Asianet Suvarna News Asianet Suvarna News

ಹಿರಿಯ ಸಿನಿಮಾ ನಟ, ಮುಕ್ತ ಮುಕ್ತ ಖ್ಯಾತಿಯ ಗುರುಮೂರ್ತಿ ನಿಧನ

ಸಿನಿಮಾ ವಲಯದಲ್ಲಿ ಗುರುಮಾಮ ಎಂದೇ ಪ್ರಸಿದ್ಧರಾಗಿದ್ದ ಟಿ.ವಿ.ಗುರುಮೂರ್ತಿ ಅವರು ಮೂಲತಃ ಬ್ಯಾಂಕ್ ಉದ್ಯೋಗಿಯಾಗಿದ್ದರು.

Senior Kannada Artist Dead

ಬೆಂಗಳೂರು(ಆ.19): ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ನಟ ಟಿ.ವಿ.ಗುರುಮೂರ್ತಿ (70) ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಹಲವಾರು ಕನ್ನಡದ ಸಿನಿಮಾಗಳು, ನಾಟಕಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಮರಣ ಹೊಂದಿದ್ದಾರೆಂದು ತಿಳಿದುಬಂದಿದೆ. ಸಿನಿಮಾ ವಲಯದಲ್ಲಿ ಗುರುಮಾಮ ಎಂದೇ ಪ್ರಸಿದ್ಧರಾಗಿದ್ದ ಟಿ.ವಿ.ಗುರುಮೂರ್ತಿ ಅವರು ಮೂಲತಃ ಬ್ಯಾಂಕ್ ಉದ್ಯೋಗಿಯಾಗಿದ್ದರು. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರೂ ಆಗಿದ್ದರು. ತುಮಕೂರಿನ ತಿಪಟೂರಿನವರಾದ ಇವರು ವೃತ್ತಿಗಿಂತ ಅಭಿನಯದಲ್ಲಿ ಹೆಚ್ಚು ಆಸಕ್ತಿ ಹೊಂದಿ,ಅಡಚಣೆಗಾಗಿ ಕ್ಷಮಿಸಿ,  ಮಿ.ನಿರುದ್ಯೋಗಿ, ಒಂದು ಸುಳ್ಳು ಸಂಸಾರಕ್ಕೆ ಮುಳ್ಳು, ವೆಂಕಟರಮಣ ಗೋವಿಂದ, ಸಿಲ್ಲಿಲಲ್ಲಿ, ಪಾಂಡುರಂಗ ವಿಠಲ, ಪಾರ್ವತಿ ಪರಮೇಶ್ವರ, ಮುಕ್ತಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು.

Follow Us:
Download App:
  • android
  • ios