Asianet Suvarna News Asianet Suvarna News

ಕವಡೆ ಕಡೆಗಣಿಸ್ಬೇಡಿ.. ಶ್ರೀಮಂತರಾಗುವ ಗುಟ್ಟೂ ಇದರಲ್ಲಿದೆ

ಕವಡೆ ಬಗ್ಗೆ ಕೇಳಿರ್ತೇವೆ. ಈಗಿನ ಕಾಲದಲ್ಲಿ ಇದು ಶೋಕೇಸ್ ನಲ್ಲಿಡುವ ವಸ್ತುವಾಗಿದೆ.  ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದಂತೆ ಕವಡೆಯನ್ನು ನೀವು ಬಳಕೆ ಮಾಡಿದ್ರೆ ನಿಮ್ಮ ಮೇಲೆ ಹಣದ ಮಳೆಯಾಗುತ್ತೆ.
 

Cowrie Astrology Remedies For Money
Author
First Published Dec 15, 2022, 3:36 PM IST

ಹಣ ಯಾರಿಗೆ ಬೇಡ ಹೇಳಿ ಸ್ವಾಮಿ? ಹಣಕ್ಕಾಗಿಯೇ ನಾವು, ನೀವೆಲ್ಲ ಹೊಡೆದಾಡ್ತಿರೋದು. ಜನರು ಹಗಲು ರಾತ್ರಿ ಕೆಲಸ ಮಾಡಿ ಹೆಚ್ಚೆಚ್ಚು ಆದಾಯ ಗಳಿಸಲು ಮುಂದಾಗ್ತಾರೆ. ಕಷ್ಟಪಟ್ಟು ದುಡಿದ ಹಣ ಹೇಳ್ದೆ ಕೇಳ್ದೆ ಖಾಲಿಯಾಗಿರುತ್ತದೆ. ಒಂದಾದ್ಮೇಲೆ ಒಂದು ಸಮಸ್ಯೆ ನಮ್ಮನ್ನು ಮುತ್ತಿಕೊಳ್ಳುತ್ತದೆ. ಕೂಡಿಹಾಕಿದ ಹಣವೆಲ್ಲ ಖಾಲಿಯಾದಾಗ ಜನರು ಚಿಂತೆಗೊಳಗಾಗೋದು ಮಾಮೂಲಿ. ಆಗ ಜನರಿಗೆ ದೇವರ ನೆನಪು ಶುರುವಾಗುತ್ತದೆ. ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸಲು ಶುರು ಮಾಡ್ತಾರೆ. ಕೈನಲ್ಲಿ ಬಂದ ಹಣ ಖಾಲಿಯಾಗ್ಬಾರದು ಅಂದ್ರೆ ನೀವು ಮೊದಲೇ ಕೆಲ ಜ್ಯೋತಿಷ್ಯ ಉಪಾಯಗಳನ್ನು ಮಾಡಬೇಕು. ಇದ್ರಿಂದ ನಿಮ್ಮ ಮನೆಗೆ ಬಂದ ಲಕ್ಷ್ಮಿ ಎಂದೂ ಹೊಸ್ತಿಲು ದಾಟಿ ಹೋಗೋದಿಲ್ಲ. 

ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಕವಡೆಗೆ ವಿಶೇಷ ಮಹತ್ವವಿದೆ. ಸಮುದ್ರ ಮಂಥನದ ವೇಳೆ ಕವಡೆ ದೇವಿ ಲಕ್ಷ್ಮಿ (Lakshmi) ಯೊಂದಿಗೆ ಹೊರಬಂದಳು. ಹಾಗಾಗಿಯೇ ಇದನ್ನು ತಾಯಿ ಲಕ್ಷ್ಮಿ ರೂಪವೆಂದು ಪರಿಗಣಿಸಲಾಗುತ್ತದೆ. ಯಾರ ಮನೆಯಲ್ಲಿ ಕವಡೆ (Cowrie) ಪೂಜೆ ನಡೆಯುತ್ತದೆಯೋ ಆ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಯೂರುತ್ತಾಳೆ ಎಂಬ ನಂಬಿಕೆಯಿದೆ. ಲಕ್ಷ್ಮಿ ಇರುವ ಮನೆಯಲ್ಲಿ ಎಂದಿಗೂ ಸಂಪತ್ತಿನ ಸಮಸ್ಯೆ ಕಾಡೋದಿಲ್ಲ.  ನಾವಿಂದು, ಕವಡೆ ಬಳಕೆಯಿಂದ ಮನೆಯಲ್ಲಿರುವ ಸಂಪತ್ತನ್ನು ಹೇಗೆ ವೃದ್ಧಿಸಬಹುದು ಎಂಬುದನ್ನು ನಿಮಗೆ ಹೇಳ್ತೆವೆ. ಕೋಟ್ಯಾಧಿಪತಿಯಾಗ್ಬೇಕೆಂದ್ರೆ ಕವಡೆಯನ್ನು ಹೀಗೆ ಬಳಸಿ : 

ಪರ್ಸ್ (Purse) ನಲ್ಲಿರಲಿ ಕವಡೆ : ಕೆಲವರ ಪರ್ಸ್ ಯಾವಾಗ್ಲೂ ಖಾಲಿಯಾಗಿರುತ್ತದೆ. ಬಂದ ಹಣ ಪರ್ಸ್ ಸೇರೋದೇ ಇಲ್ಲ. ಪರ್ಸ್ ತುಂಬ ಹಣ ಯಾವಾಗ್ಲೂ ಇರಬೇಕು ಎನ್ನುವವರು ಕವಡೆಯನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ನೀವು ಮೊದಲು ಮನೆಯಲ್ಲಿರುವ ಲಕ್ಷ್ಮಿ ಫೋಟೋದ ಮುಂದೆ ಕವಡೆ ಇಟ್ಟು ಅದಕ್ಕೆ ಪೂಜೆ ಮಾಡಬೇಕು. ನಂತ್ರ ಆ ಕವಡೆಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಶುಕ್ರವಾರ ನೀವು ಪರ್ಸ್ ನಲ್ಲಿ ಕವಡೆ ಹಾಕಿದ್ರೆ ಸಂಪತ್ತು ಡಬಲ್ ಆಗುತ್ತದೆ.

ನೌಕರಿ, ಬಡ್ತಿಗಾಗಿ ಹೀಗೆ ಮಾಡಿ : ಒಳ್ಳೆಯ ನೌಕರಿ ಬೇಕು ಎನ್ನುವವರು ನೀವಾಗಿದ್ದರೆ ಸಂದರ್ಶನಕ್ಕೆ ಹೋಗುವ ಮೊದಲು ನಿಮ್ಮ ಪರ್ಸ್ ಗೆ ಕವಡೆ ಹಾಕಲು ಮರೆಯಬೇಡಿ. ಇದ್ರಿಂದ ಸಂದರ್ಶನದಲ್ಲಿ ನೀವು ಬೇಗ ಪಾಸ್ ಆಗುವ ಜೊತೆ ಒಳ್ಳೆ ಸಂಬಳದ ನೌಕರಿ ಸಿಗುತ್ತದೆ. ಬಡ್ತಿ ಸಿಗ್ತಿಲ್ಲ ಎನ್ನುವವರು ಕೂಡ ಸದಾ ತಮ್ಮ ಬಳಿ ಕವಡೆ ಇಟ್ಟುಕೊಂಡರೆ ಯಶಸ್ಸು ಕಾಣಬಹುದು. 

ಇಂಥ ಕೆಲವು ಕೆಲಸಗಳನ್ನು ದಕ್ಷಿಣ ದಿಕ್ಕಿನಲ್ಲಿ ಮಾಡಲೇಬಾರದು, VASTU ಹೇಳುವುದೇನು?

ಕವಡೆಯನ್ನು ಕಪಾಟಿನಲ್ಲಿಡಿ : ಹಣ ವ್ಯರ್ಥವಾಗ್ತಿದೆ ಎನ್ನುವವರು ಕಪಾಟಿನಲ್ಲಿ ಕವಡೆಯನ್ನು ಇಡಬೇಕು. ನೀವು ಶುಕ್ರವಾರದ ದಿನ ತಾಯಿ ಲಕ್ಷ್ಮಿ ಮುಂದೆ ಐದು ಕವಡೆಯನ್ನು ಇಟ್ಟು ಪೂಜೆ ಮಾಡಬೇಕು. ನಂತ್ರ ಅದನ್ನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ, ನೀವು ಹಣವಿಡುವ ಜಾಗದಲ್ಲಿ ಇಡಬೇಕು. ಇದ್ರಿಂದ ಮನೆಯಲ್ಲಿ ಹಣದ ಕೊರತೆಯಾಗುವುದಿಲ್ಲ. ವ್ಯರ್ಥ ಖರ್ಚು ನಿಲ್ಲುತ್ತದೆ. ಕವಡೆ ಸಂಪತ್ತನ್ನು ಆಕರ್ಷಿಸುವ ಕೆಲಸ ಮಾಡುತ್ತವೆ.

ಹೊಸ ಮನೆ ನಿರ್ಮಾಣದ ವೇಳೆ ಕವಡೆ : ನೀವು ಹೊಸ ಮನೆ ನಿರ್ಮಾಣ ಮಾಡ್ತಿದ್ದರೆ ಅಡಿಪಾಯದ ವೇಳೆ ಕವಡೆ ಹಾಕಿ ಪೂಜೆ ಮಾಡಿ. ಕವಡೆ ವಾಸ್ತುದೋಷವನ್ನು ನಿವಾರಿಸುವ ಕೆಲಸ ಮಾಡುತ್ತದೆ. ಮನೆಯಲ್ಲಿ ಸದಾ ಸುಖ, ಸಂಪತ್ತು ನೆಲೆಸುವಂತೆ ಮಾಡುತ್ತದೆ.

ಈ ರಾಶಿಯ ಹುಡುಗಿಯರು ಪ್ರೀತಿಯಲ್ಲಿ ಶ್ರೀಮಂತರು, ಪತಿ ಜೊತೆ ಸೂಪರ್ ಹೊಂದಾಣಿಕೆ ಇವರದು..

ದೃಷ್ಟಿ ಬೀಳೋದನ್ನು ಹೀಗೆ ತಪ್ಪಿಸಿ : ನಿಮ್ಮ ಮನೆಗೆ ದೃಷ್ಟಿ ಬಿದ್ದಿದೆ ಎಂದೆನಿಸಿದ್ರೆ 7 ಕವಡೆಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ಮನೆಯ ಮುಖ್ಯ ದ್ವಾರದ ಎಡ ಭಾಗಕ್ಕ  ಕಟ್ಟಿ. ಇದ್ರಿಂದ ಯಾವುದೇ ದುಷ್ಟ ಶಕ್ತಿ ನಿಮ್ಮ ಮನೆ ಪ್ರವೇಶ ಮಾಡುವುದಿಲ್ಲ. ನಿಮಗೆ ಕೆಟ್ಟ ದೃಷ್ಟಿಯಾಗಿದೆ ಎಂದಾದ್ರೆ ಕಪ್ಪು ದಾರದಲ್ಲಿ ಕವಡೆ ಕಟ್ಟಿ ಅದನ್ನು ನಿಮ್ಮ ಕೈಗೆ ಕಟ್ಟಿಕೊಳ್ಳಬೇಕು. ಮಕ್ಕಳ ಸೊಂಟಕ್ಕೆ ನೀವು ಇದನ್ನು ಕಟ್ಟಬಹುದು.
 

Follow Us:
Download App:
  • android
  • ios