Asianet Suvarna News Asianet Suvarna News

Raksha Bandhan 2023 Date: ಈ ವರ್ಷ ರಕ್ಷಾ ಬಂಧನ ಒಂದಲ್ಲ, ಎರಡು ದಿನ; ಯಾವಾಗ?

ಈ ವರ್ಷ ರಕ್ಷಾ ಬಂಧನವನ್ನು ಒಂದಲ್ಲ ಎರಡು ದಿನಗಳ ಕಾಲ  ಆಚರಿಸಲಾಗುತ್ತದೆ. ಈ ವರ್ಷ ಸೋದರಿಯರು ಅಣ್ಣನ ಮಣಿಗಂಟಿಗೆ ಯಾವ ದಿನ ರಾಖಿ ಕಟ್ಟುತ್ತಾರೆ ಗೊತ್ತಾ?

Rakshabandhan will be celebrated for 2 days this year know the date and auspicious time to tie Rakhi skr
Author
First Published Jun 15, 2023, 4:12 PM IST | Last Updated Jun 15, 2023, 4:12 PM IST

ವರ್ಷವಿಡೀ ಅನೇಕ ಹಬ್ಬಗಳಿವೆ. ಇವುಗಳಲ್ಲಿ ರಕ್ಷಾಬಂಧನವೂ ಒಂದು. ಸಹೋದರ ಸಹೋದರಿಯರ ವಿಶೇಷ ಬಾಂಧವ್ಯವನ್ನು ಗುರುತಿಸುವ ಹಬ್ಬವನ್ನು ಜಗತ್ತಿನಾದ್ಯಂತ ಭಾರತೀಯರು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಈ ದಿನದಂದು, ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ಪ್ರೀತಿಯ ದಾರವನ್ನು ಅಂದರೆ ರಾಖಿಯನ್ನು ಕಟ್ಟುತ್ತಾರೆ ಮತ್ತು ಸಹೋದರನಿಂದ ರಕ್ಷಣೆಯ ಭರವಸೆಯನ್ನು ತೆಗೆದುಕೊಳ್ಳುತ್ತಾರೆ. ಅನೇಕ ಪೌರಾಣಿಕ ಕಥೆಗಳು ಈ ದಿನದೊಂದಿಗೆ ಸಂಬಂಧ ಹೊಂದಿವೆ ಮತ್ತು ಇದು ವಿಶೇಷ ಧಾರ್ಮಿಕ ನಂಬಿಕೆಯನ್ನು ಸಹ ಹೊಂದಿದೆ. ಪಂಚಾಂಗದ ಪ್ರಕಾರ ಈ ವರ್ಷ ರಕ್ಷಾ ಬಂಧನವನ್ನು ಒಂದಲ್ಲ ಎರಡು ದಿನ ಆಚರಿಸಲಾಗುತ್ತಿದೆ.

ಹೌದು, ಈ ವರ್ಷ ರಕ್ಷಾ ಬಂಧನದ 2 ದಿನಾಂಕಗಳು ಬರಲಿವೆ. 2023ರಲ್ಲಿ, ರಕ್ಷಾಬಂಧನವನ್ನು ಆಗಸ್ಟ್ 30 ಬುಧವಾರ ಮತ್ತು 31 ಆಗಸ್ಟ್, ಗುರುವಾರದಂದು ಹೇಳಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನಾಂಕವು ಆಗಸ್ಟ್ 30ರಂದು ಬೆಳಿಗ್ಗೆ 10.58ರಿಂದ ಪ್ರಾರಂಭವಾಗುತ್ತದೆ ಮತ್ತು ಈ ದಿನಾಂಕವು ಮರುದಿನ ಆಗಸ್ಟ್ 31ರಂದು ಬೆಳಿಗ್ಗೆ 7.5ಕ್ಕೆ ಕೊನೆಗೊಳ್ಳುತ್ತದೆ. ಇದರಿಂದಾಗಿ ರಕ್ಷಾಬಂಧನದ 2 ದಿನಾಂಕಗಳನ್ನು ಹೇಳಲಾಗುತ್ತಿದೆ. ಆದರೆ, ಧರ್ಮಗ್ರಂಥಗಳ ಪ್ರಕಾರ, ರಕ್ಷಾ ಬಂಧನವನ್ನು ಆಚರಿಸಲು ಮತ್ತು ರಾಖಿ ಕಟ್ಟಲು ಮಧ್ಯಾಹ್ನ ಸೂಕ್ತ ಸಮಯ ಎಂದು ಹೇಳಲಾಗುತ್ತದೆ.

ಅಂಬಾನಿ ಮಕ್ಕಳನ್ನು ಅದೃಷ್ಟದ ತೊಟ್ಟಿಲಲ್ಲಿಟ್ಟು ತೂಗಿದ ರಾಶಿಚಕ್ರ

ರಕ್ಷಾ ಬಂಧನದ ದಿನ ಭದ್ರನ ನೆರಳು ಇದ್ದರೆ ಮಧ್ಯಾಹ್ನದ ಬದಲು ಸಂಜೆ ಪ್ರದೋಷ ಕಾಲದಲ್ಲಿ ರಾಖಿ ಕಟ್ಟಲಾಗುತ್ತದೆ. ಭದ್ರ ಕಾಲ ಈ ವರ್ಷ ಆಗಸ್ಟ್ 30ರ ಸಂಜೆಯವರೆಗೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆಗಸ್ಟ್ 30ರಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಆದರೆ ಭದ್ರ ನಿಮಿತ್ತ ರಾತ್ರಿ ರಾಖಿ ಕಟ್ಟಲು ಶುಭ ಮುಹೂರ್ತವಿದೆ. ಈ ಶುಭ ಮುಹೂರ್ತವು ಆಗಸ್ಟ್ 30 ರ ರಾತ್ರಿ 9:01 ರಿಂದ 9:05 ರವರೆಗೆ ಇರುತ್ತದೆ.

ಭದ್ರ ಎಂದರೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ, ಭದ್ರಕಾಲವನ್ನು ಅಶುಭ ಸಮಯವೆಂದು ಪರಿಗಣಿಸಲಾಗುತ್ತದೆ. ಭದ್ರ ನೆರಳಿನಲ್ಲಿದ್ದಾಗ ರಾಖಿ ಹಬ್ಬವನ್ನು ಆಚರಿಸುವುದಿಲ್ಲ. ಪುರಾಣಗಳ ಪ್ರಕಾರ, ಭದ್ರ ಸೂರ್ಯನ ಮಗಳು ಮತ್ತು ಯಮ ಮತ್ತು ಶನಿಯ ಸಹೋದರಿ. ಯಾವುದೇ ಹಬ್ಬದ ಮೇಲೆ ಭದ್ರನ ನೆರಳು ಬಿದ್ದಾಗ, ಆ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಏಕೆಂದರೆ ಭದ್ರಾನ ನೆರಳು ವಿನಾಶಕಾರಿ ಮತ್ತು ಕೆಟ್ಟದು ಎಂದು ನಂಬಲಾಗಿದೆ.

3 ಪಾಪಗ್ರಹಗಳ ಹಿಮ್ಮುಖ ಚಲನೆ; 4 ರಾಶಿಗಳ ಹಣ, ಆರೋಗ್ಯಕ್ಕೆ ಕುತ್ತು

ರಕ್ಷಾ ಬಂಧನದ ಮಹತ್ವ
ಪ್ರತಿ ರಕ್ಷಾ ಬಂಧನದಲ್ಲಿ ಸಹೋದರಿಯರು ತಮ್ಮ ಸಹೋದರರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಕೆಲವು ಹೆಂಗಸರು ಸಹ ದಿನವಿಡೀ ಉಪವಾಸವಿದ್ದು ತಮ್ಮ ಸಹೋದರರ ಸಂತೋಷಕ್ಕಾಗಿ ಪೂಜೆಯನ್ನು ಮಾಡುತ್ತಾರೆ. ಸಹೋದರನಿಗೆ ಪಶ್ಚಿಮಕ್ಕೆ ಮುಖ ಮಾಡಿ ಕೂರಿಸಿ ತಲೆಯ ಮೇಲೆ ಬಟ್ಟೆ ಹಾಕಲಾಗುತ್ತದೆ. ಬಳಿಕ ರಾಖಿ ಕಟ್ಟಿದ ನಂತರ, ಸಹೋದರಿಯರು ತಮ್ಮ ಸಹೋದರರಿಗೆ ಕೆಂಪು ತಿಲಕ ಇಟ್ಟು ಆರತಿ ಬೆಳಗುತ್ತಾರೆ. ಇದು ಒಡಹುಟ್ಟಿದ ಬಂಧವನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ. ಪ್ರತಿಯಾಗಿ, ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ ಮತ್ತು ಅವರ ಜೀವನದುದ್ದಕ್ಕೂ ಅವರನ್ನು ರಕ್ಷಿಸುವ ಭರವಸೆಯನ್ನು ನೀಡುತ್ತಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

 

Latest Videos
Follow Us:
Download App:
  • android
  • ios