. ಕುಮಾರ್ ಎಂಬ ಅಭಿಮಾನಿಯೊಬ್ಬ ಅಂಬರೀಶ್ ಅವರಿಗೆ ಹೇಳಿ ದರ್ಶನ್ ಮತ್ತು ಸುದೀಪ್​ ನಡುವಿನ ಜಗಳವನ್ನು ಪರಿಹರಿಸುವಂತೆ ಕೇಳಿದ್ದಾನೆ.

ಬೆಂಗಳೂರು(ಮಾ.13): ನಟ ಸುದೀಪ್​ ಮತ್ತು ದರ್ಶನ್​ ನಡುವಿನ ಗಲಾಟೆ ಬಗ್ಗೆ ಅಭಿಮಾನಿ ಕೊಟ್ಟ ಸಲಹೆಗೆ ನಟಿ ಸುಮಲತಾ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕುಮಾರ್ ಎಂಬ ಅಭಿಮಾನಿಯೊಬ್ಬ ಅಂಬರೀಶ್ ಅವರಿಗೆ ಹೇಳಿ ದರ್ಶನ್ ಮತ್ತು ಸುದೀಪ್​ ನಡುವಿನ ಜಗಳವನ್ನು ಪರಿಹರಿಸುವಂತೆ ಕೇಳಿದ್ದಾನೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸುಮಲತಾ ಅವರಿಬ್ಬರು ಪ್ರಬುದ್ಧ ವಯಸ್ಕರು. ಅವರಿಬ್ಬರು ಇಂದು ನಿರ್ಧಾರಕ್ಕೆ ಬಂದಿದ್ದಾರೆ. ಸರಿಯೋ ತಪ್ಪೋ ಅದನ್ನು ಗೌರವಿಸಿ ಎಂದಿದ್ದಾರೆ. ಈ ಮೂಲಕ ದರ್ಶನ್​ ಮತ್ತು ಸುದೀಪ್ ಜಗಳವನ್ನು ದೊಡ್ಡದು ಮಾಡಬೇಡಿ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ.