Asianet Suvarna News Asianet Suvarna News

ಪದ್ಮಶ್ರೀ ಶ್ರೀದೇವಿ ಬಗ್ಗೆ ಗೊತ್ತಿರದ ವಿಷಯಗಳು...

ನಾಲ್ಕು ವರ್ಷಗಳಿರುವಾಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, 54 ವರ್ಷಗಳವರೆಗೂ ಸೂಪರ್ ಸ್ಟಾರ್ ಆಗಿದ್ದ ಶ್ರೀದೇವಿ ತೀವ್ರ ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಮನೋಜ್ಞ ಅಭಿನಯನದಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದ ಈ ನಟಿಯ ಸಾವು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ.ಈ ಬಾಲಿವುಡ್ ಚಾಂದನಿ ಬಗ್ಗೆ ಗೊತ್ತಿರದ ಕೆಲವು ಸಂಗತಿಗಳು ಇವು.

Here are 10 lesser known facts about Sridevi

ನಾಲ್ಕು ವರ್ಷಗಳಿರುವಾಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, 54 ವರ್ಷಗಳವರೆಗೂ ಸೂಪರ್ ಸ್ಟಾರ್ ಆಗಿದ್ದ ಶ್ರೀದೇವಿ ತೀವ್ರ ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಮನೋಜ್ಞ ಅಭಿನಯನದಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದ ಈ ನಟಿಯ ಸಾವು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ.

ಈ ಬಾಲಿವುಡ್ ಚಾಂದನಿ ಬಗ್ಗೆ ಗೊತ್ತಿರದ ಕೆಲವು ಸಂಗತಿಗಳು ಇವು.

- ನಾಲ್ಕು ವರ್ಷಗಳಿರುವಾಗ 1969ರಲ್ಲಿ ಎಂ.ಎ.ತಿರುಮುಘಮ್‌ನ ತುವನೈವನ್ ಎಂಬ ಚಿತ್ರದಲ್ಲಿ ಬಾಲನಟಿಯಾಗಿ ನಟನೆ.

Here are 10 lesser known facts about Sridevi

- ಶ್ರೀ ಅಮ್ಮ ಯಂಗರ್ ಅಯ್ಯಪ್ಪನ್ ಈ ನಟಿಯ ಮೂಲ ಹೆಸರಾಗಿದ್ದು, ಬೆಳ್ಳಿ ತೆರೆಗೆ ಶ್ರೀದೇವಿ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದರು.

- ಶ್ರೀದೇವಿ ಮತ್ತು ಅನಿಲ್‌ ಕಪೂರ್ ಜೋಡಿ ಹಿಂದಿ ಚಿತ್ರರಂಗದಲ್ಲಿ ಬಹಳ ಮೋಡಿ ಮಾಡಿತ್ತು. 1980 ಮತ್ತು 1990ರಲ್ಲಿ ಈ ಇಬ್ಬರು ಅಭಿನಯಿಸಿದ ಮಿ.ಇಂಡಿಯಾ, ಲಮ್ಹೇ, ಲಾಡ್ಲಾ, ಜುದಾಯಿ ಸೇರಿ 13 ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದವು.

Here are 10 lesser known facts about Sridevi

- ತಮಿಳು ಚಿತ್ರರಂಗದಲ್ಲಿ ಕಮಲ್ ಹಾಸನ್ ಅವರೊಂದಿಗೆ ಅತೀ ಹೆಚ್ಚು ಚಿತ್ರಗಳಲ್ಲಿ ಶ್ರೀದೇವಿ ನಟಿಸಿದ್ದಾರೆ. ಸದ್ಮಾ ಸೇರಿ ಅನೇಕ ಚಿತ್ರಗಳಲ್ಲಿ ಶ್ರೀದೇವಿ, ಕಮಲ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು.

Here are 10 lesser known facts about Sridevi

- ಚಿತ್ರಕಥೆ ಸರಿ ಹೊಂದುತ್ತಿಲ್ಲವೆಂದು ಜುರಾಸ್ಸಿಕ್ ಪಾರ್ಕ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರ ಹಾಲಿವುಡ್ ಚಿತ್ರವನ್ನು ಒಲ್ಲೆ ಎಂದಿದ್ದರು ಶ್ರೀದೇವಿ.

Here are 10 lesser known facts about Sridevi

- ಪ್ರಖ್ಯಾತ ಬಾಹುಬಲಿ ಚಿತ್ರದ ಶಿವಗಾಮಿ ಪಾತ್ರವನ್ನೂ ಶ್ರೀದೇವಿ ವಿವಿಧ ಕಾರಣಗಳಿಂದ ನಿರಾಕರಿಸಿದ್ದರು.

- ಜುದಾಯಿ ನಂತರ ಶ್ರೀದೇವಿ ಚಿತ್ರರಂಗದಿಂದ ದೂರವೇ ಉಳಿದಿದ್ದರು. 2002ರಲ್ಲಿ ಶಕ್ತಿ ಚಿತ್ರದ ಮೂಲಕ ಮತ್ತೆ ಬಾಲಿವುಡ್‌ಗೆ ಮರು ಪ್ರವೇಶ ಮಾಡುವವರಿದ್ದರು. ಆದರೆ, ತಮ್ಮ ಎರಡನೇ ಮಗುವಿಗೆ ತಾಯಿಯಾಗುವ ಸ್ಥಿತಿಯಲ್ಲಿದ್ದರಿಂದ ಈ ಪಾತ್ರಕ್ಕೆ ಕರೀಷ್ಮಾ ಕಪೂರ್ ಅವರನ್ನು ಆರಿಸಲಾಯಿತು.

- ರಜನೀಕಾಂತ್ ಜತೆ ನಾಯಕ ನಟಿಯಾಗಿ ಮೂಂದ್ರು ಮುಡಿಚು ಚಿತ್ರದಲ್ಲಿ ಅಭಿನಯಿಸಿದಾಗ ಶ್ರೀದೇವಿಗೆ ಕೇವಲ 13 ವರ್ಷಗಳಾಗಿತ್ತು.

Here are 10 lesser known facts about Sridevi

- 1992ರಲ್ಲಿ ಮಾಧುರಿ ದೀಕ್ಷಿತ್‌ಗೆ ಹೆಚ್ಚು ಜನಪ್ರಿಯತೆ ತಂದುಕೊಟಿದ್ದ ಬೇಟಾ ಚಿತ್ರಕ್ಕೆ ಮೊದಲು ಶ್ರೀದೇವಿಯನ್ನೇ ಆಯ್ಕೆ ಮಾಡಲಾಗಿತ್ತು. ಆಗಲೇ ಅನಿಲ್ ಕಪೂರ್‌ನೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರಿಂದ, ಈ ಪಾತ್ರವನ್ನು ಶ್ರೀದೇವಿ ನಿರಾಕರಿಸಿದ್ದರು. ಚೂಹಿ ಚಾವ್ಲಾ ನಟನೆಯ ಢರ್ ಚಿತ್ರವನ್ನು ಶ್ರೀದೇವಿ ನಿರಾಕರಿಸಿದ್ದರು.

- 2013ರಲ್ಲಿ ಈ ನಟಿಗೆ ದೇಶದ ನಾಲ್ಕನೇ ಅತ್ಯುನ್ನತ ಪದವಿಯಾದ ಪದ್ಮಶ್ರೀ ನೀಡಿ, ಕೇಂದ್ರ ಸರಕಾರವು ಗೌರವಿಸಿತ್ತು.

Here are 10 lesser known facts about Sridevi
 

Follow Us:
Download App:
  • android
  • ios