Astro remedies: ಶನಿ, ರಾಹು, ಕೇತು, ಕಾಳಸರ್ಪ- ಎಲ್ಲ ದೋಷಕ್ಕೂ ರಾಮಬಾಣ ಈ ಕಾಳು!
ಹಿಂದೂ ಧರ್ಮದಲ್ಲಿ ಕಪ್ಪು ಎಳ್ಳಿಗೆ ವಿಶೇಷ ಮಹತ್ವವಿದೆ. ಧಾರ್ಮಿಕ ಕಾರ್ಯಗಳ ಜೊತೆಗೆ, ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಕಪ್ಪು ಎಳ್ಳನ್ನು ತರ್ಪಣ ಮತ್ತು ದಾನದಲ್ಲಿ ಬಳಸಲಾಗುತ್ತದೆ. ಈ ಕಪ್ಪು ಎಳ್ಳನ್ನು ಬಳಸಿ ಕಾಳ ಸರ್ಪ ದೋಷ ಸೇರಿದಂತೆ ರಾಹುಕೇತು, ಶನಿಯ ದೋಷಗಳನ್ನು ಕೂಡಾ ತೊಡೆದು ಹಾಕಬಹುದಾಗಿದೆ.
ಹಿಂದೂ ಧರ್ಮದಲ್ಲಿ ಕಪ್ಪು ಎಳ್ಳಿಗೆ ವಿಶೇಷ ಮಹತ್ವವಿದೆ. ಧಾರ್ಮಿಕ ಕಾರ್ಯಗಳಲ್ಲದೆ, ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನದಂದು ತರ್ಪಣ ಮತ್ತು ದಾನದಲ್ಲಿಯೂ ಇದನ್ನು ಬಳಸಲಾಗುತ್ತದೆ. ಎಳ್ಳಿನ ದಾನದ ಮಹತ್ವವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸಂಕ್ರಾಂತಿ ಹಬ್ಬದಲ್ಲಿ ಎಳ್ಳುಬೆಲ್ಲ ಹಂಚಲಾಗುತ್ತದೆ. ಎಳ್ಳುಂಡೆಯನ್ನು ತಯಾರಿಸಿ ತಿನ್ನಲಾಗುತ್ತದೆ. ಅಮಾವಾಸ್ಯೆ, ಹುಣ್ಣಿಮೆಯಲ್ಲೂ ಪಿತೃಗಳಿಗಾಗಿ ಎಳ್ಳಿನಿಂದ ತಯಾರಿಸಿದ ಉಂಡೆ ಇಡಲಾಗುತ್ತದೆ. ಇದಲ್ಲದೆ, ಕಪ್ಪು ಎಳ್ಳನ್ನು ಅನೇಕ ಅದ್ಭುತ ಪರಿಹಾರಗಳಲ್ಲಿ ಬಳಸಲಾಗುತ್ತದೆ. ಎಳ್ಳಿನ ಈ ಕ್ರಮಗಳನ್ನು ಅಳವಡಿಸಿಕೊಂಡರೆ ಮನೆಯಲ್ಲಿ ಸುಖ, ಸಮೃದ್ಧಿ, ಶಾಂತಿ ನೆಲೆಸಬಹುದು. ಎಳ್ಳಿನ ಕೆಲವು ಅದ್ಭುತ ಪರಿಹಾರಗಳ ಬಗ್ಗೆ ತಿಳಿಯೋಣ.
ಕಪ್ಪು ಎಳ್ಳಿಗೆ ಜ್ಯೋತಿಷ್ಯ ಪರಿಹಾರಗಳು
ಜಾತಕದಲ್ಲಿ ಶನಿ, ರಾಹು ಮತ್ತು ಕೇತುಗಳ ಅಶುಭವಿದ್ದರೆ ಜೀವನದಲ್ಲಿ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕರಿ ಎಳ್ಳಿಗೆ ಸಂಬಂಧಿಸಿದ ಕೆಲವು ಜ್ಯೋತಿಷ್ಯ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಅವುಗಳ ಪರಿಣಾಮವನ್ನು ಬಹಳ ಬೇಗ ಕಡಿಮೆ ಮಾಡಬಹುದು.
ಹಣಕಾಸಿನ ತೊಂದರೆಗಳನ್ನು ತೊಡೆದು ಹಾಕಲು
ಪ್ರತಿ ದಿನ ಒಂದು ಪಾತ್ರೆಯಲ್ಲಿ ಶುದ್ಧ ನೀರನ್ನು ತುಂಬಿಸಿ ಮತ್ತು ಅದರಲ್ಲಿ ಕಪ್ಪು ಎಳ್ಳನ್ನು ಹಾಕಿ. ಈಗ 'ಓಂ ನಮಃ ಶಿವಾಯ' ಎಂಬ ಮಂತ್ರವನ್ನು ಪಠಿಸುತ್ತಾ ಶಿವಲಿಂಗದ ಮೇಲೆ ಈ ನೀರನ್ನು ಅಭಿಷೇಕ ಮಾಡಿ. ಪ್ರತಿದಿನ ಈ ಪರಿಹಾರವನ್ನು ಮಾಡುವುದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುವುದಲ್ಲದೆ, ವೃತ್ತಿಯಲ್ಲಿ ಬರುವ ಅಡೆತಡೆಗಳು ಸಹ ನಿವಾರಣೆಯಾಗುತ್ತವೆ. ಇದು ಕಾಳ ಸರ್ಪ ಯೋಗ ರಾಹು, ಕೇತು ಮತ್ತು ಶನಿ ದೋಷಗಳ ದುಷ್ಪರಿಣಾಮಗಳನ್ನು ತೊಡೆದು ಹಾಕಲು ಸಹ ಪರಿಣಾಮಕಾರಿಯಾಗಿದೆ.
ವೃಷಭ ರಾಶಿಯ ಪುರುಷ ಮತ್ತು ಮಹಿಳೆ ನಡುವಿನ Compatibility ಹೇಗಿದೆ ನೋಡಿ!
ಶನಿವಾರದಂದು ಕಪ್ಪು ಎಳ್ಳು ಮತ್ತು ಕರಿ ಎಳ್ಳಿನ ಉಂಡೆಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ಮಾಡಿ. ಇದನ್ನು ನಿಯಮಿತವಾಗಿ ಕನಿಷ್ಠ 11-21 ಶನಿವಾರದಂದು ಮಾಡಿ. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೀರ್ಘಾವಧಿಯವರೆಗೆ ಕೊನೆಗೊಳ್ಳುತ್ತವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ.
ಶನಿದೋಷ ನಿವಾರಣೆಗೆ
ಶನಿ ದೇವರ ಆಶೀರ್ವಾದ ಪಡೆಯಲು ಮತ್ತು ಜೀವನದಲ್ಲಿ ಒಟ್ಟಾರೆ ಯಶಸ್ಸನ್ನು ಪಡೆಯಲು ಶನಿವಾರದಂದು ಇರುವೆಗಳಿಗೆ ಕಪ್ಪು ಎಳ್ಳು, ಹಿಟ್ಟು ಮತ್ತು ಸಕ್ಕರೆಯನ್ನು ಅರ್ಪಿಸಿ.
ಕೆಲಸದಲ್ಲಿ ಯಶಸ್ಸಿಗೆ
ನಿಮ್ಮ ಕೆಲಸದಲ್ಲಿ ಏನಾದರೂ ಅಡೆತಡೆಗಳಿದ್ದರೆ ಮತ್ತು ಯಶಸ್ಸನ್ನು ಸಾಧಿಸಲಾಗದಿದ್ದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಗತ್ಯ ಕೆಲಸಕ್ಕಾಗಿ ಹೊರಗೆ ಹೋಗುವಾಗ, ಒಂದು ಹಿಡಿ ಎಳ್ಳನ್ನು ತೆಗೆದುಕೊಂಡು ಹೋಗಿ ದಾರಿಯಲ್ಲಿ ಎಲ್ಲೋ ಹರಿಯುವ ನೀರಿನಲ್ಲಿ ಎಸೆಯಿರಿ.
ಬಾಲ್ಡ್ ಆಗಲು ಗ್ರಹ ದೋಷ ಕಾರಣವೇ? ಜ್ಯೋತಿಷ್ಯ ನೀಡೋ ಪರಿಹಾರವೇನು?
ಗೃಹ ಬಾಧೆ ಹೋಗಲಾಡಿಸಲು
ಶನಿದೇವನ ಕೃಪೆಯಿಂದ ಜೀವನದಲ್ಲಿ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಅವನು ವಕ್ರ ಕಣ್ಣು ಹೊಂದಿದ್ದರೆ, ಜನರು ಎಲ್ಲಾ ಕಡೆಯಿಂದ ತೊಂದರೆಗಳಿಂದ ಸುತ್ತುವರೆದಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನ ಆಶೀರ್ವಾದ ಪಡೆಯಲು ಪ್ರತಿ ಶನಿವಾರದಂದು ಕರಿ ಎಳ್ಳನ್ನು ಹಾಲಿನಲ್ಲಿ ಬೆರೆಸಿ ಅಶ್ವತ್ಥ ಮರದ ಬೇರಿಗೆ ಅರ್ಪಿಸಿ. ಈ ಪರಿಹಾರವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ಪರಸ್ಪರ ಸಂಬಂಧಗಳು ಸಿಹಿಯಾಗಿರುತ್ತವೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.