Asianet Suvarna News Asianet Suvarna News

ಮೃತ ಆತ್ಮೀಯರು ಸಂದೇಶ ಕಳಿಸಿದ್ದಾರೆ! ಯಾವ ರಾಶಿಯವರು ಹೇಗೆ ಸಂದೇಶ ಪಡೆಯುತ್ತಾರೆ!

ಕಣ್ಣು ಅದುರುವುದು, ಭುಜ ಸ್ಫುರಣ, ಮೂಡ್‌ನಲ್ಲಿ ಬದಲಾವಣೆ... ಇವೆಲ್ಲಾ ನಿಮ್ಮ ಮೃತ ಆತ್ಮೀಯರ ಸಂದೇಶಗಳಾಗಿರಬಹುದು ! ಹಾಗಿದ್ದರೆ ಯಾವ ರಾಶಿಯವರು ಮೃತಪಟ್ಟ ಆತ್ಮೀಯರಿಂದ ಯಾವ ಬಗೆಯಲ್ಲಿ ಸಂದೇಶ ಪಡೆಯುತ್ತಾರೆ? ನೋಡೋಣ ಬನ್ನಿ.
 

how do you get messages of your loved one through body
Author
First Published Dec 25, 2022, 4:37 PM IST

ಕೆಲವೊಮ್ಮೆ ನಮ್ಮ ಒಂದು ಕಣ್ಣು ಇದ್ದಕ್ಕಿದ್ದಂತೆ ಅದುರಬಹುದು; ತುರಿಸಬಹುದು. ಅದರಲ್ಲೂ ಎಡಗಣ್ಣು ಹೀಗಾಗಿಬಿಟ್ಟರೆ ನಮ್ಮ ಯಾವುದೋ ಆತ್ಮೀಯರಿಗೆ ಕೇಡಾಗಿದೆ, ಅಥವಾ ಕೇಡಾಗಲಿದೆ ಎಂದೇ ಮನಸ್ಸು ಶಂಕಿಸಬಹುದು. ಇನ್ನು ಕೆಲವೊಮ್ಮೆ ಕಾರಣವಿಲ್ಲದೇ ಪಾದದ ಅಡಿಯಲ್ಲಿ ತುರಿಕೆ ಶುರುವಾಗಬಹುದು. ಯಾಕೆ ಹೀಗಾಗುತ್ತದೆ? ಇದಕ್ಕೆ ವೈಜ್ಞಾನಿಕ, ವೈದ್ಯಕೀಯ ಕಾರಣಗಳು ಏನೇ ಇರಲಿ, ಜ್ಯೋತಿರ್ವಿಜ್ಞಾನ ಹೇಳುವ ಪ್ರಕಾರ, ನಮ್ಮನ್ನು ಅಗಲಿ ಹೋದವರು, ನಿಮಗೆ ತಮ್ಮ ಆತ್ಮೀಯತೆ- ಪ್ರೀತಿ ತಿಳಿಸಲು, ನಮ್ಮನ್ನು ಬಿಟ್ಟು ತೀರಿಹೋದವರ ಆತ್ಮಗಳು ನಿಮ್ಮನ್ನು ತಲುಪಲು ಇಂಥ ದೈಹಿಕ ಸಂದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತವಂತೆ.

ಹಾಗಿದ್ದರೆ ಯಾವ ರಾಶಿಯವರು ಮೃತಪಟ್ಟ ಆತ್ಮೀಯರಿಂದ ಯಾವ ಬಗೆಯಲ್ಲಿ ಸಂದೇಶ ಪಡೆಯುತ್ತಾರೆ? ನೋಡೋಣ ಬನ್ನಿ.

ಮೇಷ ರಾಶಿ (Aries) 
ಇದ್ದಕ್ಕಿದ್ದಂತೆ ವಿಚಿತ್ರ ಭಾವನೆಗಳ ಅನುಭವವಾಗಬಹುದು. ನೀವು ನಿಮ್ಮ ಆಫೀಸಿನಲ್ಲಿ ಏನೋ ಬ್ಯುಸಿಯಾಗಿ ಕೆಲಸ ಮಾಡುತ್ತಿರಬಹುದು ಅಥವಾ ಯಾವುದೋ ಪಾರ್ಟಿಯಲ್ಲಿ ನಗುತ್ತಾ ಕುಣಿಯುತ್ತಾ ಇರಬಹುದು. ಇದ್ದಕ್ಕಿದ್ದಂತೆಯೇ ಕಾರಣವಿಲ್ಲದೆ ಯಾವ ಸೂಚನೆಯೂ ಇಲ್ಲದೆ ನಿಮ್ಮ ಮೂಡ್‌ನಲ್ಲಿ ಬದಲಾವಣೆಯಾಗಬಹುದು. ತುಂಬ ಒತ್ತಡದಲ್ಲಿದ್ದು, ಕೆಲಸದ ಮೇಲೆ ಗಮನ ಕೊಡಲಾಗದಷ್ಟು ಸುಸ್ತಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಶಕ್ತಿ ಬಂದಂತೆನಿಸಿ ಒಂದೇ ಓಘದಲ್ಲಿ ಬಾಕಿಯಿರುವ ಅಷ್ಟೂ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ. ಅದೆಲ್ಲಿಂದಲೋ ಒಂದು ಚೈತನ್ಯ ತುಂಬಿದಂತಾಗಿ ಫ್ರೆಶ್‌ ಫೀಲ್‌ ಸಿಗುತ್ತದೆ. ಇದು, ನಿಮ್ಮನ್ನು ಪ್ರೀತಿಸುವ ಜೀವಚೈತನ್ಯ ನಿಮಗಾಗಿ ಮಿಡಿಯುತ್ತಿದೆ ಎಂದರ್ಥವಂತೆ.

ವೃಷಭ ರಾಶಿ (Taurus)
ಒಂದು ಕಣ್ಣು ತುರಿಸಲು ಆರಂಭವಾಗುತ್ತದೆ. ಇದು ದೈಹಿಕ ಅನಾರೋಗ್ಯವಲ್ಲ; ಇದ್ದಕ್ಕಿದ್ದಂತೆ ಎಲ್ಲ ಸರಿಯಿದ್ದಾಗಲೂ ಕಣ್ಣು ತುರಿಸುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ಮಹಿಳೆಯರಲ್ಲಿ ಎಡಗಣ್ಣು ತುರಿಸಿದರೆ, ಆಕೆಯನ್ನು ಯಾರೋ ಹೊಗಳುತ್ತಾರೆಂದೂ, ಬಲಗಣ್ಣು ತುರಿಸಿದರೆ ಆಕೆಗೆ ಯಾರೋ ಆಕೆಯ ಒಳ್ಳೆಯದನ್ನು ಬಯಸುತ್ತಿಲ್ಲ ಎಂದು ಕೆಲವೆಡೆ ಅರ್ಥ ಮಾಡುತ್ತಾರೆ. ಪುರುಷರಿಗೆ ಅದು ವಿರುದ್ಧವಾಗಿ ಅಂದರೆ, ಎಡಗಣ್ಣು ತುರಿಸಿದರೆ ಯಾರೋ ನಿಮ್ಮ ಒಳ್ಳೆಯದು ಬಯಸುತ್ತಿಲ್ಲವೆಂದೂ ಬಲಗಣ್ಣು ತುರಿಸಿದರೆ, ಹೊಗಳುತ್ತಿದ್ದಾರೆಂದೂ ಅರ್ಥ. ಇದೊಂದು ಹಳೆಯ ನಂಬಿಕೆ. ಬಹಳಷ್ಟು ದೇಶಗಳಲ್ಲೂ ಇದನ್ನು ನಂಬುತ್ತಾರೆ. ಆದರೆ ಜ್ಯೋತಿರ್ವಿಜ್ಞಾನದಲ್ಲಿ ಇದು ಮೃತರ ಸಂದೇಶ.

ಮಿಥುನ ರಾಶಿ (Gemini)
ಕಣ್ಣಿನಂತೆ ಕೆನ್ನೆಯೂ ಕೆಲವೊಮ್ಮೆ ಅದುರುತ್ತದೆ. ಕೆನ್ನೆ ಹಾಗೂ ಕಿವಿ ಕಾರಣವಿಲ್ಲದೆ ಕೆಂಪಗಾಗುತ್ತದೆ ಎಂದಾದಲ್ಲಿ ಯಾವುದೋ ಚೈತನ್ಯ ನಿಮ್ಮನ್ನು ಮುಟ್ಟಲು ಪ್ರಯತ್ನಿಸುತ್ತಿದೆ ಎಂದು ಅರ್ಥವಂತೆ. ನೀವ್ಯಾರಿಗೋ ಬೈಯುವಾಗ ಅಥವಾ ಯಾರ ಜೊತೆಗೂ ರೊಮ್ಯಾಂಟಿಕ್‌ ಆಗಿ ಹರಟುವಾಗ ಕೆನ್ನೆ, ಕಿವಿ ಕೆಂಪಾಗುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಕಾರಣವಿಲ್ಲದೆ ಆದರೆ, ಮಾತ್ರ ಇದು ಅನ್ವಯವಾಗುತ್ತದಂತೆ.

ಕಟಕ ರಾಶಿ (cancer)
ಕಾರಣವಿಲ್ಲದೆ ರೋಮಾಂಚನವಾಗುವುದು ಇವರಲ್ಲಿ ಕಾಮನ್.‌ ಕೆಲವೊಮ್ಮೆ ಬೆನ್ನೆಲುಬಿನಲ್ಲಿ ಚಳಿ ಚಳಿ ಆದಂತಾಗಿ ರೋಮಾಂಚನವಾಗಬಹುದು. ನೀವು ಸುಮ್ಮನೆ ಕುಳಿತಿದ್ದರೂ, ಯಾರಾದರೂ ಬೇರೆಯವರು ನಿಮ್ಮಿಂದ ಆಕರ್ಷಿತರಾಗಿದ್ದಾರೆಂದಾದಲ್ಲಿ ನಿಮ್ಮನ್ನು ಅವರು ಮುಟ್ಟದೆಯೂ ನಿಮಗೆ ರೋಮಾಂಚನವಾದಲ್ಲಿ, ಆ ಆಕರ್ಷಿತಳಾ/ನಾದ ವ್ಯಕ್ತಿ ಮಾನಸಿಕವಾಗಿ ಬಹಳ ಸಾಮರ್ಥ್ಯವುಳ್ಳವಳು/ನು ಎಂದು ಅರ್ಥ. ಇದು ಸ್ವರ್ಗದಿಂದ ಬಂದ ಒಂದು ಸಂದೇಶವೂ ಇರಬಹುದು.

ಸಿಂಹ ರಾಶಿ (Leo)
ಇದ್ದಕ್ಕಿದ್ದಂತೆ ಸೀನು ಬರುವುದು ಕೂಡಾ ಇಂಥದ್ದರೊಂದಿಗೆ ತಾಳೆ ಮಾಡಲಾಗುತ್ತದೆ. ಇದು ಬಹಳ ದೇಶಗಳಲ್ಲಿ ನಂಬಿಕೊಂಡಿರುವ ಸಂಸ್ಕೃತಿ ಇದು. ಯಾರಾದರೂ ಕಾರಣವಿಲ್ಲದೆ ಸೀನಿದರೆ, ಯಾರೋ ನಿಮ್ಮನ್ನು ನೆನೆಸುತ್ತಿದ್ದಾರೆಂದೂ, ಹಲವು ದೇಶಗಳಲ್ಲಿ ಪಕ್ಕದಲ್ಲಿರುವ ವ್ಯಕ್ತಿಯ ಬಳಿ ಮೂರಂಕಿಯ ಸಂಖ್ಯೆಯನ್ನು ಕೇಳಿ ಲೆಕ್ಕಾಚಾರದ ಮೂಲಕ ಯಾವ ಅಕ್ಷರದ ಮಂದಿ ತನ್ನನ್ನು ನೆನೆಸಿಕೊಳ್ಳುತ್ತಿದ್ದಾರೆಂದು ಕಂಡುಹಿಡಿಯುವ ಸಂಪ್ರದಾಯವಿದೆಯಂತೆ. ಅಂದರೆ, ಉದಾಹರಣೆಗೆ ಪಕ್ಕದಲ್ಲಿರುವವರು ೨೪೬ ಎಂದರೆ, ಈ ಮೂರೂ ಅಂಕೆಗಳನ್ನು ಕೂಡಿಸಿ ಬರುವ ೧೨ ಸಂಖ್ಯೆಗೆ ಸರಿ ಸಮನಾದ ಇಂಗ್ಲಿಷ್‌ ಅಕ್ಷರ ಎಲ್‌ ಎಂದೂ ಎಲ್‌ ಅಕ್ಷರದ ವ್ಯಕ್ತಿ ನಿಮ್ಮನ್ನು ನೆನೆಸುತ್ತಿದ್ದಾರೆಂದೂ ಅರ್ಥವಂತೆ.

ಕನ್ಯಾ ರಾಶಿ (Virgo)
ಪದೇ ಪದೇ ಬಿಕ್ಕಳಿಕೆ ಬಂದರೆ ಯಾರೋ ನಿಮ್ಮನ್ನು ಸರಿಯಾಗಿ ಬೈಯುತ್ತಿದ್ದಾರೆ ಎಂದು ಕೆಲವು ಕಡೆ ಅರ್ಥ. ಆದರೆ ಅದನ್ನು ಪರಿಹರಿಸಿಕೊಳ್ಳಲು ನೀವು ಕತ್ತು ಎತ್ತಿ ಮೇಲೆ ಆಕಾಶದ ಕಡೆ ನೋಡಬೇಕು ತಾನೆ? ಆಗ ಅಲ್ಲಿ ನಿಮಗೆ ನಿಮ್ಮ ಅಗಲಿದ ಆತ್ಮೀಯರು ಮಂಜುಮಂಜಾಗಿ ಕಾಣಿಸಬಹುದು.

ತುಲಾ ರಾಶಿ (Libra)
ಯಾರೋ ಇದ್ದಕ್ಕಿದ್ದಂತೆ ಮುಟ್ಟಿದಂತೆ ಅನುಭವವಾಗುವುದೂ ಇದೆ. ಇದು ಯಾಕೆಂದರೆ, ನಿಮ್ಮನ್ನು ನೆನೆಸಿಕೊಳ್ಳುವ ವ್ಯಕ್ತಿಯ ಚೈತನ್ಯದ ಮಾನಸಿಕತೆ ಎಷ್ಟು ಶಕ್ತಿಯುತವಾದದ್ದೆಂದರೆ, ನಿಮ್ಮಿಬ್ಬರ ಪ್ರೀತಿ ಅಷ್ಟು ಗಟ್ಟಿಯಾಗಿರುವುದೆಂದಾದಲ್ಲಿ ಬಹಳ ಸಾರಿ ಹತ್ತಿರವಿಲ್ಲದಿದ್ದರೂ ಈ ರೀತಿ ಸ್ಪರ್ಶಾನುಭವವಾಗುವ ಸಾಧ್ಯತೆಗಳೂ ಇವೆಯಂತೆ.

ವೃಶ್ಚಿಕ ರಾಶಿ (Scorpio)
ಇಬ್ಬರ ನಡುವೆ ಅದ್ಭುತವಾದ ಕನೆಕ್ಷನ್‌ ಇರುವ ಸಂದರ್ಭ ದೂರದಲ್ಲಿದ್ದರೂ ಪರಸ್ಪರ ಹತ್ತಿರವೇ ಇದ್ದಂತೆ ಭಾಸವಾಗುತ್ತದೆ. ದೂರದಲ್ಲಿರುವ ನಿಮ್ಮ ಪ್ರೀತಿಯ ವ್ಯಕ್ತಿಯ ಆಲೋಚನೆಗಳು ಅರಿವೇ ಇಲ್ಲದಂತೆ ಅದೇ ಸಂದರ್ಭ ನಿಮ್ಮನ್ನು ತಲುಪಿಬಿಡುತ್ತದೆ. ಇದೊಂದು ಅದ್ಭುತವಾದ ಅನುಭವ. ನಿಮ್ಮಿಂದ ಬಹುದೂರದಲ್ಲಿದ್ದರೂ ನಿಮ್ಮ ಆಲೋಚನೆಗಳೊಂದಿಗೆ ಆತ್ಮೀಯರ ಆತ್ಮ ಮಿಳಿತಗೊಳ್ಳಬಲ್ಲುದು.

ನಿಮ್ಮ ರಾಶಿಯ ಆರೋಗ್ಯ ಕಾಯುವ ದೇವತೆ ಯಾರು? ಆರೋಗ್ಯಲಾಭ ಪಡೆಯೋದು ಹೇಗೆ?

ಧನು ರಾಶಿ (Sagittarius)
ಇನ್ಯಾರೋ ನಿಮ್ಮನ್ನು ಎಷ್ಟು ಇಷ್ಟಪಡುತ್ತಿದ್ದಾರೆಂದರೆ, ಅವರು ನಿಮ್ಮ ಕನಸಿನಲ್ಲಿ ಆ ಮೂಲಕ ಬರುತ್ತಾರೆ. ನಿಮ್ಮ ಬಗೆಗಿನ ಅವರ ಯೋಚನೆಗಳು ಎಷ್ಟು ಗಾಢವಾಗಿರುತ್ತದೆಂದರೆ, ಇದ್ದಕ್ಕಿದ್ದಂತೆ ನಿಮಗರಿವೇ ಇಲ್ಲದೆ ನಿಮ್ಮಲ್ಲಿ ಅವರ ನೆನಪು, ಬಯಕೆ ಮೂಡುತ್ತದೆ. ಇದೂ ಒಂದು ಬಗೆಯ ಟೆಲಿಪತಿಯೇ. ಅಗಲಿದವರು ನಿಮ್ಮನ್ನು ಈ ಮೂಲಕ ಸ್ಪರ್ಶಿಸಲು ಬಯಸುತ್ತಿರಬಹುದು.

ಮಕರ ರಾಶಿ (Capricorn)
ಇದ್ದಕ್ಕಿದ್ದಂತೆ ನಿಮ್ಮ ಪಾದದ ಅಡಿ ಕಾರಣವಿಲ್ಲದೇ ತುರಿಸಲು ಆರಂಭಿಸಬಹುದು. ಹೀಗಾದರೆ ನೀವು ನಿಮ್ಮ ಆತ್ಮೀಯರನ್ನು ಕಾಣಲು ಆ ಆತ್ಮೀಯರಿದ್ದಲ್ಲಿ, ಅಥವಾ ಅವರ ನೆನಪಿನ ಸಂಗತಿಗಳು ಇರುವ ಕಡೆಗೆ ಪಾದ ಬೆಳೆಸಬೇಕು ಎಂದರ್ಥ. ಅದು ಅವರು ವಾಸಿಸಿದ್ದ ಜಾಗವಿರಬಹುದು ಅಥವಾ ಸಮಾಧಿ ಸ್ಥಾನವೂ ಇರಬಹುದು.

ಕುಂಭ ರಾಶಿ (Aquarius)
ಇದ್ದಕ್ಕಿದ್ದಂತೆ ಬಿಕ್ಕಳಿಕೆ ಬರುತ್ತಿದೆಯಾ? ಮತ್ತು ಅದು ಪದೇ ಮರುಕಳಿಸುತ್ತಿದೆಯಾ? ಹಾಗಿದ್ದರೆ ತೀರಿಕೊಂಡ ನಿಮ್ಮ ಅಪ್ಪ ಅಥವಾ ಅಮ್ಮ ಅಥವಾ ಸಂಗಾತಿ ನಿಮ್ಮನ್ನು ಆ ಮೂಲಕ ತಾಗಲು ಬಯಸಿದ್ದಾರೆ ಎಂದರ್ಥ ಮಾಡಿಕೊಳ್ಳಬೇಕು. ನೀವು ನೀರು ಕುಡಿದು ಬಿಕ್ಕಳಿಕೆ ಪರಿಹರಿಸಿಕೊಳ್ಳಬಹುದು. ಆದರೆ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳುವುದು ಇನ್ನಷ್ಟು ಉತ್ತಮ ಉಪಾಯ.

ಮೀನ ರಾಶಿ (Pisces)
ಇದ್ದಕ್ಕಿದ್ದಂತೆ ನೀವೊಬ್ಬರೇ ಇರುವಾಗ, ನಿಮ್ಮ ಅಕ್ಕಪಕ್ಕದಲ್ಲಿ ಯಾರೋ ಓಡಾಡಿದಂತೆ ಅನಿಸಬಹುದು. ತೀರಿಕೊಂಡವರ ಧ್ವನಿ ಕೇಳಿದಂತೆ ಅನುಭವ ಆಗಬಹುದು. ಗಾಬರಿಯಾಗಬೇಡಿ. ಅಲ್ಲಿ ಅವರ ಆತ್ಮ ಇರಲೂಬಹುದು, ಅಥವಾ ಇಲ್ಲದಿದ್ದರೂ ಇಂಥ ಸನ್ನೆಗಳು ನಿಮಗೆ ಕಾಣಿಸಿಕೊಳ್ಳಬಹುದು. ಕೆಲವರ ಆತ್ಮಚೈತನ್ಯ ಎಷ್ಟು ಶಕ್ತಿಶಾಲಿ ಎಂದರೆ ಅದು ಸಾವಿರಾರು ಮೈಲು ದೂರದಿಂದಲೂ ಇಂಥ ಸನ್ನೆಗಳನ್ನು ಕಳಿಸಲು ಶಕ್ತಿಶಾಲಿಯಾಗಿರುತ್ತದೆ. 

Astrology Tips: ಆಧ್ಯಾತ್ಮದ ಕಡೆಗೆ ಬಹುಬೇಗ ವಾಲುವ ರಾಶಿಗಳಿವು!
 

Follow Us:
Download App:
  • android
  • ios