Asianet Suvarna News Asianet Suvarna News

ಕಾಫಿ ತೋಟದ ನಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪವನ್ ಒಡೆಯರ್

ನಟ ಕೋಮಲ್ ಅಭಿನಯದ ಗೋವಿಂದಾಯ ನಮಃ ಚಿತ್ರದ ಮೂಲಕ ನಿರ್ದೇಶಕ ವೃತ್ತಿಗೆ ಕಾಲಿಟ್ಟ ಪವನ್ ಗೂಗ್ಲಿ, ರಣವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

Kannada Director Pavan Wadeyar Tie The Knot in Bhagalakote
Author
Bengaluru, First Published Aug 20, 2018, 6:08 PM IST

ಬಾಗಲಕೋಟೆ[ಆ.20]: ಸ್ಯಾಂಡಲ್ ವುಡ್ ಭರವಸೆಯ ನಿರ್ದೇಶಕ ಪವನ್ ಒಡೆಯರ್ ಹಾಗೂ  ನಟಿ ಅಪೇಕ್ಷಾ ಪುರೋಹಿತ ಅವರು  ಬಾಗಲಕೋಟೆಯಲ್ಲಿ ಇಂದು ಗುರುಹಿರಿಯರು ಹಾಗೂ ಬಂಧುಗಳ ಸಮ್ಮುಖದಲ್ಲಿ ವೈವಾಹಿಕ ಜೀವನ ಕ್ಕೆಕಾಲಿಟ್ಟರು.

ಪಟ್ಟಣದ  ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಜರುಗಿದ ವಿವಾಹದಲ್ಲಿ ನೂತನ ವಧುವರರಿಗೆ ಪುನೀತ್ ರಾಜ್'ಕುಮಾರ್ ಸೇರಿದಂತೆ ಸ್ಯಾಂಡಲ್'ವುಡ್'ನ ಹಲವು ನಟ ನಟಿಯರು ಶುಭ ಹಾರೈಸಿದರು. 

ನಟ ಕೋಮಲ್ ಅಭಿನಯದ ಗೋವಿಂದಾಯ ನಮಃ ಚಿತ್ರದ ಮೂಲಕ ನಿರ್ದೇಶಕ ವೃತ್ತಿಗೆ ಕಾಲಿಟ್ಟ ಪವನ್ ಗೂಗ್ಲಿ, ರಣವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಸ್ತುತ ಪುನೀತ್ ರಾಜ್ ಕುಮಾರ್ ಅಭಿನಯದ  ನಟ ಸಾರ್ವಭೌಮ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅಪೇಕ್ಷಾ ಅವರು ಟಿ.ಎನ್. ಸೀತಾರಾಂ ನಿರ್ದೇಶನದ ಕಾಫಿ ತೋಟ ಚಿತ್ರದಲ್ಲಿ ನಟಿಸಿದ್ದಾರೆ.

ವಿವಾಹ ಸಮಾರಂಭಕ್ಕೆ ಬಂಧುಬಳಗ ಸೇರಿದಂತೆ ಕೆಲವು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅಗಸ್ಟ್ 26 ರಂದು ಬೆಂಗಳೂರಿನ ಸ್ಯಾಂಗ್ರೀಲಾ ಹೊಟೇಲ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಅಂದು ಸ್ಯಾಂಡಲ್ ವುಡ್ ಗಣ್ಯಾತಿಗಣ್ಯರು ಆಗಮಿಸಿ ಶುಭ ಕೋರಲಿದ್ದಾರೆ.

Follow Us:
Download App:
  • android
  • ios