Asianet Suvarna News Asianet Suvarna News

Makar Sankranti 2023: ಇಂದು ಗಂಗಾಸ್ನಾನ ಮಾಡಿದರೆ 1000 ಗೋದಾನ ಮಾಡಿದ ಫಲ

ಮಕರ ಸಂಕ್ರಾಂತಿಯ ದಿನವನ್ನು ಸ್ನಾನ, ದಾನ ಮತ್ತು ಧ್ಯಾನಕ್ಕೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ದಿನ, ಯಾವುದೇ ನದಿ ಅಥವಾ ಸಮುದ್ರದಲ್ಲಿ ಸ್ನಾನ ಮಾಡುವ ಮೂಲಕ, ದುಃಖವನ್ನು ತೊಡೆದುಹಾಕಬಹುದು, ಆದರೆ ಗಂಗಾ ನದಿದಲ್ಲಿ ಮಾಡುವ ಸ್ನಾನವು ಅನೇಕ ಪಟ್ಟು ಪುಣ್ಯವೆಂದು ಪರಿಗಣಿಸಲಾಗುತ್ತದೆ.

Makar Sankranti 2023 Why do we bathe in the Ganges on Makar Sankranti skr
Author
First Published Jan 8, 2023, 1:55 PM IST

ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುವುದು. ಮಕರ ಸಂಕ್ರಾಂತಿಯ ದಿನದಂದು ಗಂಗಾ ಅಥವಾ ಗಂಗಾಸಾಗರದಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ. ಈ ದಿನ, ಯಾವುದೇ ನದಿ ಅಥವಾ ಸಮುದ್ರದಲ್ಲಿ ಸ್ನಾನ ಮಾಡುವುದರಿಂದ, ದಾನ ಮತ್ತು ಧ್ಯಾನ ಮಾಡುವ ಮೂಲಕ ದುಃಖವನ್ನು ತೊಡೆದುಹಾಕಬಹುದು. ಆದರೆ ಧಾರ್ಮಿಕ ನಂಬಿಕೆಗಳ ಪ್ರಕಾರ, ಮಕರ ಸಂಕ್ರಾಂತಿಯ ದಿನದಂದು ಗಂಗಾ ಸ್ನಾನವನ್ನು ಮಾಡುವುದರಿಂದ ಏಳು ಜನ್ಮಗಳ ಪಾಪಗಳು ಕೊಚ್ಚಿಕೊಂಡು ಹೋಗುತ್ತವೆ. ನಿಮಗೆ ಗಂಗಾ ಸ್ನಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಸ್ನಾನದ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ನೀವು ಮನೆಯಲ್ಲಿ ಸ್ನಾನ ಮಾಡಬಹುದು. ಈ ದಿನ ನೀರಿನಲ್ಲಿ ಕಪ್ಪು ಎಳ್ಳು ಹಾಕಿ ಸ್ನಾನ ಮಾಡುವುದು ಸಹ ಮುಖ್ಯವಾಗಿದೆ. ಈ ದಿನದಂದು ಗಂಗಾ ಸ್ನಾನಕ್ಕೆ ಸಂಬಂಧಿಸಿದಂತೆ ಒಂದು ಪ್ರಮುಖ ಪೌರಾಣಿಕ ಘಟನೆಯಿದೆ. ಮಕರ ಸಂಕ್ರಾಂತಿಯ ದಿನದಂದು, ಗಂಗಾ ಮಾತೆ ಸಾಗರ ರಾಜನ 60 ಸಾವಿರ ಪುತ್ರರಿಗೆ ಮೋಕ್ಷವನ್ನು ದಯ ಪಾಲಿಸಿದಳು. ಆ ಪೌರಾಣಿಕ ಕತೆ ತಿಳಿಸುತ್ತೇವೆ.

ಪುರಾಣ
ಶಾಸ್ತ್ರಗಳ ನಂಬಿಕೆಯ ಪ್ರಕಾರ, ಕಪಿಲ ಮುನಿಯು ದೈವಿಕ ಕಾಲದಲ್ಲಿ ಗಂಗಾಸಾಗರದ ಬಳಿ ಆಶ್ರಮವನ್ನು ನಿರ್ಮಿಸಿ ತಪಸ್ಸು ಮಾಡುತ್ತಿದ್ದರು. ಆಗಿನ ಕಾಲದಲ್ಲಿ ಸಾಗರ ರಾಜನ ಕೀರ್ತಿ ಮೂರು ಲೋಕಗಳಲ್ಲೂ ಹಬ್ಬಿತ್ತು. ಎಲ್ಲ ರಾಜರುಗಳು ಸಾಗರ ರಾಜನ ದಾನ ಮತ್ತು ಸತ್ಕಾರ್ಯಗಳ ಮಹಿಮೆಯನ್ನು ಹಾಡುತ್ತಿದ್ದರು. ಇದನ್ನು ನೋಡಿದ ಸ್ವರ್ಗದ ರಾಜ ಇಂದ್ರನು ಬಹಳ ಕೋಪಗೊಂಡು ಚಿಂತಿತನಾದನು. ಈ ಸಮಯದಲ್ಲಿ ರಾಜ ಸಾಗರ ಅಶ್ವಮೇಧ ಯಾಗವನ್ನು ಆಯೋಜಿಸಿದನು. ಇಂದ್ರ ದೇವನು ಅಶ್ವಮೇಧ ಯಾಗದ ಕುದುರೆಯನ್ನು ಕದ್ದು ಕಪಿಲ ಮುನಿಯ ಆಶ್ರಮದ ಬಳಿ ಕಟ್ಟಿದನು.

ಶಾಪದಿಂದ ಭಸ್ಮವಾಯಿತು
ಸಾಗರ ರಾಜ ತನ್ನ 60 ಸಾವಿರ ಪುತ್ರರನ್ನು ಅಶ್ವಮೇಧ ಯಾಗದ ಕದ್ದ ಕುದುರೆಯನ್ನು ಹುಡುಕಲು ಕಳುಹಿಸಿದನು. ಆ ಮಕ್ಕಳೆಲ್ಲರೂ ಕುದುರೆಯನ್ನು ಹುಡುಕುತ್ತಾ ಕಪಿಲ ಮುನಿಯ ಆಶ್ರಮವನ್ನು ತಲುಪಿದರು. ಅಲ್ಲಿ ಅಶ್ವಮೇಧ ಯಾಗದ ಕುದುರೆಯನ್ನು ನೋಡಿದರು. ಈ ವೇಳೆ ಆ ಮಕ್ಕಳೆಲ್ಲರೂ ಕಪಿಲ ಮುನಿ ಕುದುರೆಯನ್ನು ಕದ್ದಿದ್ದಾರೆ ಎಂದು ಆರೋಪಿಸಿದರು. ಇದರಿಂದ ಕುಪಿತರಾದ ಕಪಿಲ ಮುನಿಯು ರಾಜ ಸಾಗರನ 60 ಸಾವಿರ ಪುತ್ರರನ್ನು ಸುಟ್ಟು ಬೂದಿಯಾಗುವಂತೆ ಶಾಪ ನೀಡಿದರು.

ಇಂದು ಪುಷ್ಯ ನಕ್ಷತ್ರ; ಚಿನ್ನ ಖರೀದಿಸಿದ್ರೆ ನಿಮ್ಮ ಸಂಪತ್ತು ದುಪ್ಪಟ್ಟಾಗುತ್ತೆ..

ಕ್ಷಮೆ ಕೇಳಿದರು
ಸಾಗರ ರಾಜ ಓಡಿಹೋಗಿ ಕಪಿಲ ಮುನಿಯ ಆಶ್ರಮವನ್ನು ತಲುಪಿ ತನ್ನ ಮಕ್ಕಳನ್ನು ಕ್ಷಮಿಸುವಂತೆ ವಿನಂತಿಸಿದನು. ಆಗ ಕಪಿಲ ಮುನಿಯು ಎಲ್ಲಾ ಪುತ್ರರ ಉದ್ಧಾರಕ್ಕೆ ಒಂದೇ ಒಂದು ಮಾರ್ಗವಿದೆ, ನೀನು ಮೋಕ್ಷದಾಯಿನಿ ಗಂಗೆಯನ್ನು ಭೂಮಿಗೆ ತಂದರೆ ಮಾತ್ರ ಅದು ಸಾಧ್ಯ ಎಂದು ಹೇಳಿದರು. ರಾಜ ಸಾಗರನ ಮೊಮ್ಮಗ ರಾಜಕುಮಾರ ಅಂಶುಮಾನ್, ಕಪಿಲ ಮುನಿಯ ಸಲಹೆಯ ಮೇರೆಗೆ ಗಂಗಾಮಾತೆಯನ್ನು ಭೂಮಿಗೆ ತರುವವರೆಗೆ ತನ್ನ ವಂಶದ ಯಾವುದೇ ರಾಜ ಶಾಂತಿಯುತವಾಗಿ ಕುಳಿತುಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಅವರು ತಪಸ್ಸು ಮಾಡಲು ಪ್ರಾರಂಭಿಸಿದರು. ರಾಜ ಅಂಶುಮಾನನ ಮರಣದ ನಂತರ, ರಾಜ ಭಗೀರಥನು ಗಂಗಾಮಾತೆಯನ್ನು ತಪಸ್ಸಿನಿಂದ ಸಂತೋಷಪಡಿಸಿದನು.

ತಪಸ್ಸಿನಿಂದ ಶಿವ ಪ್ರಸನ್ನನಾದ
ಗಂಗಾಮಾತೆಯ ವೇಗ ಎಷ್ಟಿತ್ತೆಂದರೆ ಆಕೆ ಭೂಮಿಗೆ ಇಳಿದಿದ್ದರೆ ಪ್ರಳಯ ಆಗುತ್ತಿತ್ತು. ಆಗ ಭಗೀರಥ ರಾಜನು ಶಿವನನ್ನು ತನ್ನ ತಪಸ್ಸಿನಿಂದ ಸಂತೋಷಪಡಿಸಿದನು, ಇದರಿಂದಾಗಿ ಗಂಗಾಮಾತೆ ತನ್ನ ಕೂದಲಿನ ಮೂಲಕ ಭೂಮಿಗೆ ಇಳಿಯಲು ಅವಕಾಶ ಮಾಡಿಕೊಟ್ಟ ಶಿವ. ಇದರಿಂದ ಗಂಗೆಯ ವೇಗ ಕಡಿಮೆಯಾಯಿತು. ತಾಯಿ ಗಂಗೆಯನ್ನು ಮುಡಿಯಲ್ಲಿಟ್ಟುಕೊಂಡು ಶಿವನು ಗಂಗಾಧರನಾದನು.

ಗಂಗಾ ಮಾತೆ ಭೂಮಿಗೆ ಇಳಿದಳು
ಗಂಗಾಮಾತೆ ಭೂಮಿಗೆ ಇಳಿದಳು ಮತ್ತು ಮುಂದೆ ರಾಜ ಭಗೀರಥ ಮತ್ತು ಹಿಂದೆ ತಾಯಿ ಗಂಗಾ ಭೂಮಿಯ ಮೇಲೆ ಹರಿಯಲು ಪ್ರಾರಂಭಿಸಿದಳು. ರಾಜ ಭಗೀರಥನು ತಾಯಿ ಗಂಗೆಯನ್ನು ಕಪಿಲ ಮುನಿಯ ಆಶ್ರಮಕ್ಕೆ ಕರೆತಂದನು, ಅಲ್ಲಿ ಗಂಗಾ ತಾಯಿಯು ರಾಜ ಸಾಗರನ 60 ಸಾವಿರ ಪುತ್ರರಿಗೆ ಮೋಕ್ಷವನ್ನು ನೀಡಿದಳು. ಗಂಗಾಮಾತೆ ಸಾಗರ ರಾಜನ 60 ಸಾವಿರ ಪುತ್ರರಿಗೆ ಮೋಕ್ಷ ನೀಡಿದ ಆ ದಿನ ಮಕರ ಸಂಕ್ರಾಂತಿ. ಅಲ್ಲಿಂದ ಮುಂದೆ ತಾಯಿ ಗಂಗಾ ಸಾಗರವನ್ನು ಸೇರಿದಳು. ಅವರು ಭೇಟಿಯಾಗುವ ಸ್ಥಳವನ್ನು ಗಂಗಾ ಸಾಗರ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಕರ ಸಂಕ್ರಾಂತಿಯಂದು ಗಂಗಾಸಾಗರ ಅಥವಾ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಮೋಕ್ಷಕ್ಕೆ ಕಾರಣವಾಗುತ್ತದೆ ಮತ್ತು ಪಾಪಗಳನ್ನು ತೊಳೆಯುತ್ತದೆ.

Makar Sankranti 2023: ಈ ದಿನ ಈ ಕೆಲಸ ಮಾಡೋದ್ರಿಂದ ಅಂದುಕೊಂಡಿದ್ದೆಲ್ಲ ಆಗುತ್ತೆ!

10 ಅಶ್ವಮೇಧ ಯಾಗ, ಸಾವಿರ ಗೋವುಗಳನ್ನು ದಾನ ಮಾಡಿದ ಫಲ
ಮಕರ ಸಂಕ್ರಾಂತಿಯ ದಿನದಂದು ಪಶ್ಚಿಮ ಬಂಗಾಳದಲ್ಲಿರುವ ಗಂಗಾಸಾಗರದಲ್ಲಿ ಸ್ನಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ಗಂಗಾಸಾಗರದಲ್ಲಿ ಸ್ನಾನ ಮಾಡಿ ಭಕ್ತನಿಗೆ 10 ಅಶ್ವಮೇಧ ಯಾಗಗಳ ಮಾಡಿದ ಮತ್ತು ಒಂದು ಸಾವಿರ ಗೋವುಗಳನ್ನು ದಾನ ಮಾಡಿದ ಫಲ ಸಿಗುತ್ತದೆ ಎಂಬುದು ಪೌರಾಣಿಕ ನಂಬಿಕೆ. ಈ ಕಾರಣಗಳಿಗಾಗಿ ಮಕರ ಸಂಕ್ರಾಂತಿಯ ದಿನದಂದು ಗಂಗಾಸಾಗರದಲ್ಲಿ ಸ್ನಾನ ಮಾಡಲು ಸಾವಿರಾರು ಭಕ್ತರು ಬರುತ್ತಾರೆ.

Follow Us:
Download App:
  • android
  • ios