Asianet Suvarna News Asianet Suvarna News

ನಟಿ ಅತಿಥಿ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ನಟ ವಿಶಾಲ್ ಹೇಳಿದ್ದು ಹೀಗೆ..

vishal speaks about athithi suicide attempt

ಚೆನ್ನೈ(ಅ.06): ನಿರ್ದೇಶಕನ ಲೈಂಗಿಕ ಕಿರುಕುಳದಿಂದ ಬೇಸತ್ತ ಮಲೆಯಾಳಿ ನಟಿ ಅತಿಥಿ ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಚಿತ್ರೋದ್ಯಮದ ಹುಳುಕನ್ನ ಈ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿತ್ತು. ಅಂದಹಾಗೆ, ಕಿರುಕುಳಕ್ಕೊಳಗಾದ ನಟಿಗೆ ಅಷ್ಟಾಗಿ ಬೆಂಬಲ ಸಿಗಲಿಲ್ಲ ಎಂಬುದೂ ಕಟು ಸತ್ಯ. ಪ್ರಕರಣ ಕುರಿತಂತೆ ತಮಿಳು ಚಿತ್ರೋದ್ಯಮ ನಾಡಿಗರ್ ಸಂಗಂನ ಪ್ರಮುಖರಲ್ಲೊಬ್ಬರಾದ ನಟ ವಿಶಾಲ್ ಮಾತನಾಡಿದ್ದಾರೆ.

`ನಿರ್ದೇಶಕ ಸೆಲ್ವ ಕಣ್ಣನ್`ನಿಂದ ಲೈಂಗಿಕ ಕಿರುಕುಳವಾಗುತ್ತಿರುವ ಬಗ್ಗೆ ಅತಿಥಿ ನನ್ನ ಬಳಿ ಮೊದಲೇ ಹೇಳಿಕೊಂಡಿದ್ದರು. ನಮ್ಮ ಸಂಘಟನೆ ಮೂಲಕ ಆಕೆಗೆ ನೆರವು ನೀಡಲು ಸಾಧ್ಯವಾಗಲಿಲ್ಲ. ಸಹೋದರನ ಜೊತೆ ಕಚೇರಿಗೆ ಬಂದಿದ್ದ ಅತಿಥಿ ನಿರ್ದೇಶಕನ ಟಾರ್ಚರ್ ಬಗ್ಗೆ ಹೇಳಿಕೊಂಡಿದ್ದರು. ಅತಿಥಿ ಪೇಯಿಂಗ್ ಗೆಸ್ಟ್`ನಲ್ಲಿದ್ದುದರಿಂದ ಯಾವಾಗಲೂ ಜೊತೆಯಲ್ಲಿ ಯಾರಾದರೂ ಇರುತ್ತಿದ್ದರು. ಆದರೆ, ಆ ದಿನ ಒಂಟಿಯಾಗಿದ್ದರಿಂದ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎಂದು ನಾಡಿಗರ್ ಸಂಗಂನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ನಟ ವಿಶಾಲ್ ಹೇಳಿದ್ಧಾರೆ.

ಮುಂದಿನ ಕೆಲ ದಿನಗಳಲ್ಲಿ ನಿರ್ದೇಶಕನನ್ನೂ ಕರೆಸಿ ವಿವರಣೆ ಪಡೆಯುತ್ತೇವೆ. ಸಂಘಟನೆ ಹೊರಗಡೆಯಿಂದ ಆಕೆಗೆ ನೆರವು ನೀಡುವ ಬಗ್ಗೆ ಚಿಂತಿಸುತ್ತಿದ್ದೇನೆ ಎಂದು ವಿಶಾಲ್ ಹೇಳಿದ್ದಾರೆ.