ಕನಸುಗಳು ಭವಿಷ್ಯದ ಸೂಚನೆ ನೀಡಬಹುದು. ಶ್ರೀಕೃಷ್ಣ ಕನಸಿನಲ್ಲಿ ಬಂದರೆ ಕಷ್ಟಗಳು ದೂರವಾಗುತ್ತವೆ. ರಾಧಾ-ಕೃಷ್ಣ ಒಟ್ಟಿಗೆ ಬಂದರೆ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಅವಿವಾಹಿತರಿಗೆ ಶೀಘ್ರದಲ್ಲೇ ಸಂಗಾತಿ ಸಿಗುವ ಸಾಧ್ಯತೆ ಇದೆ. ಉದ್ಯಮಿಗಳಿಗೆ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಗರ್ಭಿಣಿಯರಿಗೆ ಬಾಲಕೃಷ್ಣ ಕಾಣಿಸಿಕೊಂಡರೆ ಗಂಡು ಮಗು ಜನಿಸುವ ಸಂಭವವಿರುತ್ತದೆ ಎಂದು ಹೇಳಲಾಗುತ್ತದೆ.

ನಿದ್ರೆಗೆ ಜಾರಿದಾಗ ಯಾವ ರೀತಿ ಕನಸು ಬರುತ್ತೆ ಅಂತ ಹೇಳೋದಕ್ಕೆ ಆಗಲ್ಲ ಅಲ್ಲದೆ ಕನಸುಗಳನ್ನು ಕಂಟ್ರೋಲ್ ಮಾಡುವ ಶಕ್ತಿ ನಮ್ಮ ಬಳಿ ಇಲ್ಲ. ಬದಲಿಗೆ ಕನಸುಗಳು ಕೊಡುವ ಸೂಚನೆಗಳನ್ನು ಪಾಲಿಸುವುದು ಉತ್ತಮ. ಕೆಲವರಿಗೆ ಬರೀ ಕೆಟ್ಟ ಕನಸು ಬೀಳುತ್ತದೆ ಕೆಲವರಿಗೆ ಒಳ್ಳೆ ಕನಸು ಬೀಳುತ್ತದೆ ಇನ್ನೂ ಕೆಲಸರಿಗೆ ಕನಸು ಬಿದ್ದಿದ್ದು ಗೊತ್ತಾಗುವುದಿಲ್ಲ ಅಷ್ಟು ಗಾಡವಾಗಿ ನಿದ್ರೆ ಮಾಡಿರುತ್ತಾರೆ. ಹೀಗಿರುವಾಗ ಶ್ರೀಕೃಷ್ಣ ಪರಮಾತ್ಮ ಕನಸಿನಲ್ಲಿ ಬಂದರೆ ಏನ್ ಮಾಡ್ಬೇಕು? ದೇವರು ಕನಸಿನಲ್ಲಿ ಬರುವುದು ನಿಜವೇ? ಕೃಷ್ಣ ರಾಧಾ ಒಟ್ಟಿಗೆ ಬಂದ್ರೆ ಏನ್ ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ....

Add Asianetnews Kannada as a Preferred SourcegooglePreferred

ಹೌದು! ಶ್ರೀ ಕೃಷ್ಣ ಕನಸಿನಲ್ಲಿ ಬಂದರೆ ಒಳ್ಳೆಯದು ಎನ್ನುತ್ತಾರೆ ಹಿರಿಯರು. ಸ್ವಪ್ನ ಶಾಸ್ತ್ರದ ಪ್ರಕಾರ ಮನುಷ್ಯ ಅಂತ್ಯಂತ ಶುಭವಾದ ಕನಸು ಅಂದ್ರೆ ಶ್ರೀ ಕೃಷ್ಣ ಪರಮಾತ್ಮ ಕನಸಿನಲ್ಲಿ ಬರುವುದು. ಏಕೆಂದರೆ ಕೃಷ್ಣ ಕನಸಿನಲ್ಲಿ ಬಂದರೆ ಜೀವನದಲ್ಲಿ ಎದುರಾಗುವ ಪ್ರತಿಯಿಂದು ತೊಂದರೆಗೂ ಶೀಘ್ರದಲ್ಲಿ ದೂರ ಮಾಡಿಬಿಡುತ್ತಾನೆ ಎಂದು. ಕೇವಲ ಕೃಷ್ಣ ಮಾತ್ರವಲ್ಲ ರಾಧೆ ಕೂಡ ಕಾಣಿಸಿಕೊಂಡರೆ ಆ ವ್ಯಕ್ತಿ ವೈವಾಹಿಕ ಜೀನವಲದಲಿ ಸಂತೋಷವಾಗಿರುತ್ತಾನಂತೆ. ದಾಂಪತ್ಯ ಜೀವನಲ್ಲಿ ಬರೀ ಸುಖವನ್ನೇ ಕಾಣುತ್ತಾನಂತೆ.

ತಲೆ ಬಾಚಿದ ಕೂದಲನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಬಿಡಬೇಡಿ; ಮಾಟ ಮಂತ್ರ ಮಾಡುವವರಿಂದ ಎಚ್ಚರ!

ಇನ್ನೂ ಪದೇ ಪದೇ ರಾಧಾ ಕೃಷ್ಣ ಕನಸಿನಲ್ಲಿ ಕಂಡರೆ ಅವರ ಫಿಸಿಕಲ್ ರಿಲೇಷನ್‌ಶಿಪ್‌ ಅದ್ಭುತವಾಗಿರುತ್ತದೆ ಎನ್ನಲಾಗಿದೆ. ಮದುವೆ ಆಗದವರ ಕನಸಿನಲ್ಲಿ ಒಟ್ಟಿಗೆ ಬಂದರೆ ಅವರು ಶೀಘ್ರದಲ್ಲಿ ಬಾಳ ಸಂಗಾತಿಯನ್ನು ಶೀಘ್ರದಲ್ಲಿ ಭೇಟಿ ಮಾಡುತ್ತಾರೆ. ಒಂದು ವೇಲೆ ಉದ್ಯಮಿಗಳ ಕನಸಿನಲ್ಲಿ ಕೃಷ್ಣ ಕಂದು ಬಂದರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಅವರ ವ್ಯಾಪರ ದೊಡ್ದ ಮಟ್ಟದಲ್ಲಿ ಬೆಳೆದು ವಿಸ್ತರಣೆ ಮಾಡುತ್ತಾರೆ. ಗರ್ಭಿಣಿಯರ ಕನಸಿನಲ್ಲಿ ಬಾಲ ಕೃಷ್ಣ ಕಾಣಿಸಿಕೊಂಡ ಗಂಡು ಮಗು ಹುಟ್ಟುತ್ತದೆ ಅನ್ನೋದು ಗೊತ್ತಿದೆ ಕನ್ಫರ್ಮ್. ಇಷ್ಟೆಲ್ಲಾ ಸೂಚನೆಗಳು ನಿಮಗೆ ಶ್ರೀಕೃಷ್ಣ ಪರಮಾತ್ಮ ನೀಡುತ್ತಾನೆ.

ಶುಕ್ರವಾರ ಒಂದು ದಿನ ಈ ಕೆಲಸ ಮಾಡಿ ಸಾಕು...ಲಕ್ಷ್ಮಿ ದೇವಿ ಜಲ್ ಜಲ್ ಅಂತ ಬರ್ತಾಳೆ!