Asianet Suvarna News Asianet Suvarna News

ಹೊಸ ಮನೆ ಖರೀದಿಸುವಾಗ ಈ ಅಂಶ ಗಮನದಲ್ಲಿರಲಿ: ಚಾಣಕ್ಯ ನೀತಿ ಏನು ಹೇಳುತ್ತದೆ?

ಚಾಣಕ್ಯನ ನೀತಿಶಾಸ್ತ್ರದಲ್ಲಿ ಅನೇಕ ಜೀವನ ಪಾಠಗಳಿವೆ.  ಜೀವನದಲ್ಲಿ ನಮ್ಮ ಏಳ್ಗೆಗಾಗಿ ನಾವು ಏನು ಮಾಡಬೇಕು ಎಂಬುದಕ್ಕೆ ಚಾಣಕ್ಯನ ವಿಧಾನಗಳು ತುಂಬಾ ಸಹಾಯಕವಾಗಿವೆ. ಒಬ್ಬ ವ್ಯಕ್ತಿ ಮನೆ ಕಟ್ಟಬೇಕೆಂದಿದ್ದರೆ ಕೆಲವು ಉಪಾಯಗಳನ್ನು ಅನುಸರಿಸಲು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.

chanakya niti new home triks suh
Author
First Published Jun 27, 2023, 6:31 PM IST | Last Updated Jun 27, 2023, 6:31 PM IST

ಚಾಣಕ್ಯನ ನೀತಿ (chanyakya niti ) ಶಾಸ್ತ್ರದಲ್ಲಿ ಅನೇಕ ಜೀವನ ಪಾಠಗಳಿವೆ.  ಜೀವನದಲ್ಲಿ ನಮ್ಮ ಏಳ್ಗೆಗಾಗಿ ನಾವು ಏನು ಮಾಡಬೇಕು ಎಂಬುದಕ್ಕೆ ಚಾಣಕ್ಯನ ವಿಧಾನಗಳು ತುಂಬಾ ಸಹಾಯಕವಾಗಿವೆ. ಒಬ್ಬ ವ್ಯಕ್ತಿ ಮನೆ ಕಟ್ಟಬೇಕೆಂದಿದ್ದರೆ ಕೆಲವು ಉಪಾಯಗಳನ್ನು ಅನುಸರಿಸಲು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ..

ಆಚಾರ್ಯ ಚಾಣಕ್ಯರು ತಮ್ಮ ಜ್ಞಾನ ಮತ್ತು ನೀತಿಶಾಸ್ತ್ರ (Ethics) ದ ಅನುಭವದ ಆಧಾರದ ಮೇಲೆ ಜೀವನದ ಅನೇಕ ಪಾಠಗಳನ್ನು ವಿವರಿಸಿದ್ದಾರೆ. ಪ್ರತಿಯೊಂದು ಸಂದರ್ಭವನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಸಿದ್ದಾರೆ. ಜೀವನದ ಸಂತೋಷ (happiness)  ಮತ್ತು ದುಃಖದಲ್ಲಿ ಹೇಗೆ ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದ್ದಾರೆ. ಹಾಗೆಯೇ ನಾವು ಹೊಸ ಮನೆ ಖರೀದಿ ಮಾಡುವಾಗ ಏನೆಲ್ಲಾ ವಿಚಾರಗಳನ್ನು ತಿಳಿದಿರಬೇಕು ಎಂದು ಅವರು ವಿವರಿಸಿದ್ದಾರೆ.

ಉತ್ತಮ ಕುಟುಂಬ ಜೀವನಕ್ಕೆ ಉತ್ತಮ ಮನೆ (house) ಅಗತ್ಯ . ಈ ಕನಸನ್ನು ನನಸಾಗಿಸಲು ಜನರು ತಮ್ಮ ಜೀವನವನ್ನು ಕಳೆಯುತ್ತಾರೆ. ಅದಕ್ಕಾಗಿಯೇ ಜನರು ಹೆಚ್ಚು ಜಾಗೃತರಾಗಿದ್ದಾರೆ ಮತ್ತು ಮನೆ ಖರೀದಿಸುವಾಗ ವಿಚಾರಣೆ ಮಾಡುತ್ತಾರೆ. ಅದಕ್ಕಾಗಿಯೇ ಅನೇಕ ವರ್ಷಗಳ ಹಿಂದೆ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಮನೆ ಕಟ್ಟುವ ಅಥವಾ ವಾಸಿಸುವವರಿಗೆ ಪ್ರಯೋಜನ (benefit) ಕಾರಿಯಾದ ಕೆಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ.

ಮೂಲ ಸೌಕರ್ಯ ಪರಿಶೀಲಿಸಿ

ಶ್ರೀಮಂತರು (Rich people) ಮತ್ತು ಬುದ್ಧಿವಂತರು ವಾಸಿಸುವ ಪ್ರದೇಶದಲ್ಲಿ ಮನೆ ತೆಗೆದುಕೊಳ್ಳಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ. ಎಲ್ಲಾ ಆಡಳಿತಾತ್ಮಕ (administrative) ಮತ್ತು ಕಾನೂನು ವಿಷಯಗಳನ್ನು ಪರಿಶೀಲಿಸಿ ಮನೆ ಖರೀದಿ ಮಾಡಬೇಕು.

ಮನೆಯಲ್ಲಿ ಯಾವ ವಸ್ತುಗಳು ಎಲ್ಲಿರಬೇಕು?: ಎಚ್ಚರ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ..!

 

ನೆರೆಹೊರೆಯು ಶ್ರೀಮಂತವಾಗಿರಬೇಕು

ಮನೆ ಕೊಳ್ಳುವಾಗ ನೆರೆಹೊರೆ (neighborhood) ಹೇಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ನಿಮ್ಮ ಬೆಳವಣಿಗೆಗೆ ಅವಕಾಶವಿರುವ ಸ್ಥಳದಲ್ಲಿ ಮನೆ ಇರಬೇಕು. ನೆರೆಹೊರೆಯು ಶ್ರೀಮಂತವಾಗಿದ್ದರೆ, ಅವರು ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಹಣ (money) ದ ಸಮಸ್ಯೆಯನ್ನು ಪರಿಹರಿಸುತ್ತಾರೆ. ನಿಮಗಿಂತ ಬಡವರಿರುವ ಜಾಗದಲ್ಲಿ ಮನೆ ತೆಗೆದುಕೊಳ್ಳಬೇಡಿ.

ವಿದ್ಯಾವಂತ ನೆರೆಹೊರೆಯನ್ನು ಆರಿಸಿ

ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಒಬ್ಬನು ಯಾವಾಗಲೂ ಬುದ್ಧಿವಂತ (intelligent) ಮತ್ತು ಸುಶಿಕ್ಷಿತ ಜನರು ವಾಸಿಸುವ ಸ್ಥಳದಲ್ಲಿ ವಾಸಿಸಬೇಕು. ಇದು ಅನೇಕ ಪ್ರಯೋಜನಗಳನ್ನು ತರುತ್ತದೆ. ಅಗತ್ಯವಿದ್ದಾಗ ಅವರು ಸರಿಯಾದ ಸಲಹೆಯನ್ನು ನೀಡುತ್ತಾರೆ ಎಂಬುದು ದೊಡ್ಡ ಪ್ರಯೋಜನವಾಗಿದೆ. ಮನೆಯ ವಾತಾವರಣವೂ ಜ್ಞಾನದಿಂದ ತುಂಬಿರುತ್ತದೆ. ಕುಟುಂಬವು ಉತ್ತಮ ನೈತಿಕತೆ (Morality) ಯನ್ನು ಹೊಂದಿದೆ ಮತ್ತು ಶಿಕ್ಷಣದ ಪ್ರೀತಿಯನ್ನು ಸೃಷ್ಟಿಸುತ್ತದೆ.

ಭದ್ರತಾ ವ್ಯವಸ್ಥೆಗಳು ಆಧುನಿಕವಾಗಿರಬೇಕು

ಆಚಾರ್ಯ ಚಾಣಕ್ಯರ ಪ್ರಕಾರ, ಮನೆಯನ್ನು ತೆಗೆದುಕೊಳ್ಳುವ ಪ್ರದೇಶವು ಸುರಕ್ಷಿತ (safe) ವಾಗಿರಬೇಕು. ಅಲ್ಲಿನ ಆಡಳಿತಾಧಿಕಾರಿ ಕಟ್ಟುನಿಟ್ಟಾಗಿರಬೇಕು. ಇದು ಕಳ್ಳತನ (theft)  ಮತ್ತು ದರೋಡೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೆ ಯಾವುದೇ ಸಮಸ್ಯೆಗೆ ತಕ್ಷಣವೇ ಸಹಾಯ ಮಾಡಬಹುದು.

Weekly Love Horoscope: ಯಾರಿಗೆ ಒಲಿಯಲಿದೆ ಪ್ರೀತಿ?

 

ಆಸ್ಪತ್ರೆಗಳು ಹತ್ತಿರದಲ್ಲಿರಬೇಕು

ಆಚಾರ್ಯ ಚಾಣಕ್ಯರ ಪ್ರಕಾರ, ಮನೆ ಖರೀದಿಸುವಾಗ ಮೂಲಭೂತ ಅವಶ್ಯಕತೆ (basic requirement) ಗಳಾದ ನೀರು, ಆರೋಗ್ಯ , ಶಿಕ್ಷಣವನ್ನು ನೋಡುವುದು ಅವಶ್ಯಕ . ದೈನಂದಿನ ಜೀವನದಲ್ಲಿ ಮನುಷ್ಯನಿಗೆ ಈ ವಸ್ತುಗಳು ಬೇಕಾಗುತ್ತವೆ. ಮುಖ್ಯವಾಗಿ ಆಸ್ಪತ್ರೆ (Hospital) ಹತ್ತಿರದಲ್ಲಿ ಇರಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ.

Latest Videos
Follow Us:
Download App:
  • android
  • ios