ನಿರ್ಮಾಪಕ ಶೈಲೇಂದ್ರ ಬಾಬು ಪುತ್ರನಿಗೆ ಕೂಡಿ ಬಂತು ಕಂಕಣ ಭಾಗ್ಯ | ಅರಮನೆ ಮೈದಾನದಲ್ಲಿ ಅದ್ದೂರಿ ವಿವಾಹ ಮಹೋತ್ಸವ 

ಬೆಂಗಳೂರು (ಡಿ. 05): ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ ನಟ ಸುಮಂತ್ ಶೈಲೇಂದ್ರ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. 

Add Asianetnews Kannada as a Preferred SourcegooglePreferred

ಬೆಂಗಳೂರಿನ ಕೋರಮಂಗಲ ನಿವಾಸಿ ಶ್ರೀನಿವಾಸ ನಾರಪ್ಪ ಹಾಗೂ ಚಂದ್ರಕಲಾ ದಂಪತಿಯ ಪುತ್ರಿ ಅನಿತಾ ಅವರನ್ನು ಸುಮಂತ್ ಬಾಳಸಂಗಾತಿಯನ್ನಾಗಿ ಸ್ವೀಕರಿಸುತ್ತಿದ್ದಾರೆ. ಡಿಸೆಂಬರ್ 12 ರಂದು ಬುಧವಾರ ಬೆಂಗಳೂರಿನ ಅರಮನೆ ಆವರಣದಲ್ಲಿರುವ ಮೇನ್ ಪ್ಯಾಲೇಸ್ ನಲ್ಲಿ ಈ ಜೋಡಿಯ ವಿವಾಹೋತ್ಸವ ನಡೆಯುತ್ತಿದೆ. ಆರತಕ್ಷತೆ ಕಾರ್ಯಕ್ರಮ ಡಿಸೆಂಬರ್ 11 ರಂದು ಸಂಜೆ 7 ಗಂಟೆಗೆ ಫಿಕ್ಸ್ ಆಗಿದೆ.

ಕನ್ನಡದ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾದ ಶೈಲೇಂದ್ರ ಬಾಬು ಗಂಡ ಹೆಂಡತಿ, ಗೌರಮ್ಮ , ದುಬೈ ಬಾಬು ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಪುತ್ರ ಸುಮಂತ್ ಕೂಡ ನಟನಾಗಿ ಚಿತ್ರರಂಗಕ್ಕೆ ಎಂಟ್ರಿಯಾದರಲ್ಲದೆ, ಅವರದೇ ಬ್ಯಾನರ್‌ನಲ್ಲಿ ‘ದಿಲ್‌ವಾಲ’, ‘ಭಲೇ ಜೋಡಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನಲ್ಲೂ ಒಂದು ಚಿತ್ರಕ್ಕೆ ನಾಯಕರಾಗಿ ಬಣ್ಣ ಹಚ್ಚಿರುವುದು ವಿಶೇಷ.