Asianet Suvarna News Asianet Suvarna News

7,000 ಕೆಜಿ ರಾಮ್ ಹಲ್ವಾ ಸಿದ್ಧಪಡಿಸಲಿರುವ ಖ್ಯಾತ ಬಾಣಸಿಗ ವಿಷ್ಣು ಮನೋಹರ್

ಅಯೋಧ್ಯೆಯಲ್ಲಿ ರಾಮಮಂದಿರದ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ, ನಾಗಪುರದ ಬಾಣಸಿಗ ವಿಷ್ಣು ಮನೋಹರ್ ಅವರು ಅಯೋಧ್ಯೆಯಲ್ಲಿ 7000 ಕೆಜಿ ' ರಾಮ್ ಹಲ್ವಾ'ವನ್ನು ಸಿದ್ಧಪಡಿಸಲು ಸಜ್ಜಾಗಿದ್ದಾರೆ . 

chef Vishnu Manohar to prepare 7000 kg ram halwa for ayodhya ram mandir suh
Author
First Published Jan 20, 2024, 2:38 PM IST

ಅಯೋಧ್ಯೆಯಲ್ಲಿ ರಾಮಮಂದಿರದ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ, ನಾಗಪುರದ ಬಾಣಸಿಗ ವಿಷ್ಣು ಮನೋಹರ್ ಅವರು ಅಯೋಧ್ಯೆಯಲ್ಲಿ 7000 ಕೆಜಿ ' ರಾಮ್ ಹಲ್ವಾ'ವನ್ನು ಸಿದ್ಧಪಡಿಸಲು ಸಜ್ಜಾಗಿದ್ದಾರೆ . ವಿಷ್ಣು ಮನೋಹರ್ ಅವರು 12 ಸಾವಿರ ಲೀಟರ್ ಸಾಮರ್ಥ್ಯದ ವಿಶೇಷ ಕಡಾಯಿ ತಯಾರಿಸಿದ್ದಾರೆ, ಅದರಲ್ಲಿ ರಾಮ ಮಂದಿರದ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕಾಗಿ ರಾಮ ಹಲ್ವಾವನ್ನು ಸಿದ್ಧಪಡಿಸಲಿದ್ದಾರೆ .

ಈ ಕಡಾಯಿಯ ತೂಕ 1300 ರಿಂದ 1400 ಕೆ.ಜಿ. ಇದನ್ನು ಉಕ್ಕಿನಿಂದ ಮಾಡಲಾಗಿದ್ದು, ಹಲ್ವಾ ತಯಾರಿಸಿದಾಗ ಉರಿಯದಿರುವಂತೆ ಮಧ್ಯಭಾಗವನ್ನು ಕಬ್ಬಿಣದಿಂದ ಮಾಡಲಾಗಿದೆ. ಗಾತ್ರ 10 ಅಡಿ 10 ಅಡಿ ಇದೆ. ಇದು 12,000 ಲೀಟರ್ ಸಾಮರ್ಥ್ಯ ಹೊಂದಿದೆ, ಮತ್ತು 7,000 ಕೆಜಿ ಹಲ್ವಾ ತಯಾರಿಸಬಹುದು. ಇದನ್ನು ಮೇಲೆತ್ತಲು ಕ್ರೇನ್ ಅಗತ್ಯವಿದೆ. 10 ರಿಂದ 12 ಕೆಜಿ ತೂಕದ ಸೌಟಿನಲ್ಲಿ ರಂಧ್ರಗಳಿರುವುದರಿಂದ ಅಡುಗೆ ಮಾಡಲು ಸುಲಭವಾಗಿದೆ.

900 ಕೆಜಿ ರವೆ, 1000 ಕೆಜಿ ತುಪ್ಪ, 1000 ಕೆಜಿ ಸಕ್ಕರೆ, 2000 ಲೀಟರ್ ಹಾಲು, 2500 ಲೀಟರ್ ನೀರು, 300 ಕೆಜಿ ಒಣ ಹಣ್ಣುಗಳು ಮತ್ತು 75 ಕೆಜಿ ಏಲಕ್ಕಿ ಪುಡಿಯನ್ನು ಬಳಸಿ ಹಲ್ವಾವನ್ನು ತಯಾರಿಸಲಾಗುವುದು.ವಿಷ್ಣು ಮನೋಹರ್ ಅವರು ರಾಮ ಜನ್ಮಭೂಮಿ ಆಂದೋಲನದೊಂದಿಗೆ ಸಂಬಂಧ ಹೊಂದಿದ್ದಾರೆ. ಅಯೋಧ್ಯೆಯಲ್ಲಿ ಕರಸೇವೆ ಮಾಡಿದ್ದಾರೆ.

ಜನವರಿ 22 ರಂದು ರಾಮಮಂದಿರದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಾರೆ. ಭಾರತ ಮತ್ತು ವಿದೇಶದಿಂದ ಹಲವಾರು ವಿವಿಐಪಿ ಅತಿಥಿಗಳು ಅಯೋಧ್ಯೆಯಲ್ಲಿ ಶುಭ ಸಂದರ್ಭದಲ್ಲಿ ಭಾಗವಹಿಸಲು ಆಹ್ವಾನಗಳನ್ನು ಸ್ವೀಕರಿಸಿದ್ದಾರೆ.

Follow Us:
Download App:
  • android
  • ios