Asianet Suvarna News Asianet Suvarna News

ಇಷ್ಟಾರ್ಥ ಈಡೇರಿಕೆಗಾಗಿ ಕೆಂಪು ದಾರದ ಈ ಸರಳ ಪರಿಹಾರ ಕಾರ್ಯ ಕೈಗೊಳ್ಳಿ..

ಸಾಮಾನ್ಯವಾಗಿ ಪೂಜೆ ಪುನಸ್ಕಾರಗಳಲ್ಲಿ, ವ್ರತಾಚರಣೆ ಬಳಿಕ ಕೆಂಪು ದಾರವನ್ನು ಕೈಗೆ ಕಟ್ಟಲಾಗುತ್ತದೆ. ಈ ಕೆಂಪು ದಾರಕ್ಕೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಿದೆ. ಈ ಕೆಂಪು ಪವಿತ್ರ ದಾರ ಕಟ್ಟಿಕೊಳ್ಳುವುದರಿಂದ ನಮ್ಮಲ್ಲ ಆಸೆಗಳು ಈಡೇರಲಿವೆ. 

Every Wish Will Be Fulfilled By This Wonderful Trick Of Lal Kalava skr
Author
First Published Mar 24, 2023, 5:47 PM IST

ಹಿಂದೂ ಧರ್ಮದಲ್ಲಿ ಪ್ರತಿ ಪೂಜೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಕೆಂಪು ದಾರ ಕಟ್ಟುವ ರೂಢಿ ಇದೆ. ಕೆಂಪು ದಾರವನ್ನು ಹಲವು ಕಾರಣಕ್ಕೆ ಕಟ್ಟಲಾಗುತ್ತದೆ. ಅನೇಕ ಬಾರಿ ಈ ಕೆಂಪು ದಾರವನ್ನು ದೇವರಿಗೆ ವಸ್ತ್ರವಾಗಿ ಅರ್ಪಿಸಲಾಗುತ್ತದೆ. ಮತ್ತು ಕೆಲವೊಮ್ಮೆ ಕೆಂಪು ದಾರವನ್ನು ಬಾಳೆಗೆ ಪ್ರದಕ್ಷಿಣೆ ಮಾಡುವಾಗ ಕಟ್ಟಲಾಗುತ್ತದೆ. ಪೂಜೆಯ ಸಮಯದಲ್ಲಿ ಕೈಯಲ್ಲಿ ಕೆಂಪು ದಾರ ಕಟ್ಟುವ ಪದ್ಧತಿಯೂ ಇದೆ ಮತ್ತು ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕೆಂಪು ದಾರವು  ನಿಮ್ಮ ಮುಚ್ಚಿದ ಅದೃಷ್ಟದ ಬಾಗಿಲಿನ ಬೀಗಗಳನ್ನು ತೆರೆಯುತ್ತದೆ. ಇಂದು ಕೆಂಪು ದಾರದ ಅದ್ಭುತ ಪರಿಹಾರಗಳ ಬಗ್ಗೆ ತಿಳಿಸುತ್ತೇವೆ. ಅವು ನಿಮ್ಮ ಪ್ರತಿಯೊಂದು ಆಸೆಯನ್ನು ಪೂರೈಸುವಲ್ಲಿ ಸಹಾಯಕವಾಗಿದೆ.

 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಣಿಕಟ್ಟಿನ ಮೇಲೆ ಕೆಂಪು ಬಣ್ಣದ ದಾರವನ್ನು ಧರಿಸುವುದು ಜಾತಕದಲ್ಲಿ ಮಂಗಳವನ್ನು ಬಲಪಡಿಸುತ್ತದೆ. ವಾಸ್ತವವಾಗಿ ಜ್ಯೋತಿಷ್ಯದಲ್ಲಿ ಮಂಗಳದ ಮಂಗಳಕರ ಬಣ್ಣವು ಕೆಂಪಾಗಿದೆ. ಕೈಯಲ್ಲಿ ಕೆಂಪು ದಾರ(ರಕ್ಷಾ ಸೂತ್ರ) ಕಟ್ಟಿಕೊಳ್ಳುವುದರಿಂದ ಮಹಾಲಕ್ಷ್ಮಿ, ಮಾ ಸರಸ್ವತಿ, ಮಾ ಕಾಳಿ ಎಲ್ಲಾ ಮೂರು ದೇವತೆಗಳ ಆಶೀರ್ವಾದ ಸಿಗುತ್ತದೆ ಮತ್ತು ವ್ಯಕ್ತಿಯು ಎಲ್ಲಾ ತೊಂದರೆಗಳಿಂದ ಮುಕ್ತನಾಗುತ್ತಾನೆ. ಶುಭ ಕಾರ್ಯಗಳಲ್ಲಿ ರಕ್ಷಾ ಸೂತ್ರವನ್ನು ಧರಿಸುವುದರಿಂದ, ದೇವರ ಮಂಗಳಕರ ದೃಷ್ಟಿಯು ನಿಮ್ಮ ಮೇಲೆ ಬಿದ್ದು, ನಿಮ್ಮ ಜೀವನದಲ್ಲಿ ಶತ್ರುಗಳನ್ನು ಕೊನೆಗೊಳಿಸುತ್ತದೆ. ಕೆಂಪು ದಾರ ದೀರ್ಘಾಯುಷ್ಯ ಮತ್ತು ಶತ್ರುಗಳ ವಿರುದ್ಧ ರಕ್ಷಣೆಯನ್ನು ಸಂಕೇತಿಸುತ್ತದೆ. ಹಾಗಾಗಿ ಇದನ್ನು ‘ರಕ್ಷಾ ದಾರ’ ಎಂದೂ ಕರೆಯುತ್ತಾರೆ.

ಸುಳ್ಳು ಹೇಳೋರ್ನ ಕಂಡ್ರೆ ಮೈ ಎಲ್ಲ ಉರಿಯೋಷ್ಟು ಕೋಪ ಈ ರಾಶಿಗಳಿಗೆ!

ಕೆಂಪು ದಾರ ಖಚಿತ ಪರಿಹಾರಗಳು
ಸಣ್ಣ ಕೆಂಪು ದಾರವನ್ನು ತೆಗೆದುಕೊಂಡು ಅದರ ಮೇಲೆ ಗಣೇಶನ ಪಾದದ ಸಿಂಧೂರವನ್ನು ಲೇಪಿಸಿ. ಇದಾದ ನಂತರ, ಆ ಕಲಾಕೃತಿಯನ್ನು ಗಣೇಶನ ಪಾದದ ಬಳಿ ಸ್ವಲ್ಪ ಸಮಯದವರೆಗೆ ಇರಿಸಿ. ನಂತರ ಗಣೇಶನ ವಿಗ್ರಹದ ಮುಂದೆ ಕುಳಿತು 'ಓಂ ಶ್ರೀ ಗಣೇಶಾಯ ನಮಃ' ಮಂತ್ರವನ್ನು 108 ಬಾರಿ ಜಪಿಸಿ. ಇದರ ನಂತರ, ಗಣೇಶನ ಪೂಜೆ ಮಾಡಿ ಮತ್ತು ನಂತರ ಕೆಂಪು ದಾರವನ್ನು ಮೇಲಕ್ಕೆತ್ತಿ ಮತ್ತು 'ಓಂ ಶ್ರೀ ಗಣೇಶಾಯ ನಮಃ' ಎಂಬ ಮಂತ್ರವನ್ನು ಪಠಿಸುತ್ತಲೇ ದಾರದಲ್ಲಿ ಏಳು ಗಂಟುಗಳನ್ನು ಕಟ್ಟಿಕೊಳ್ಳಿ. ನಂತರ ಈ ದಾರವನ್ನು ನಿಮ್ಮ ಕುತ್ತಿಗೆಗೆ ಧರಿಸಿ. ಕುತ್ತಿಗೆಗೆ ಧರಿಸಲು ಸಾಧ್ಯವಾಗದಿದ್ದರೆ, ಕೈಗೆ ಕಟ್ಟಬಹುದು ಅಥವಾ ದಾರವನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಬಹುದು. ಈ ಪರಿಹಾರವನ್ನು ಅಳವಡಿಸಿಕೊಂಡರೆ, ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಜೀವನದಲ್ಲಿ ಎಂದಿಗೂ ಸಂಪತ್ತಿನ ಕೊರತೆಯಾಗುವುದಿಲ್ಲ.

ಕೆಂಪು ದಾರ ನಿಯಮಗಳು

  • ಪೂಜೆಯಲ್ಲಿ ಬಳಸುವ ಕೆಂಪು ದಾರವನ್ನು ಕಟ್ಟಲು ಕೂಡ ಕೆಲವು ನಿಯಮಗಳಿವೆ. ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.
  • ಕೈಗೆ ಕೆಂಪು ದಾರ ಕಟ್ಟುವಾಗ ಕೈ ಖಾಲಿ ಇರಬಾರದು. ಆ ಸಮಯದಲ್ಲಿ ಸ್ವಲ್ಪ ಹಣ ಅಥವಾ ಹೂವುಗಳನ್ನು ಮುಷ್ಟಿಯಲ್ಲಿ ಇಟ್ಟುಕೊಳ್ಳಿ, ಮತ್ತೊಂದು ಕೈಯ್ಯನ್ನು ತಲೆಯ ಮೇಲಿಡಿ. ನಂತರ ಮಾತ್ರ ದಾರವನ್ನು ಕಟ್ಟಿಕೊಳ್ಳಿ.

    Chanakya Niti: ಲೈಫಲ್ಲಿ ಕೆಟ್ಟ ಟೈಂ ನಡೀತಿದ್ಯಾ? ಹೀಗೆ ಎದುರಿಸಿ..
     
  • ಈ ದಾರವನ್ನು ಕೈಯಲ್ಲಿ ಮೂರು ಬಾರಿ ಮಾತ್ರ ಸುತ್ತಿಕೊಳ್ಳಲಾಗುತ್ತದೆ. 
  • ಮಹಿಳೆ ಅವಿವಾಹಿತೆಯಾದರೆ ಆಕೆಯ ಬಲಗೈಗೆ ಕೆಂಪು ದಾರ ಕಟ್ಟಬೇಕು. ವಿವಾಹಿತೆಯಾದರೆ ಎಡಗೈಗೆ ಕಟ್ಟಬೇಕು. ಪುರುಷರಾದರೆ ಇದು ವಿರುದ್ಧ ರೀತಿಯಲ್ಲಿರಬೇಕು. 
  • ಕೆಂಪು ದಾರವನ್ನು ತೆಗೆಯಬೇಕೆಂದರೇ ಮಂಗಳವಾರವೇ ಆ ಕೆಲಸಕ್ಕೆ ಉತ್ತಮ. 

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Follow Us:
Download App:
  • android
  • ios