Published : Jun 03 2017, 08:14 PM IST| Updated : Apr 11 2018, 12:42 PM IST
Share this Article
FB
TW
Linkdin
Whatsapp
ಕಾರು ಹರಾಜಿನಲ್ಲಿ ಬಂದ 3.15 ಲಕ್ಷ ರೂ.ವನ್ನು ವೇಶ್ಯೆಯರ ಪುನರ್ವಸತಿಯಾಗಿ ದುಡಿಯುತ್ತಿ ರುವ ಜ್ಯೋತಿ ಮಹಿಳಾ ಸಂಘಕ್ಕೆ ನೀಡಲಿದ್ದಾರೆ. ಕಳೆದ ವಾರವಷ್ಟೇ ಕಾರನ್ನು ಹರಾಜು ಹಾಕಲಾಗಿತ್ತು. ಬೆಳಗಾವಿ ಮೂಲದ ರವಿಕೋರೆ ಎಂಬುವರು ಹರಾಜಿನಲ್ಲಿ ಕಾರನ್ನು ತಮ್ಮದಾಗಿಸಿ ಕೊಂಡಿದ್ದರು. ಇದರಿಂದ ಬಂದ ಹಣವನ್ನು ಈಗ ರಕ್ಷಿತ್‌ಶೆಟ್ಟಿ, ಸೇವಾ ವಲಯದಲ್ಲಿ ಗುರುತಿಸಿಕೊಂಡಿರುವ ಜ್ಯೋತಿ ಮಹಿಳಾ ಸಂಘಕ್ಕೆ ನೀಡಲಿದ್ದಾರೆ.
ಬೆಂಗಳೂರು(ಜೂ.03): ಚಿತ್ರದಲ್ಲಷ್ಟೇ ಅಲ್ಲದೆ ನಿಜ ಜೀವನದಲ್ಲೂ ಆದರ್ಶ ಮೆರೆದಿರುವ ನಟ ರಕ್ಷಿತ್ಶೆಟ್ಟಿ, ‘ಕಿರಿಕ್ ಪಾರ್ಟಿ' ಚಲನಚಿತ್ರದಲ್ಲಿ ಪ್ರೇಕ್ಷಕರ ಗಮನಸೆಳೆದಿದ್ದ ಕಾರನ್ನು ಹರಾಜು ಹಾಕಿದ್ದು, ಅದರಿಂದ ಬಂದ ಹಣವನ್ನು ಸೇವಾ ಸಂಸ್ಥೆಯೊಂದಕ್ಕೆ ದಾನ ಮಾಡಲು ಮುಂದಾಗಿದ್ದಾರೆ. ಕಾರು ಹರಾಜಿನಲ್ಲಿ ಬಂದ 3.15 ಲಕ್ಷ ರೂ.ವನ್ನು ವೇಶ್ಯೆಯರ ಪುನರ್ವಸತಿಯಾಗಿ ದುಡಿಯುತ್ತಿ ರುವ ಜ್ಯೋತಿ ಮಹಿಳಾ ಸಂಘಕ್ಕೆ ನೀಡಲಿದ್ದಾರೆ. ಕಳೆದ ವಾರವಷ್ಟೇ ಕಾರನ್ನು ಹರಾಜು ಹಾಕಲಾಗಿತ್ತು. ಬೆಳಗಾವಿ ಮೂಲದ ರವಿಕೋರೆ ಎಂಬುವರು ಹರಾಜಿನಲ್ಲಿ ಕಾರನ್ನು ತಮ್ಮದಾಗಿಸಿ ಕೊಂಡಿದ್ದರು. ಇದರಿಂದ ಬಂದ ಹಣವನ್ನು ಈಗ ರಕ್ಷಿತ್ಶೆಟ್ಟಿ, ಸೇವಾ ವಲಯದಲ್ಲಿ ಗುರುತಿಸಿಕೊಂಡಿರುವ ಜ್ಯೋತಿ ಮಹಿಳಾ ಸಂಘಕ್ಕೆ ನೀಡಲಿದ್ದಾರೆ. ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ಹಳೆ ಕಾಲದ ಕಾಂಟೆಸ್ಸಾ ಕಾರನ್ನು ಖರೀದಿ ಸಿದ್ದ ರಕ್ಷಿತ್ಶೆಟ್ಟಿ, ಅದಕ್ಕೆ ಹಳದಿ ಬಣ್ಣ ಬಳಸಿ, ಮಾರ್ಪಾಡು ಮಾಡಿಸಿದ್ದರು. ಚಿತ್ರದಲ್ಲಿಯೂ ಕಾರನ್ನು ಮಾರಾಟ ಮಾಡಿ ವೇಶ್ಯಾ ವಾಟಿಕೆ ಬಿಟ್ಟಮಹಿಳೆಯೊಬ್ಬಳ ಮಗುವಿನ ಜೀವನ ರೂಪಿಸಿಕೊಳ್ಳಲು ನೀಡಿದ್ದರು. ಇದನ್ನೇ ನಿಜ ಜೀವನ ದಲ್ಲೂ ರಕ್ಷಿತ್ ಕಾರ್ಯರೂಪಕ್ಕೆ ತಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.