Asianet Suvarna News Asianet Suvarna News

ದಾಂಪತ್ಯದಲ್ಲಿ ಸುಖ ಇಲ್ಲವೇ? ಶುಕ್ರವಾರ ಈ ಪೂಜೆ ಮಾಡಿ, ನೆಮ್ಮದಿ ಕಾಣ್ಬಹುದು ನೋಡಿ

ಜೀವನ ಒಂದೇ ರೀತಿ ಸಾಗಲು ಸಾಧ್ಯವಿಲ್ಲ. ಭಿನ್ನಾಭಿಪ್ರಾಯಗಳು ಸಾಮಾನ್ಯ. ದಾಂಪತ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಮಾಮೂಲಿ. ಆದ್ರೆ ಗಲಾಟೆ ಸಂಬಂಧ ಮುರಿಯುವ ಹಂತಕ್ಕೆ ಹೋದಾಗ ನೀವು ಗ್ರಹ, ಜಾತಕ, ಜ್ಯೋತಿಷ್ಯದ ಬಗ್ಗೆಯೂ ಗಮನ ನೀಡ್ಬೇಕಾಗುತ್ತದೆ.
 

Astrology Remedies For Friday
Author
First Published Jan 10, 2023, 3:26 PM IST

ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡ ಪ್ರೀತಿಯನ್ನು ಬಯಸ್ತಾನೆ. ಇಂತಹ ಪ್ರೀತಿ ಕುಟುಂಬ, ಸ್ನೇಹಿತರು ಹಾಗೂ ಪ್ರೇಮಿಯಿಂದ ಸಿಗುತ್ತೆ. ಆದ್ರೆ ಕೆಲವೊಮ್ಮೆ ಎಷ್ಟೇ ಪ್ರೀತಿ ಇದ್ರೂ ಯಾವುದೋ ಚಿಕ್ಕ ಪುಟ್ಟ ಸಮಸ್ಯೆಗಳಿಂದ ಸಂಬಂಧ ಮತ್ತು ವೈವಾಹಿಕ ಜೀವದಲ್ಲಿ ಬಿರುಕು ಮೂಡುತ್ತೆ. ನಾವು ಆಡುವ ಮಾತು ಅಥವಾ ನಮ್ಮ ಕೆಲಸ, ವರ್ತನೆಗಳಿಂದ ನಮ್ಮ ಅರಿವಿಗೆ ಬರುವ ಮೊದಲೇ ಸಂಬಂಧಗಳು ದೂರವಾಗುತ್ತದೆ. ಕೆಲವು ಬಾರಿ ನಾವು ಎಷ್ಟೇ ಪ್ರಯತ್ನಪಟ್ಟರೂ ಮುರಿದುಹೋದ ಸಂಬಂಧವನ್ನು ಒಂದುಗೂಡಿಸಲು ಸಾಧ್ಯವಾಗುವುದಿಲ್ಲ.

ಇಂತಹ ಮುರಿದು ಹೋದ ಪ್ರೇಮ (Love) ಸಂಬಂಧಗಳು ಮತ್ತೆ ಚಿಗುರುವಂತೆ ಮಾಡುವ ಕೆಲವು ಸರಳ ಉಪಾಯಗಳು ಜ್ಯೋತಿಷ್ಯ ಶಾಸ್ತ್ರದಲ್ಲಿವೆ. ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಶುಕ್ರ ಗ್ರಹ (Planet) ಕ್ಕೆ ವಿಶೇಷ ಸ್ಥಾನವಿದೆ. ಒಬ್ಬ ವ್ಯಕ್ತಿಯ ಜೀವನದ ಸುಖ ಮತ್ತು ದುಃಖದ ಮೇಲೆ ಈ ಗ್ರಹ ಹೆಚ್ಚು ಪ್ರಭಾವ ಬೀರುತ್ತದೆ. ಹಾಗಾಗಿ, ಶುಕ್ರವಾರ (Friday) ದ ದಿನ ನೀವು ಕೆಲವು ಕೆಲಸಗಳನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ನಾವಿಂದು ದಾಂಪತ್ಯ ಗಟ್ಟಿಯಾಗಲು ಶುಕ್ರವಾರ ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.

Indian Culture : ಹಿರಿಯರ ಪಾದ ಸ್ಪರ್ಶದಿಂದ ಇದೆ ಈ ಲಾಭ

ಶುಕ್ರವಾರ ಮಾಡಿ ಈ ಕೆಲಸ : 
ಶುಕ್ರವಾರ ಹೀಗಿರಲಿ ನಿಮ್ಮ ಸ್ನಾನ :
ನೀವು ಸ್ನಾನ ಮಾಡುವ ನೀರಿಗೆ ಬಿಳಿ ಬಣ್ಣದ ಹೂವುಗಳನ್ನು ಹಾಕಿ ಆ ನೀರಿನಿಂದ ಸ್ನಾನ ಮಾಡಿ. ಬಿಳಿ ಬಣ್ಣ ಶುಕ್ರ ದೇವನಿಗೆ ಬಹಳ ಪ್ರಿಯವಾದ ಬಣ್ಣ. ಈ ಬಣ್ಣದ ಹೂವಿನ ನೀರಿನಿಂದ ನೀವು ಸ್ನಾನ ಮಾಡಿದ್ರೆ ನಿಮ್ಮ ದೋಷಗಳು ನಿವಾರಣೆಯಾಗುತ್ತವೆ. ನಿಮ್ಮ ವೈವಾಹಿಕ ಜೀವನದಲ್ಲಿ ಬಂದಿರುವ ಕಷ್ಟಗಳು ದೂರವಾಗುತ್ತವೆ.

ಶುಕ್ರವಾರ ಮಾಡಿ ಈ ಜಪ : ಶುಕ್ರ ಗ್ರಹದ ದೋಷವಿರುವವರು ಶುಕ್ರವಾರದಂದು ದ್ರಾಂ ದ್ರೀಂ ದ್ರೈಂ ಸಃ ಶುಕ್ರಾಯ ನಮಃ ಎಂಬ ಮಂತ್ರವನ್ನು 108 ಬಾರಿ ಹೇಳಬೇಕು. ಈ ಮಂತ್ರದ ಜಪದಿಂದ ನಿಮ್ಮ ಶರೀರದ ಸೌಂದರ್ಯ ಹೆಚ್ಚುತ್ತದೆ. ವ್ಯವಹಾರದಲ್ಲಿ ಹಾಗೂ ಸಂಬಂಧದಲ್ಲಿ ಸುಧಾರಣೆ ಕಂಡುಬರುತ್ತದೆ. 

ಶುಕ್ರವಾರ ದಾನ ಮಾಡಿದ್ರೆ ಫಲ ಹೆಚ್ಚು : ದಾಂಪತ್ಯದಲ್ಲಿ ಜಗಳವಾದಾಗ ಅಥವಾ ಇಬ್ಬರ ನಡುವೆ ಮಾತು ಮುರಿದಾಗ ಶುಕ್ರವಾರದ ದಿನ ಬಡವರಿಗೆ ಅಥವಾ ತೀರ ಅವಶ್ಯವಿರುವವರಿಗೆ ಬೆಳ್ಳಿ, ಅಕ್ಕಿ, ಕಲ್ಲುಸಕ್ಕರೆ, ಬಿಳಿ ವಸ್ತ್ರ, ಮೊಸರು, ಬಿಳಿ ಚಂದನ ಇವುಗಳನ್ನು ದಾನ ಮಾಡಬೇಕು. ಇದರಿಂದ ನಿಮ್ಮ ಮುರಿದ ಸಂಬಂಧ ಮತ್ತೆ ಕೂಡುತ್ತದೆ. 

ಶುಕ್ರವಾರ ಈ ವಸ್ತು ಖರೀದಿಸಿ ನೋಡಿ : ಶುಕ್ರನಿಗೆ ಪರಿಮಳಯುಕ್ತ ವಸ್ತುಗಳೆಂದರೆ ಬಹಳ ಪ್ರೀತಿ. ನಿಮ್ಮ ವೈವಾಹಿಕ ಜೀವನದಲ್ಲಿ ಬಹಳ ಏರುಪೇರುಗಳು ಉಂಟಾಗುತ್ತಿದ್ದಲ್ಲಿ ನೀವು ಶುಕ್ರವಾರದ ದಿನ  ಸುಗಂಧದ್ರವ್ಯಗಳನ್ನು ಖರೀದಿಸಬೇಕು. ಗಂಡ ಹೆಂಡತಿ ಇಬ್ಬರೂ ಒಂದೇ ಸುಗಂಧ ದ್ರವ್ಯವನ್ನು ಬಳಸುವುದರಿಂದ ಪರಸ್ಪರ ಪ್ರೀತಿ ಹೆಚ್ಚುತ್ತದೆ.

ಮಲಗುವ ಕೋಣೆಯನ್ನು ಹೀಗಿಡಿ : ಬಹಳ ದಿನಗಳಿಂದ ಗಂಡ ಹೆಂಡತಿಯ ನಡುವೆ ಜಗಳವಾಗುತ್ತಿದ್ದಲ್ಲಿ, ನಿಮ್ಮ ಕೋಣೆಯಲ್ಲಿ ಪ್ರೇಮ ಪಕ್ಷಿಗಳಿರುವ ಫೋಟೋವನ್ನು ಇಡಿ. ಇದರಿಂದ ದಾಂಪತ್ಯದಲ್ಲಿ ಪ್ರೀತಿ ಮೂಡುತ್ತದೆ. ಈ ಕೆಲಸವನ್ನು ನೀವು ಶುಕ್ರವಾರ ಮಾಡ್ಬೇಕು. 

ಈ ದೇವಾಲಯಕ್ಕೆ ಹೋಗ್ಬೇಕಂದ್ರೆ ಪುರುಷರು ಮಹಿಳೆಯರಂತೆ ವೇಷ ಧರಿಸ್ಲೇಬೇಕು!

ಹೀಗೆ ಮಾಡಿದ್ರೂ ಸಂಸಾರದಲ್ಲಿ ಹೆಚ್ಚುತ್ತೆ ಪ್ರೀತಿ : ಶುಕ್ರವಾರದ ದಿನ ಸಂಜೆ ಹಸುವಿನ ತುಪ್ಪದ ದೀಪವನ್ನು ಹಚ್ಚಿ ಅದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಈ ದೀಪಕ್ಕೆ ಸ್ವಲ್ಪ ಕೇಸರಿ ದಳಗಳನ್ನು ಕೂಡ ಹಾಕಿ. ದೀಪ ಹಚ್ಚಲು ಬಿಳಿ ಹತ್ತಿಯ ದಾರದ ಬದಲು ಕೆಂಪು ಹತ್ತಿಯ ದಾರವನ್ನು ಬಳಸಿದರೆ ಉತ್ತಮ. ಕೆಂಪು ದಾರ ನಿಮ್ಮಲ್ಲಿ ಸಕಾರಾತ್ಮ ಶಕ್ತಿಯನ್ನು ಹೆಚ್ಚಿಸುತ್ತದೆ.  
 

Follow Us:
Download App:
  • android
  • ios