ಬಾಲಿವುಡ್ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಸಲ್ಲು ಭಾಯ್ | ’ಭಾರತ್’ ಬಾಯ್‌ಗೆ ಇನ್ನೂ ಒಲಿದು ಬಂದಿಲ್ಲ ಕಂಕಣ ಭಾಗ್ಯ | ಮದುವೆ ಯಾಕಾಗಿಲ್ಲ ಎಂದು ಗುಟ್ಟು ಬಿಟ್ಟು ಕೊಟ್ಟ ಸಲ್ಮಾನ್ 

ಬಾಲಿವುಡ್ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಅಂದ್ರೆ ಸಲ್ಮಾನ್ ಖಾನ್. ಇವರ ರಿಲೇಶನ್ ಷಿಪ್ ಬಗ್ಗೆ, ಮದುವೆ ಬಗ್ಗೆ ಆಗಾಗ ಬಿ- ಟೌನ್ ನಲ್ಲಿ ಗುಸುಗುಸುಗಳು ಕೇಳಿ ಬರುತ್ತಿರುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎನರ್ಜಿ ಬೂಸ್ಟರ್, ಕವಿತೆ ಮಾಸ್ಟರ್ ವಿಜಯ್ ಪ್ರಕಾಶ್ ಸರಿಗಮಪಕ್ಕೆ ಕಮ್ ಬ್ಯಾಕ್!

ಇತ್ತೀಚಿಗೆ ಒಂದು ಸಂದರ್ಶನಲ್ಲಿ ಮದುವೆ ಬಗ್ಗೆ ಸಲ್ಮಾನ್ ರನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ ಬಹಳ ಮಜವಾಗಿತ್ತು. ಯಾಕೆ ಇನ್ನೂ ಮದುವೆಯಾಗಿಲ್ಲ ಎಂಬ ಗುಟ್ಟನ್ನು ಬಿಟ್ಟು ಕೊಟ್ಟಿದ್ದಾರೆ. ‘ಮದುವೆ ಬಗ್ಗೆ ನನಗೆ ನಂಬಿಕೆ ಇಲ್ಲ. ಇದೊಂದು ಬಂಧನ. ನನಗೆ ಇದರಲ್ಲೆಲ್ಲಾ ನಂಬಿಕೆಯಿಲ್ಲ. ಇದೊಂಥರಾ ಹಳ್ಳಕ್ಕೆ ಬಿದ್ದಂಗೆ. ಮದುವೆಗಿಂತ ಕಂಪ್ಯಾನಿಯನ್ ಷಿಪ್ ನಲ್ಲಿ ನಂಬಿಕೆಯಿದೆ’ ಎಂದು ಉತ್ತರಿಸಿದರು. 

ಮುಸ್ತಫನ ರಾಣಿ ‘ಪುಲಿಮಣಿ’ ಚಾರ್ಮಿಂಗ್ ಫೋಟೋಸ್!

ಇನ್ನೂ ಮುಂದುವರೆದು ಮಕ್ಕಳನ್ನು ಯಾವಾಗ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದಾಗ, ಯಾವಾಗ ಸಮಯ ಬರುತ್ತದೋ ಅವಾಗ ನೋಡೋಣ ಎಂದಿದ್ದಾರೆ.