ಟಾಲಿವುಡ್ ಖ್ಯಾತ ನಟ ಸಿಂಬು ಸ್ಯಾಂಡಲ್’ವುಡ್’ಗೆ ಎಂಟ್ರಿ
ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಟ, ಗಾಯಕ ಸಿಂಬು ಕಾವೇರಿ ವಿಚಾರವಾಗಿ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದು ಗೊತ್ತೆ ಇದೆ. ಇದೀಗ ಇನ್ನೊಂದು ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಅಂತದ್ದೇನಪ್ಪಾ ಅಂದುಕೊಂಡ್ರಾ?
ಬೆಂಗಳೂರು (ಜೂ. 04): ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಟ, ಗಾಯಕ ಸಿಂಬು ಕಾವೇರಿ ವಿಚಾರವಾಗಿ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದು ಗೊತ್ತೆ ಇದೆ. ಇದೀಗ ಇನ್ನೊಂದು ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಅಂತದ್ದೇನಪ್ಪಾ ಅಂದುಕೊಂಡ್ರಾ?
ಸಿಂಬು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಸ್ಯಾಂಡಲ್’ವುಡ್’ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ. ’ಇರುವುದೆಲ್ಲ ಬಿಟ್ಟು’ ಎನ್ನುವ ಚಿತ್ರವೊಂದರಲ್ಲಿ ಗಾಯಕರಾಗಿ ಸ್ಯಾಂಡಲ್ ವುಡ್’ಗೆ ಪಾದಾರ್ಪಣೆ ಮಾಡಲಿದ್ದಾರೆ. ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.
ಪ್ರಸ್ತುತ ಸಿಂಬು ಮಣಿರತ್ನಮ್ ನಿರ್ದೇಶನದ ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ.