ಆರ್ಜಿವಿ 'ಭೈರವ ಗೀತಾ'ದಲ್ಲಿ ಹಾಡು-ಕಿಸ್ ಬಿಟ್ಟು ಮತ್ತೇನಿದೆ?
ರಾಮ್ ಗೋಪಾಲ್ ವರ್ಮಾ ನಿರ್ಮಾಣದ 'ಭೈರವ ಗೀತಾ' ಮೊದಲಿನಿಂದಲೂ ಸದ್ದು ಮಾಡಿಕೊಂಡೇ ಬಂದಿದೆ. ತನ್ನ ಟ್ರೈಲರ್ ನಿಂದಲೇ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಚಿತ್ರದ ಹಾಡಿನ ಟೀಸರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಸಿಗ್ತಾ ಇದೆ.
ಕನ್ನಡದ ಕಹಳೆಯ ಊದಿ ಮೊಳಗುತಿರೋ ಪ್ರೇಮ ಗೀತೆ ಎಂಬ ಸಾಲುಗಳು ನಿಜಕ್ಕೂ ಕಿವಿಗೆ ಇಂಪಾಗಿ ಕೇಳುತ್ತವೆ. ಖ್ಯಾತ ಗಾಯಕ ವಿಜಯ್ ಯೇಸುದಾಸ್ ಹಾಗೂ ಚಿನ್ಮಯ್ ಧ್ವನಿಯಾಗಿದ್ದಾರೆ. ಕೆ.ಕಲ್ಯಾಣ್ ಈ ಗೀತೆ ಬರೆದಿದ್ದು, ರವಿ ಶಂಕರ್ ಸಂಗೀತ ಸಂಯೋಜನೆ ವಿಶಿಷ್ಟವಾಗಿದೆ.
ನಟ ಧನಂಜಯ್ ಗೆ ನಾಯಕಿಯಾಗಿ ಐರಾ ಮೋರ್ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ನಿರ್ದೇಶನ ಜವಾಬ್ದಾರಿ ಹೊತ್ತಿದ್ದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ತೆರೆಗೆ ಬರಲಿದೆ. ಭೈರವ ಗೀತಾ ಅಕ್ಟೋಬರ್ 12 ರಂದು ಬಿಡುಗಡೆಯಾಗುತ್ತಿದ್ದು ಹೇಗೆ ಮೂಡಿ ಬಂದಿದೆ ಎನ್ನುವುದಕ್ಕೆ ಉತ್ತರ ಸಿಗಲಿದೆ.