ಸಂವೇದನಾಶೀಲ ನಿರ್ದೇಶಕ ಜಯತೀರ್ಥ ನಿರ್ದೇಶನದ ಹೊಸ ಚಿತ್ರಕ್ಕೆ ನಿರ್ದೇಶಕ ರಿಷಭ್ ಶೆಟ್ಟಿ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು (ಜ.09): ಸಂವೇದನಾಶೀಲ ನಿರ್ದೇಶಕ ಜಯತೀರ್ಥ ನಿರ್ದೇಶನದ ಹೊಸ ಚಿತ್ರಕ್ಕೆ ನಿರ್ದೇಶಕ ರಿಷಭ್ ಶೆಟ್ಟಿ ನಾಯಕರಾಗಿ ಆಯ್ಕೆಯಾಗಿದ್ದಾರೆ.

Add Asianetnews Kannada as a Preferred SourcegooglePreferred

ಹೊಸ ಚಿತ್ರದ ಹೆಸರು ಹುಡುಕುವ ಪೋಸ್ಟರನ್ನು ತಂಡ ರಿಲೀಸ್ ಮಾಡಿದೆ. ಹುಲಿಯ ಮುಖ ಮಾತ್ರ ಕಾಣುವ ಪೋಸ್ಟರಿನೊಳಗೆ ಹುಡುಕಾಡಿದರೆ ಬೆಲ್ ಬಾಟಂ ಎಂಬ ಅಕ್ಷರಗಳು ಕಾಣಿಸುತ್ತವೆ. ಅದೇ ಚಿತ್ರದ ಹೆಸರು. ರಿಷಭ್ ಶೆಟ್ಟಿ ಇತ್ತೀಚೆಗೆ ನಟನೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ ಅನ್ನುವ ಆರೋಪಕ್ಕೆ ಇದು ಮತ್ತೊಂದು ಸಾಕ್ಷಿ.