ಟೀನೇಜ್ ಪ್ರೀತಿಯ ನಡುವೆ ಅಂತರವಿರಲಿ
ಟಿನೇಜ್ ಲವ್ಸ್ಟೋರಿಯೊಂದಿಗೆ ಕುತೂಹಲ ಮೂಡಿಸಿರುವ ಚಿತ್ರ. ನವ ಪ್ರತಿಭೆ ಪ್ರಖ್ಯಾತ್ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾ.
ಹಾಗೆಯೇ ‘ವಾಸ್ತು ಪ್ರಕಾರ’ ಖ್ಯಾತಿಯ ನಟಿ ಐಶಾನಿ ಶೆಟ್ಟಿ ಎರಡು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ರವೀನ್ ಈ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದು, ರವೀನ್ ಹಾಗೂ ಜಿ.ಕೆ. ನಾಗರಾಜು ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ.ಮಂಜು ಮಾಂಡವ್ಯ ಸಂಭಾಷಣೆ, ಯೋಗರಾಜ್ ಭಟ್, ಗೌಸ್ಪೀರ್ ಹಾಗೂ ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ.
‘ಯುವ ಜನರನ್ನೇ ಕೇಂದ್ರವಾಗಿಟ್ಟು ಈ ಕತೆ ಹೆಣೆಯಲಾಗಿದೆ. ಮಕ್ಕಳ ಮೇಲೆ ಏನೆಲ್ಲ ಕನಸು ಕಟ್ಟಿಕೊಳ್ಳುವ ಪೋಷಕರಿಗೂ ಚಿತ್ರದಲ್ಲೊಂದು ಮೇಸೆಜ್ ಇದೆ. ಆ ಕಾರಣಕ್ಕೆ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ವಿಶ್ವಾಸವಿದೆ ಎನ್ನುತ್ತಾರೆ ನಿರ್ದೇಶಕ ರವೀನ್.