Asianet Suvarna News Asianet Suvarna News

IndependenceDay: ನಾವು ನಮಿಸುವ ರಾಷ್ಟ್ರಧ್ವಜದ ಜನಕನ ಬಗ್ಗೆ ನಿಮಗೆ ಗೊತ್ತೇ?

ಪ್ರತೀ ವರ್ಷ ಆಗಸ್ಟ್ ಹದಿನೈದರಂದು, ಗಣರಾಜ್ಯ ದಿನದಂದು ನಾವು ಭಕ್ತಿ ಪ್ರೀತಿಗಳಿಂದ ನಮಿಸುವ ರಾಷ್ಟ್ರಧ್ವಜದ ವಿನ್ಯಾಸಕರು ಯಾರು ನಿಮಗೆ ಗೊತ್ತೆ? ಬನ್ನಿ ಅವರ ಬಗ್ಗೆ ತಿಳಿಯೋಣ.

 

 

Know about creator of India tricolor Pingali Venkaiah
Author
Bengaluru, First Published Aug 7, 2021, 4:32 PM IST

ನಾವಿಂದು ಹೆಮ್ಮೆಯಿಂದ ಗೌರವದಿಂದ ಸೆಲ್ಯೂಟ್ ಮಾಡುವ ಭಾರತ ದೇಶದ ಹೆಗ್ಗುರುತಾಗಿರುವ ತ್ರಿವರ್ಣ ಧ್ವಜದ ಪರಿಕಲ್ಪಕರು,ವಿನ್ಯಾಸಿಗರು ಪಿಂಗಳಿ ವೆಂಕಯ್ಯ ಅವರು. ಪಿಂಗಳಿ ವೆಂಕಯ್ಯ ಅವರು ಭಾರತ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು ಮತ್ತು ಭಾರತದೇಶದ ಧ್ವಜವನ್ನು ಸ್ಥೂಲವಾಗಿ ಮೊದಲು ವಿನ್ಯಾಸ ಮಾಡಿದವರು. ಇವರನ್ನು ಪತ್ತಿ ವೆಂಕಯ್ಯ ಎಂದೂ ಕರೆಯುತ್ತಿದ್ದರು. ಅಪ್ಪಟ ಗಾಂಧಿವಾದಿಯಾಗಿದ್ದ ವೆಂಕಯ್ಯನವರು ಆಗಸ್ಟ್ 2, 1876ನೇ ಇಸವಿಯಲ್ಲಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದರು.

ಮಿಸ್ಟೇಕ್ ಮಾಡ್ಕೋಬೇಡಿ, ಈತನಿಗೆ ಮೂವತ್ತಲ್ಲ, ಕೇವಲ 72 ವರ್ಷ!

ಗಾಂಧೀಜಿ ಮತ್ತು ವೆಂಕಯ್ಯನವರ ಭೇಟಿಗೆ ಸಾಕ್ಷಿಯಾಗಿದ್ದು ಅದೇ ಆಫ್ರಿಕಾ. 19ನೇ ವಯಸ್ಸಿನಲ್ಲಿ, ಪಿಂಗಳಿ ವೆಂಕಯ್ಯ ಅವರು ಬ್ರಿಟಿಷ್ ಸೈನ್ಯಕ್ಕಾಗಿ ಹೋರಾಡಲು ದಕ್ಷಿಣ ಆಫ್ರಿಕಾಕ್ಕೆ ಹೋದರು, ಏಕೆಂದರೆ ಭಾರತವು ಅವರ ಆಳ್ವಿಕೆಯಲ್ಲಿತ್ತು. ಆಫ್ರಿಕಾದ ಆಂಗ್ಲೋ ಬೋಯರ್‌ ಯುದ್ಧದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಬ್ರಿಟಿಷ್ ಸೈನ್ಯದ ಸೈನಿಕರಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ, ಬ್ರಿಟಿಷ್ ಸೇನಾ ಅಧಿಕಾರಿಯು ಗ್ರೇಟ್ ಬ್ರಿಟನ್ ಆಳಿದ ದೇಶಗಳ ಎಲ್ಲ ಸೈನಿಕರನ್ನು ಯೂನಿಯನ್ ಜ್ಯಾಕ್ (ಬ್ರಿಟಿಷ್ ಧ್ವಜ) ಹಿಡಿದು ವಂದಿಸಿದರು. ಪಿಂಗಳಿ ವೆಂಕಯ್ಯನಿಗೆ ಅದು ಇಷ್ಟವಾಗಲಿಲ್ಲ ಆ ದಿನವೇ ಆತ ಭಾರತಕ್ಕಾಗಿ ತನ್ನದೇ ಆದ ಧ್ವಜವನ್ನು ಮಾಡುವುದಾಗಿ ನಿರ್ಧರಿಸಿದರು.

Know about creator of India tricolor Pingali Venkaiah

ಭಾರತಕ್ಕೆ ಮರಳಿದ ನಂತರ ಹತ್ತಿ ಕೃಷಿಯತ್ತ ಹೆಚ್ಚು ಗಮನ ಹರಿಸಿದ ಇವರು ಅದರಲ್ಲೇ ಸಾಕಷ್ಟು ಪ್ರಯೋಗಗಳನ್ನು ಮಾಡುತಿದ್ದರು. ಆಂಧ್ರಪ್ರದೇಶದ ಮಚಲೀಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ದುಡಿಯುವಾಗಲೇ ಸಂಸ್ಕೃತ, ಉರ್ದು, ಜಪಾನಿ ಭಾಷೆಗಳನ್ನು ಕಲಿಯಲು ಬಹಳಷ್ಟು ಆಸಕ್ತರಾಗಿದ್ದರು. ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು 5 ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣಧ್ವಜವನ್ನು ವಿನ್ಯಾಸಗೊಳಿಸಿದರು. ಅದರಲ್ಲಿ ಸ್ವದೇಶಿ ಚಳವಳಿಗೆ ಪೂರಕವಾದ ಚರಕಾದ ಚಿತ್ರವೂ ಇತ್ತು. 1931 ಆಗಸ್ಟ್ 6 ರಂದು ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೇಸರಿ, ಬಿಳಿ, ಹಸಿರು ಧ್ವಜದ ಮಧ್ಯೆ ಚರಕವಿರುವ ಧ್ವಜವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು.

ಎಲ್ಲರ ಮನಸ್ಸು ಗೆದ್ದ 99ರ ಅಜ್ಜಿ; ಸೌಂದರ್ಯ ವರ್ಧಕ ವಸ್ತುವಿಗೆ ಇವರೇ ಬ್ರ್ಯಾಂಡ್ ಮಾಡೆಲ್!

ಪಿಂಗಳಿ ವೆಂಕಯ್ಯ ಅವರು ವಿನ್ಯಾಸಗೊಳಿಸಿದ ಧ್ವಜವನ್ನೇ ಜುಲೈ 22, 1947ರಲ್ಲಿ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು. ಜುಲೈ 14, 1947ರಂದು ಧ್ವಜ ಸಮಿತಿಯು ಭೇಟಿಯಾದಾಗ, ಚರಕಾ ಎರಡೂ ಬದಿಗಳಿಂದ ನೋಡಿದಾಗ ಒಂದೇ ರೀತಿಯಾಗಿ ಇರುವುದಿಲ್ಲ, ಚೆನ್ನಾಗಿ ಕಾಣುವುದಿಲ್ಲ ಎಂಬ ಕಾರಣದಿಂದ ಅಶೋಕ ಚಕ್ರವನ್ನು ಬಳಸಲು ನಿರ್ಧರಿಸಲಾಯಿತು (24 ಕಡ್ಡಿಗಳನ್ನು ಹೊಂದಿರುವ ಚಕ್ರ). 24 ಕಡ್ಡಿಗಳು ಸ್ವಾತಂತ್ರ್ಯದ ಸಮಯದಲ್ಲಿ ಇದ್ದ ದೇಶದ 24 ರಾಜ್ಯಗಳನ್ನು ಸೂಚಿಸಿವೆ.
 

Know about creator of India tricolor Pingali Venkaiah

1963 ರ ಜುಲೈ 4ರಂದು ಇಹಲೋಕ ತ್ಯಜಿಸಿದ ಪಿಂಗಳಿ ಅವರ ಗೌರವ ಸ್ಮರಣಾರ್ಥ 2009ರಲ್ಲಿ ಇವರ ಭಾವಚಿತ್ರವನ್ನು ಹೊಂದಿದ ಸ್ಟಾಂಪ್ ಅನ್ನು ಬಿಡುಗಡೆ ಮಾಡಲಾಗಿತ್ತು. ಜಲಂಧರ್‌ನ ಶಿಕ್ಷಣ ತಜ್ಞ ಲಾಲಾ ಹಂಸರಾಜ್ ಅವರು ಕೆಂಪು ಹಸಿರು ವಿನ್ಯಾಸದ ನಂತರ ಆಯ್ಕೆಯಾದ ತ್ರಿವರ್ಣ ಧ್ವಜದಲ್ಲಿ ಚರಕದ ಬದಲಾಗಿ ಅಶೋಕ ಚಕ್ರವನ್ನು ಪರಿಗಣಿಸಲು ಸೂಚಿಸಿದ ಸರ್ವಪಳ್ಳಿ ರಾಧಾಕೃಷ್ಣನ್ ತ್ರಿವರ್ಣಕ್ಕೆ ಹೊಸ ಅರ್ಥ ಕಲ್ಪಿಸಿದರು. ತ್ರಿವರ್ಣ ಧ್ವಜದಲ್ಲಿರುವ ಕೇಸರಿ ತ್ಯಾಗ ಮತ್ತು ಬಲಿದಾನ, ಬಿಳಿ ಸತ್ಯ, ಶಾಂತಿ ಮತ್ತು ಶುಭ್ರತೆ, ಹಸಿರು ಸಮೃದ್ಧಿ ಸೌಹಾರ್ದತೆ, ಅಶೋಕ ಚಕ್ರ ನ್ಯಾಯ ಧರ್ಮದ ಸಂಕೇತವಾಗಿದೆ.

34 ವರ್ಷದ ಹೋರಾಟ..ಕೇರಳದ 59ರ ಪತಿ 55ರ ಪತ್ನಿಗೆ ತ್ರಿವಳಿ ಮಕ್ಕಳು!
 

Follow Us:
Download App:
  • android
  • ios