Asianet Suvarna News Asianet Suvarna News

ಕೃಷ್ಣ ಜನ್ಮಾಷ್ಟಮಿ 2022: ಮನೆಯಲ್ಲಿ ಬಾಲ ಗೋಪಾಲನಿದ್ದರೆ, ಈ 6 ಕೆಲಸ ದಿನಾ ಮಾಡಬೇಕು!

ಬಹುತೇಕರ ಮನೆಯ ಪೂಜಾ ಮಂದಿರದಲ್ಲಿ ಬಾಲಗೋಪಾಲನಿರುತ್ತಾನೆ. ಸಾಮಾನ್ಯವಾಗಿ ಆತ ಅಂಬೆಗಾಲಿಟ್ಟು ನಡೆವಂತೆಯೋ, ಬೆಣ್ಣೆ ತಿನ್ನುವಂತೆಯೋ ಇರುವ ವಿಗ್ರಹವಿರುತ್ತದೆ. ಇಂಥ ವಿಗ್ರಹ ನಿಮ್ಮ ಮನೆಯಲ್ಲೂ ಇದ್ದರೆ, ಈ 6 ಕೆಲಸಗಳನ್ನು ನೀವು ಪ್ರತಿ ದಿನ ಮಾಡಲೇಬೇಕು. 

Krishna Janmashtami 2022 If Bal Gopal is in the house, do 6 things every day skr
Author
Bangalore, First Published Aug 10, 2022, 1:01 PM IST

ಅನೇಕ ಹಿಂದೂ ಮನೆಗಳು ತಮ್ಮ ಮನೆಯ ಮಂದಿರಗಳಲ್ಲಿ ಲಡ್ಡು ಗೋಪಾಲನ ವಿಗ್ರಹವನ್ನು ಹೊಂದಿರುತ್ತವೆ. ಲಡ್ಡು ಗೋಪಾಲನು ಕುಟುಂಬ ಸದಸ್ಯರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತಾನೆ . ಶ್ರೀ ಕೃಷ್ಣನ ಈ ಬಾಲ್ಯದ ಅವತಾರವನ್ನು ಮಗುವಿನಂತೆ ಪರಿಗಣಿಸಬೇಕು. ಇದನ್ನು ಬಾಲ ಗೋಪಾಲ ಎಂದೂ ಕರೆಯಲಾಗುತ್ತದೆ. ಇಂಥ ಬಾಲ ಗೋಪಾಲ ನಿಮ್ಮ ಮನೆಯಲ್ಲೂ ಇದ್ದರೆ ಅವನಿಗೆ ತೂಗಾಡಲು ತೊಟ್ಟಿಲು, ತಿನ್ನಲು ಆಹಾರ, ಸ್ನಾನ ಮತ್ತು ಸರಿಯಾದ ಶೃಂಗಾರವನ್ನು  ಪ್ರತಿ ದಿನ ಮಾಡಬೇಕು. 

ಪುಟಾಣಿ ಕೃಷ್ಣ ಎಂದರೆ ತುಂಟ, ಚುರುಕಾದ ಮನೆಯ ಮಗುವೆಂದೇ ಬಹಳಷ್ಟು ಜನ ಭಾವಿಸುತ್ತಾರೆ. ಕೃಷ್ಣನು ಹಿಂದೂಗಳ ನೆಚ್ಚಿನ ದೇವರಾದರೂ ಹೆಚ್ಚಿನವರು ಆತನಲ್ಲಿ ಸಖನನ್ನು ಕಾಣುತ್ತಾರೆ. ಆತನನ್ನು ಕುಟುಂಬ ಸದಸ್ಯರಂತೆಯೇ ಭಾವಿಸುತ್ತಾರೆ. ಮನೆಯಲ್ಲಿ ಬಾಲ ಗೋಪಾಲನ ವಿಗ್ರಹವಿದ್ದರೆ ಪೂಜೆಯ ಸಂದರ್ಭದಲ್ಲಿ ಪ್ರತಿದಿನವೂ 6 ಕೆಲಸಗಳನ್ನು ತಪ್ಪಿಸದೆ ಮಾಡಬೇಕು. ಇದರಿಂದ ನಿಮಗೆ ಪೂಜೆಯ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ. 

ಈ ಬಾರಿ ಕೃಷ್ಣ ಜನ್ಮಾಷ್ಟಮಿಯನ್ನು 18ನೇ ಆಗಸ್ಟ್ 2022, ಗುರುವಾರ ಆಚರಿಸಲಾಗುತ್ತಿದೆ. ಶಾಸ್ತ್ರಗಳಲ್ಲಿ ಬಾಲಗೋಪಾಲನ ಆರಾಧನೆಗೆ ಕೆಲವು ನಿಯಮಗಳನ್ನು ನೀಡಲಾಗಿದೆ. ಅವುಗಳನ್ನು ಅನುಸರಿಸಿದ ನಂತರವೇ ಬಂಕೆ ಬಿಹಾರಿ ಪೂಜೆಗೆ ಸಂಪೂರ್ಣ ಫಲ ಸಿಗುತ್ತದೆ. ಪ್ರತಿ ದಿನವೂ ಮಾಡಬೇಕಾದ ಈ ಕೆಲಸಗಳನ್ನು ಕೃಷ್ಣ ಜನ್ಮಾಷ್ಟಮಿಯ ವಿಶೇಷ ಪೂಜೆಯಂದು ತಪ್ಪಿಯೂ ತಪ್ಪಿಸಬೇಡಿ. 

ಸ್ನಾನ
ಮನೆಯಲ್ಲಿ ಬಾಲಗೋಪಾಲನ ವಿಗ್ರಹವಿದ್ದರೆ ಪ್ರತಿನಿತ್ಯ ಸ್ನಾನ ಮಾಡಿಸಬೇಕು. ಶಂಖದಲ್ಲಿ ಶುದ್ಧ ನೀರನ್ನು ತುಂಬಿಸಿ ಕೃಷ್ಣನಿಗೆ ಸ್ನಾನ ಮಾಡಿಸುವುದು ಉತ್ತಮ. ನಂತರ ತುಳಸಿ ಪಾತ್ರೆಯಲ್ಲಿ ಕೃಷ್ಣನ ಸ್ನಾನದ ನೀರನ್ನು ಹಾಕಬೇಕು. ಹಾಲಿನಿಂದಲೂ ಸ್ನಾನ ಮಾಡಿಸಬಹುದು. 

ಶ್ರಾವಣ ಪೌರ್ಣಿಮೆ: ಲಕ್ಷ್ಮೀ ಒಲುಮೆಗಾಗಿ ಮಾಡಿ ಈ 5 ಕೆಲಸ

ಹೊಸ ಬಟ್ಟೆ 
ಸ್ನಾನದ ನಂತರ, ಕೃಷ್ಣನಿಗೆ ಶುಭ್ರವಾದ ಬಟ್ಟೆಗಳನ್ನು ಹಾಕಿ. ಶ್ರೀ ಕೃಷ್ಣನು ಒಮ್ಮೆ ಧರಿಸಿದ ಬಟ್ಟೆಗಳನ್ನು ಮತ್ತೆ ಒಗೆಯದೆ ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ. ಅವುಗಳನ್ನು ಶ್ರೀಗಂಧ, ಆಭರಣಗಳಿಂದ ಅಲಂಕರಿಸಿ. ಶ್ರೀ ಕೃಷ್ಣನ ಆರಾಧನೆಯು ಮೇಕ್ಅಪ್ ಇಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಶ್ರೀಕೃಷ್ಣನಿಗೆ ಬಟ್ಟೆ, ಕುಂಕುಮ, ಗಂಧ, ನವಿಲುಗರಿ ಮುಂತಾದವುಗಳಿಂದ ಅಲಂಕರಿಸಿ..

ಭೋಗ
ಧಾರ್ಮಿಕ ಗ್ರಂಥಗಳ ಪ್ರಕಾರ, ಕೃಷ್ಣನಿಗೆ ದಿನಕ್ಕೆ ನಾಲ್ಕು ಬಾರಿ ಭೋಗ ನೀಡಬೇಕು. ನೀವು ಬೆಣ್ಣೆ, ಮೊಸರು, ಸಕ್ಕರೆ ಮಿಠಾಯಿ, ಖೀರ್ ನೀಡಬಹುದು.

ಏಕಾಂಗಿಯಾಗಿ ಬಿಡಬೇಡಿ
ಒಮ್ಮೆ ಬಾಲಗೋಪಾಲ ಮನೆಯಲ್ಲಿ ನೆಲೆಗೊಂಡರೆ, ಅವನನ್ನು ಎಂದಿಗೂ ಒಂಟಿಯಾಗಿ ಬಿಡಬೇಡಿ. ನೀವು ದೀರ್ಘ ಕಾಲದವರೆಗೆ ಎಲ್ಲೋ ಹೊರಗೆ ಹೋಗುತ್ತಿದ್ದರೆ, ನಿಮ್ಮೊಂದಿಗೆ ಶ್ರೀ ಕೃಷ್ಣನನ್ನು ಕರೆದುಕೊಂಡು ಹೋಗಿ. ಪ್ರಾಣ ಪ್ರತಿಷ್ಠೆಯ ನಂತರ ಪ್ರತಿದಿನ ಕೃಷ್ಣನನ್ನು ಪೂಜಿಸುವುದು ಬಹಳ ಮುಖ್ಯ.

Raksha Bandhan 2022: ನೀವು ತಿಳಿದಿರಬೇಕಾದ 7 ವಿಷಯಗಳು

ಆರತಿ
ಬೆಳಿಗ್ಗೆ ಮತ್ತು ಸಂಜೆ ಶ್ರೀ ಕೃಷ್ಣನ ಆರತಿ ಮಾಡಿ. ಧೂಪದ್ರವ್ಯದ ಜೊತೆಗೆ ದೀಪವನ್ನು ಭಗವಂತನ ಮುಂದೆ ಬೆಳಗಿಸಬೇಕು. ಬಾಲ ಗೋಪಾಲರನ್ನು ಸ್ಮರಿಸಿ ಅವನ ಮಂತ್ರಗಳನ್ನು ಪಠಿಸಿ. ಕೃಷ್ಣನ ವಿಗ್ರಹದ ಬಳಿ ರಾಧೆಯ ಫೋಟೋವನ್ನು ಇರಿಸಿ. ಧನಾತ್ಮಕತೆಯನ್ನು ಹರಡಲು ಮತ್ತು ಮನೆಯಲ್ಲಿ ಇರುವ ಎಲ್ಲಾ ನಕಾರಾತ್ಮಕತೆಯನ್ನು ನಾಶ ಮಾಡಲು ಈ ಆಚರಣೆ ಮಾಡಲಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios