Asianet Suvarna News Asianet Suvarna News

ರೆಬಲ್ ಸ್ಟಾರ್ ಅಂಬರೀಶ್‌ ಯಶ್‌ಗೆ ದಮ್ಮಯ್ಯ ಅಂದಿದ್ರಂತೆ! ಯಾಕೆ..

ಶುಕ್ರವಾರ ಮಧ್ಯಾಹ್ನ ಕೆ.ಜಿ.ಎಫ್. ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ-ಮಲಯಾಳಂ ಟ್ರೈಲರ್ ಹೊಂಬಾಳೆ ಪ್ರೊಡಕ್ಷನ್ ಬಿಡುಗಡೆ ಮಾಡಿದರೆ, ವಿಶಾಲ್ ಫಿಲಂ ಫ್ಯಾಕ್ಟರಿಯಿಂದ ತಮಿಳು ಟ್ರೈಲರ್ ಲೋಕಾರ್ಪಣೆಯಾಗಿದೆ. ವರಾಹಿ ಪ್ರೊಡಕ್ಷನ್ ತೆಲುಗು A A ಫಿಲಂಸ್ ಹಿಂದಿ ಟ್ರೈಲರ್ ಅನ್ನ ಬಿಡುಗಡೆ ಮಾಡಿದೆ.

watch yash and srinidhi shetty starrer kgf traile launch rebel star Ambareesh speech
Author
Bengaluru, First Published Nov 9, 2018, 4:49 PM IST

ಯಶ್ ಬೆನ್ನೆಲುಬಾಗಿ ಎಲ್ಲಾ ಭಾಷೆಯವರು ನಿಂತಿದ್ದಾರೆ. ಕನ್ನಡ ಮಾರ್ಕೆಟ್ ಅಂದ್ರೆ ಚಿಕ್ಕ ಮಾರುಕಟ್ಟೆ. ಆದ್ರೆ ಕೆಜಿಎಫ್ ಹೊಸ ಭರವಸೆ ಮೂಡಿಸಿದೆ. ಈಗಲೂ ಕನ್ನಡ ಚಿತ್ರರಂಗ ಹೋರಾಟ ನಡೆಸುತ್ತಿದೆ ಎಂಬ ಅಭಿಪ್ರಾಯವೂ ರೆಬಲ್ ಬಾಯಲ್ಲಿ ಬಂತು.

ಕೆಜಿಎಫ್ ಬರೀ ಕರ್ನಾಟಕಕ್ಕೆ ಮಾತ್ರವಲ್ಲ.  ಇಡೀ ಪ್ರಪಂಚ ಈ ಸಿನಿಮಾವನ್ನ ಗುರುತಿಸುತ್ತದೆ. ಸಿನಿಮಾ ಮಾಡುವಾಗ ಟೈಟಲ್ ಗಳಿಗೆ ಅರ್ಥ ಇರುತ್ತಿತ್ತು. ಈಗ ಅದು ಬದಲಾಗಿದೆ.ಕೆಜಿಎಫ್ ಅಂದ್ರೆ ಗೋಲ್ಡ್ ಅಂತ ಮನಸಿಗೆ ಬರುತ್ತೆ.ಆದ್ರೆ ಟ್ರೇಲರ್ ನೋಡಿದ ಮೇಲೆ ನನಗೆ ಅರ್ಥ ಆಗಿದೆ. ಕುತೂಹಲ ಹುಟ್ಟಿಸಿವಂತ ಸಿನಿಮಾ ಇದಾಗಿದ್ದು ಯಶ್ ಶ್ರಮ ಮೆಚ್ಚಬೇಕು ಎಂದು ಹೇಳಿದರು.

ಹೊರಬಂತು ಬಹುನಿರೀಕ್ಷಿತ ಕೆಜಿಎಫ್ ಟ್ರೈಲರ್

ಯಶ್ ಗಡ್ಡ 2 ವರ್ಷ ಬಿಟ್ಟಿದ್ದರು.  ಹನಿಮೂನ್ ಹೋಗುವಾಗಲೂ ,ಮನೆಯಲ್ಲಿ ಮಲಗುವಾಗಲೂ ಅವರು ಗಡ್ಡ ತೆಗೆಯಲಿಲ್ಲ. ನಾನು ಗಡ್ಡ ತೆಗಿ ಎಂದು ದಮ್ಮಯ್ಯ ಎಂದಿದ್ದೆ.  ಇಂತ ದೊಡ್ಡ ಸಿನಿಮಾವನ್ನ ಪರದೆ ಮೇಲೆ ನೋಡಲು ಕನ್ನಡಿಗನಾಗಿ ಹೆಮ್ಮೆ ಆಗ್ತಿದೆ. ಎಲ್ಲಾ ಕಡೆ ತಮಿಳು ತೆಲುಗು ಇದೆ. ಈಗಲು ನಾವು ಕನ್ನಡ ಸಿನಿಮಾಗಳಿಗಾಗಿ ಫೈಟ್ ಮಾಡುತ್ತಿದ್ದೇವೆ ಎಂದು ವಾಸ್ತವಿಕತೆ ತೆರೆದಿಟ್ಟರು.

ಶಿವಣ್ಣ ವಿಶ್:  ವೀಡಿಯೊ ಬೈಟ್ ಮೂಲಕ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೆಜಿಎಫ್ ಗೆ ವಿಶ್ ಮಾಡಿದರು. ನಾನು ಆಸ್ಟ್ರೇಲಿಯಾದಲ್ಲಿ ಇದ್ದೇನೆ. ಬರಲು ಸಾಧ್ಯವಾಗಲಿಲ್ಲ. ಈ ಸಿನಿಮಾ ದೇಶಾದ್ಯಂತ ಯಶಸ್ಸು ಕಾಣಬೇಕು ಎಂದು ಶಿವರಾಜ್ ಕುಮಾರ್ ಹಾರೈಸಿದರು.

Follow Us:
Download App:
  • android
  • ios