Asianet Suvarna News Asianet Suvarna News

ಹನುಮಾನ್ ಬಾಹುಕ್ ಪಠಣದಿಂದ 4 ರೀತಿಯ ಕಾಯಿಲೆಗಳಿಂದ ಮುಕ್ತಿ; ಸ್ತುತಿ ವಿಧಾನ ಹೀಗಿರಲಿ..

ಮಂಗಳವಾರ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ಎಲ್ಲಾ ತೊಂದರೆಗಳನ್ನು ಕೊನೆಗೊಳಿಸಬಹುದು. ಈ ದಿನ ನೀವು ಹನುಮಾನ್ ಬಾಹುಕ್ ಅನ್ನು ಪಠಿಸಿ. ಈ ಪಠ್ಯವು ವ್ಯಕ್ತಿಯ ದೈಹಿಕ ನೋವುಗಳನ್ನು ತೆಗೆದುಹಾಕುತ್ತದೆ. ಅದರಲ್ಲೂ ವಿಶೇಷವಾಗಿ 4 ರೀತಿಯ ಕಾಯಿಲೆಗಳಿಂದ ಪಾರಾಗಲು ಸಹಾಯ ಮಾಡುತ್ತದೆ. 

Hanuman Bahuk Praise Bajrangbali on Tuesday you will get freedom from 4 diseases skr
Author
First Published May 30, 2023, 6:15 PM IST

ರಾಮ ಭಕ್ತ, ಬಜರಂಗಬಲಿ, ಪವನ ಪುತ್ರ, ಅಂಜನಿ ಪುತ್ರ, ಮಾರುತಿ ನಂದನ, ಆಂಜನೇಯ- ಹನುಮಂತನಿಗೆ ಅಪಾರ ಹೆಸರುಗಳು.. ಜೀವನದ ತೊಂದರೆಗಳನ್ನು ತೊಡೆದುಹಾಕಲು, ಹನುಮನನ್ನು ಮಂಗಳವಾರದಂದು ಪ್ರತಿಯೊಂದು ಮನೆಯಲ್ಲೂ ಪೂಜಿಸಲಾಗುತ್ತದೆ. ಹನುಮಾನ್ ಚಾಲೀಸಾ, ಸಂಕಟ ಮೋಚನ ಅಷ್ಟಕ ಪಠಿಸಲಾಗುತ್ತದೆ. ಇದಲ್ಲದೆ, ಮಂಗಳವಾರದಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಎಲ್ಲಾ ತೊಂದರೆಗಳನ್ನು ಕೊನೆಗೊಳಿಸಬಹುದು. ಈ ದಿನ ನೀವು ಹನುಮಾನ್ ಬಾಹುಕ್ ಅನ್ನು ಪಠಿಸಬಹುದು. ಈ ಪಠ್ಯವು ವ್ಯಕ್ತಿಯ ದೈಹಿಕ ನೋವುಗಳನ್ನು ತೆಗೆದುಹಾಕುತ್ತದೆ. ಈ ಪಠ್ಯವನ್ನು ಯಾರು ಬರೆದಿದ್ದಾರೆ ಮತ್ತು ಅದರ ಪ್ರಯೋಜನಗಳೇನು ನೋಡೋಣ.

ಹನುಮಾನ್ ಬಾಹುಕ್ ಮಹಿಮೆ
ಹನುಮಾನ್ ಬಾಹುಕ್ ಗೋಸ್ವಾಮಿ ತುಳಸಿದಾಸ್ ರಚಿಸಿದ ಸ್ತೋತ್ರ. ಹನುಮಾನ್ ಬಾಹುಕ್ ಎಂಬುದು ಬ್ರಜ್ ಭಾಷೆಯಲ್ಲಿ 44 ಪದ್ಯಗಳನ್ನು ಒಳಗೊಂಡಿರುವ ಒಂದು ಸ್ತೋತ್ರವಾಗಿದೆ. ಗೋಸ್ವಾಮಿ ತುಳಸಿದಾಸ್, 16ನೇ ಶತಮಾನದ ಅವಧಿ ಭಾಷೆಯ ಕವಿ, ರಾಮಚರಿತಮಾನಸ ಮತ್ತು ಹನುಮಾನ್ ಚಾಲೀಸಾವನ್ನು ರಚಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ದೈಹಿಕ ಕಾಯಿಲೆಯನ್ನು ಗುಣಪಡಿಸಲು ಪವನ ಪುತ್ರನ ಆಶೀರ್ವಾದವನ್ನು ಕೋರಿದರು. 

ಕಲಿಯುಗವು ಪ್ರಾರಂಭವಾದಾಗ ತುಳಸಿದಾಸರು ವಾತದಿಂದ ನರಳುತ್ತಿದ್ದರು. ಆಗ ಅವರು ಹನುಮಾನ್ ಬಾಹುಕ್ ಅನ್ನು ರಚಿಸಿದರು. 44 ಶ್ಲೋಕಗಳ ಈ ಸ್ತುತಿಯನ್ನು ರಚಿಸಿದ ಕೂಡಲೇ ಹನುಮಂತ ಅವರ ನೋವನ್ನು ಆಲಿಸಿದನು. ಈ ಶ್ಲೋಕ ಪಾರಾಯಣ ಮಾಡುವುದರಿಂದ ತುಳಸಿದಾಸರು ಎಲ್ಲಾ ದೈಹಿಕ ತೊಂದರೆಗಳಿಂದ ಮುಕ್ತಿ ಪಡೆದರು. 

Vastu colours for home: ಪ್ರತಿ ಕೋಣೆಗೂ ಎಚ್ಚರಿಕೆಯಿಂದ ಬಣ್ಣ ಆಯ್ಕೆ ಮಾಡಿ!

ಹನುಮಾನ್ ಬಾಹುಕ್ ಪ್ರಯೋಜನಗಳು

  • ಈ ಪಾರಾಯಣವನ್ನು ನಿಯಮಾನುಸಾರ ಮಾಡಿದರೆ, ಹನುಮಂತನ ಕೃಪೆಯಿಂದ ದೇಹದ ಎಲ್ಲಾ ನೋವುಗಳಿಂದ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲ, ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬಹುದು.
  • ಸಂಧಿವಾತ, ತಲೆನೋವು, ಗಂಟಲು ನೋವು, ಕೀಲು ನೋವಿನ ದೈಹಿಕ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಯು 21 ಅಥವಾ 26 ದಿನಗಳ ಕಾಲ ನಿರಂತರವಾಗಿ ಈ ಸ್ತುತಿಯನ್ನು ಮಾಡಬೇಕು. ಇದಕ್ಕಾಗಿ ಹನುಮನ ಚಿತ್ರದ ಮುಂದೆ ಒಂದು ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ತುಳಸಿ ಎಲೆಯನ್ನು ಇಟ್ಟು ಸ್ತುತಿಸಿ. ಇದರ ನಂತರ ತುಳಸಿ ಎಲೆಗಳಿರುವ ನೀರನ್ನು ಕುಡಿಯಿರಿ. ಹೀಗೆ ಮಾಡುವುದರಿಂದ ಎಲ್ಲಾ ದೈಹಿಕ ಕಾಯಿಲೆಗಳು ಕೊನೆಗೊಳ್ಳುತ್ತವೆ.
  • ಹನುಮಾನ್ ಬಾಹುಕ್ ಅನ್ನು ಪಠಿಸುವ ಇನ್ನೊಂದು ವಿಧಾನ ಹೀಗಿದೆ- 40 ದಿನಗಳ ಕಾಲ ಹನುಮಾನ್ ಬಾಹುಕ್ ಅನ್ನು ಬೆಳಿಗ್ಗೆ ಜಪಿಸಬೇಕು. ಈ ಸಮಯದಲ್ಲಿ ವ್ಯಕ್ತಿಯು ಸಸ್ಯಾಹಾರಿ ಆಹಾರವನ್ನು ಮಾತ್ರ ಸೇವಿಸಬೇಕು. ಈ ಅವಧಿಯಲ್ಲಿ ಧೂಮಪಾನ ಮತ್ತು ಮದ್ಯಪಾನದಿಂದ ದೂರ ಉಳಿಯಬೇಕು.
  • ದುಷ್ಟ ನೆರಳುಗಳನ್ನು ತಪ್ಪಿಸಲು ಈ ಸ್ತುತಿಯು ತುಂಬಾ ಫಲಪ್ರದವಾಗಿದೆ. ಹನುಮಾನ್ ಬಾಹುಕ್ ಪಠಣದಿಂದ, ನಕಾರಾತ್ಮಕ ಶಕ್ತಿಗಳು ಅಲೆದಾಡುವುದಿಲ್ಲ. ಈ ಪಠ್ಯವು ವ್ಯಕ್ತಿಯನ್ನು ರಕ್ಷಿಸುತ್ತದೆ.
Follow Us:
Download App:
  • android
  • ios