ಬೆಂಗಳೂರು(ಅ.5): ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅಭಿನಯದ ಚೊಚ್ಚಲ ಸಿನಿಮಾ ಜಾಗ್ವಾರ್ ನಾಳೆ ತೆರೆ ಕಾಣಲು ಸಿದ್ಧವಾಗಿದೆ. ಮೊಮ್ಮಗ ಅಭಿನಯಿಸಿದ ಜಾಗ್ವಾರ್ ಸಿನಿಮಾದ ಮೊದಲ ಶೋ ನೋಡಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಗರದ ಸಂತೋಷ ಚಿತ್ರಮಂದಿರಕ್ಕೆ ತೆರಳಲಿದ್ದಾರೆ.ಜೊತೆಗೆ ಮಾಜಿ ಸಿಎಂ ಕುಮಾರ ಸ್ವಾಮಿ ದಂಪತಿ ಹಾಜರಾಗಲಿದ್ದಾರೆ. ಮತ್ತೊಂದು ಕಡೆ ಸಿನಿಮಾ ರಂಗದಿಂದ ದೂರನೇ ಉಳಿದಿರುವ ಪ್ರಜ್ವಲ್ ರೇವಣ್ಣ ನಗರದ ಮೀನಾಕ್ಷಿ ಮಾಲ್ನಲ್ಲಿ ನಡೆಯುವ ಜಾಗ್ವಾರ್ ಸಿನಿಮಾದ ಇಡೀ ಚಿತ್ರಮಂದಿರವೇ ಬುಕ್ ಮಾಡಿದ್ದಾರೆ. ಇನ್ನು ಹೊಸ ಹೀರೊ ಪ್ರವೇಶಕ್ಕೆ ಎಲ್ಲರ ಕಣ್ಣುಗಳು 'ಜಾಗ್ವಾರ್'ನತ್ತ ನೆಟ್ಟಿವೆ. ಈ ಚಿತ್ರಕ್ಕೆ ತೆಲುಗಿನ ಮಹದೇವ್ ನಿರ್ದೇಶನ ಮಾಡಿದ್ದರೆ, ಎಸ್.ಎಸ್.ತಮನ್ ಸಂಗೀತ ನೀಡಿದ್ದಾರೆ.
ಚಿತ್ರಮಂದಿರದಲ್ಲಿ ನಾಳೆ ದೇವೇಗೌಡರು: ಇಡೀ ಟಾಕೀಸ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos
