ಕಮಲ್- ಗೌತಮಿ ಬೇರ್ಪಡಲು ರಮ್ಯಾಕೃಷ್ಣ ಕಾರಣವಂತೆ !
ಶ್ರುತಿ ಮತ್ತು ಗೌತಮಿ ನಡುವೆ ಆಗಾಗ್ಗೆ ಜಗಳ ಆಗ್ತಿತ್ತು ಎಂಬ ಮಾತಿತ್ತು. ಆದರೆ,
ದಕ್ಷಿಣ ಭಾರತದ ಜನಪ್ರಿಯ ಲಿವಿಂಗ್ ಟುಗೆದರ್ ಜೋಡಿ ಕಮಲ್ ಹಾಸನ್ ಹಾಗೂ ಗೌತಮಿ ನಡುವೆ ಈಗಾಗಲೇ ದೊಡ್ಡ ಕಂದಕ ಏರ್ಪಪಟ್ಟಿದೆ. ಈ ಬ್ರೇಕ್ಅಪ್ಗೆ ಕಮಲ್ ಪುತ್ರಿ ಶ್ರುತಿ ಹಾಸನ್ ಕಾರಣ ಎನ್ನಲಾಗುತ್ತಿತ್ತು. ಶ್ರುತಿ ಮತ್ತು ಗೌತಮಿ ನಡುವೆ ಆಗಾಗ್ಗೆ ಜಗಳ ಆಗ್ತಿತ್ತು ಎಂಬ ಮಾತಿತ್ತು. ಆದರೆ, ಈ ನಡುವೆ ಬ್ರೇಕ್ಅಪ್ ಕಾರಣದ ಒಂದು ಚೆಂಡು ರಮ್ಯಾಕೃಷ್ಣ ಅಂಗಳದಲ್ಲಿ ಕಾಣಿಸಿಕೊಂಡಿದೆ! ನಟಿ ರಮ್ಯಾಕೃಷ್ಣ ಜತೆ ಇತ್ತೀಚೆಗೆ ಕಮಲ್ ತೀರಾ ಕ್ಲೋಸ್ ಆಗಿದ್ದಾರೆ ಎಂಬುದೇ ಗೌತಮಿಯ ಮುನಿಸಿಗೆ ಕಾರಣವಾಗಿದೆಯಂತೆ. ಗೌತಮಿ ಮತ್ತು ರಮ್ಯಾಕೃಷ್ಣ ಸಮಕಾಲೀನ ನಟಿಯರು. ಒಂದು ಕಾಲದಲ್ಲಿ ಸ್ಪರ್ಧೆಯೊಡ್ಡಿದ್ದ ನಟಿಯೇ ಈಗ ಗೌತಮಿಯ ಹಾದಿಗೆ ಅಡ್ಡ ಬಂದಿದ್ದಾರೆಯೇ?