿಕೆಯ ಕೇಂದ್ರ ಹಾಗೂ ದೇಶದ ಹೆಗ್ಗುರುತು. ಆಸ್ಪತ್ರೆ, ಶಾಲೆ, ಕೈಗಾರಿಕೆಯ ಜೊತೆಗೆ ದೇವಾಲಯವನ್ನೂ ನಿರ್ಮಿಸುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದರು.
Ayodhya Ram Mandir: ವಿವಾದದಿಂದ ನಿರ್ಮಾಣದವರೆಗೆ- ನೀವು ತಿಳಿಯಬೇಕಾದ್ದು..
ಎಲ್ಲ ವಿವಾದಗಳು ಮುಗಿದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭರದಿಂದ ಸಾಗಿದೆ. ಅಂದುಕೊಂಡಿದ್ದಕ್ಕಿಂತ ವೇಗವಾಗಿ ಕಾಮಗಾರಿಗಳು ಪೂರ್ಣಗೊಳ್ಳುತ್ತಿವೆ. ದೇಶಾದ್ಯಂತ ರಾಮಭಕ್ತರು ಈ ದೇವಾಲಯದಲ್ಲಿ ರಾಮನನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಬಹುನಿರೀಕ್ಷಿತ ಅಯೋಧ್ಯೆ ರಾಮಮಂದಿರ ನಿರ್ಮಾಣವು ಆಗಸ್ಟ್ 5, 2020ರಂದು ಪ್ರಾರಂಭವಾಗಿದೆ. ಈಗಾಗಲೇ ಇದರ ನಿರ್ಮಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ದೇಶಾದ್ಯಂತ ರಾಮ ಭಕ್ತರು ದೇವಾಲಯದಲ್ಲಿ ರಾಮನನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಗಣ್ಯರ ಸಮ್ಮುಖದಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಮಾಡಿದ್ದು, ಕಾಮಗಾರಿಯ ಮೇಲ್ವಿಚಾರಣೆಯನ್ನು ಮಾಡುತ್ತಲೇ ಇದ್ದಾರೆ.
ಅಯೋಧ್ಯೆ ತಲುಪಿದ ಕಾರ್ಕಳ 'ಕೃಷ್ಣಶಿಲೆ': ಭಕ್ತರ ಮೆಚ್ಚಿನ ತಾಣವಾದ ಶಿಲೆ ದೊರೆತ ಜಾಗ
ದೇವಸ್ಥಾನ ಹೇಗಿರುತ್ತದೆ?
ಭವ್ಯವಾದ ರಾಮಮಂದಿರವನ್ನು ಚಂದ್ರಕಾಂತ್ ಸೋಂಪುರ ವಿನ್ಯಾಸಗೊಳಿಸಿದ್ದಾರೆ. ಕಲ್ಲಿನ ಕೆಲಸಗಳು, ಕಲಾತ್ಮಕ ಕೆತ್ತನೆಗಳು ಮತ್ತು ಶಿಲ್ಪಕಲೆಗಳಲ್ಲಿ ಪರಿಣತಿ ಹೊಂದಿರುವ ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ದೇವಾಲಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ಶ್ರೀ ರಾಮ ಜನ್ಮಭೂಮಿ ಮಂದಿರವು ದೈವಿಕತೆ ಮತ್ತು ಭವ್ಯತೆಯ ದ್ಯೋತಕವಾಗಲಿದೆ' ಎಂದಿದ್ದಾರೆ.
ಅಲ್ಲದೆ, ಪ್ರಮುಖ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, 'ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೇವಾಲಯದ ವಿನ್ಯಾಸವನ್ನು ಮಾರ್ಪಡಿಸಲಾಗಿದೆ. ಈಗ ಅದು ಮೂಲತಃ ಯೋಜಿಸಿದ್ದಕ್ಕಿಂತ ಸುಮಾರು ದ್ವಿಗುಣವಾಗಿರುತ್ತದೆ. ಭವ್ಯವಾದ ಸ್ಮಾರಕವನ್ನು ನಾಗರಾ ಶೈಲಿಯ ವಾಸ್ತುಶಿಲ್ಪದಲ್ಲಿ ವಿನ್ಯಾಸಗೊಳಿಸಲಾಗುವುದು ಮತ್ತು ಎರಡು ಗುಮ್ಮಟಗಳ ಬದಲಿಗೆ ಐದು ಗುಮ್ಮಟಗಳನ್ನು ಹೊಂದಿರುತ್ತದೆ' ಎಂದು ತಿಳಿಸಿದ್ದಾರೆ.
ಅವಧಿಗೂ 3 ತಿಂಗಳು ಮೊದಲೇ ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ ಪೂರ್ಣ
ಅಯೋಧ್ಯೆಯಲ್ಲಿ ಐತಿಹಾಸಿಕ ದೇವಾಲಯವನ್ನು ಏಕೆ ನಿರ್ಮಿಸಲಾಗುತ್ತಿದೆ?
ಅಯೋಧ್ಯೆಯು ಭಗವಾನ್ ವಿಷ್ಣುವಿನ ಅವತಾರ ಶ್ರೀರಾಮನ ಜನ್ಮಸ್ಥಳ. ರಾಮಾಯಣ ಸೇರಿದಂತೆ ಹಲವಾರು ಹಿಂದೂ ಧರ್ಮಗ್ರಂಥಗಳು ಮತ್ತು ಪವಿತ್ರ ಪುಸ್ತಕಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ಈ ಪವಿತ್ರ ನಗರದಲ್ಲಿ ಐತಿಹಾಸಿಕ ದೇವಾಲಯವನ್ನು ನಿರ್ಮಿಸಬೇಕು ಎಂಬುದು ಪ್ರತಿಯೊಬ್ಬ ಹಿಂದೂವಿನ ಮನದ ಇಂಗಿತವಾಗಿತ್ತು.
ರಾಮಮಂದಿರದ ಸುತ್ತ ವಿವಾದಗಳು
ದುರದೃಷ್ಟವಶಾತ್, ರಾಮಮಂದಿರ ನಿರ್ಮಾಣ ವಿಷಯವಾಗಿ ಅಯೋಧ್ಯೆಯಲ್ಲಿ ವಿವಾದಗಳು ನಡೆದವು. ರಾಮಜನ್ಮಭೂಮಿಯಲ್ಲಿ ಬಾಬರಿ ಮಸೀದಿ ನಿರ್ಮಾಣವಾದಾಗಿನಿಂದ ವಿವಾದಗಳು ಆರಂಭವಾದವು. ಇದು 1850ರ ದಶಕದಲ್ಲಿ ಬಾಬರಿ ಮಸೀದಿಯ ಮೇಲೆ ಮೊದಲ ದಾಳಿಯಾದಾಗ ಪ್ರಾರಂಭವಾಯಿತು. ಅಲ್ಲಿಂದ ಮುಂದಕ್ಕೆ, ಹಿಂದೂ ಸ್ಥಳೀಯರು ನಿವೇಶನದ ಸ್ವಾಧೀನಕ್ಕಾಗಿ ಸಾಂದರ್ಭಿಕ ಬೇಡಿಕೆಗಳನ್ನು ಮಾಡಲು ಪ್ರಾರಂಭಿಸಿದರು. 1949ರಲ್ಲಿ ಗೋರಖನಾಥ ಮಠದ ಸಂತ ದಿಗ್ವಿಜಯ್ ನಾಥ್ ಅವರು ಅಖಿಲ ಭಾರತೀಯ ರಾಮಾಯಣ ಮಹಾಸಭಾ ಎಂಬ ಹಿಂದೂ ಮಹಾಸಭಾದೊಂದಿಗೆ ಕೈಜೋಡಿಸಿದರು. ನಂತರ ಅವರು 9 ದಿನಗಳ ಸುದೀರ್ಘ ಹಿಂದೂ ಸಮಾರಂಭವನ್ನು ಆಯೋಜಿಸಿದರು ಮತ್ತು ಅದರ ಕೊನೆಯಲ್ಲಿ, ಹಿಂದೂ ಕಾರ್ಯಕರ್ತರು ಮಸೀದಿಗೆ ನುಗ್ಗಿ ರಾಮ ಮತ್ತು ಸೀತೆಯ ವಿಗ್ರಹಗಳನ್ನು ಇರಿಸಿದರು.