ರಾಜು ಕನ್ನಡ ಮೀಡಿಯಂ ಬಿಡುಗಡೆಗೆ ಹೈಕೋರ್ಟ್ ಅಸ್ತು, ಹಲವು ಷರತ್ತುಗಳು
ಸಿವಿಲ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಕೆ.ಎ. ಸುರೇಶ್ ಅವರಿಗೆ ಹಲವು ಷರತ್ತು ವಿಧಿಸಿ ಚಿತ್ರ ಬಿಡುಗಡೆಗೆ ಹೈಕೋರ್ಟ್ ಅನುಮತಿ ನೀಡಿದೆ.
ರಾಜು ಕನ್ನಡ ಮೀಡಿಯಂ ಚಲನಚಿತ್ರ ಬಿಡುಗಡೆಗಿದ್ದ ಅಡ್ಡಿ ನಿವಾರಣೆಗೊಂಡಿದ್ದು ಹೈಕೋರ್ಟ್ ಅಸ್ತು ನೀಡಿದೆ.
ಚಿತ್ರದ ಬ್ಯಾನರ್ ಸಂಬಂಧ ಪಾಲುದಾರರ ಮಧ್ಯೆ ಎದ್ದಿದ್ದ ವಿವಾದ ಸುರೇಶ್ ಫಿಲಂ ಬ್ಯಾನರ್'ನಲ್ಲಿ ಬಿಡುಗಡೆಗೆ ಕೋರಿ ಲಕ್ಷ್ಮೀಪತಿ ಬಾಬು ಕೋರ್ಟ್ ಮೆಟ್ಟಿಲೇರಿದ್ದರು. ಲಕ್ಷ್ಮೀಪತಿ ಬೇಡಿಕೆಯನ್ನು ಸಿವಿಲ್ ಕೋರ್ಟ್ ಎತ್ತಿ ಹಿಡಿದಿತ್ತು. ಸಿವಿಲ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಕೆ.ಎ. ಸುರೇಶ್ ಅವರಿಗೆ ಹಲವು ಷರತ್ತು ವಿಧಿಸಿ ಚಿತ್ರ ಬಿಡುಗಡೆಗೆ ಹೈಕೋರ್ಟ್ ಅನುಮತಿ ನೀಡಿದೆ.
ಸುರೇಶ್ ಆರ್ಟ್ಸ್ ಬ್ಯಾನರ್ನಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ನೀಡಲಾಗಿದ್ದು, ಚಿತ್ರದ ಗಳಿಕೆಯ ಸಂಪೂರ್ಣ ಲೆಕ್ಕ ಒಪ್ಪಿಸಬೇಕು. ಚಿತ್ರದ ಆದಾಯವನ್ನು ಪ್ರತ್ಯೇಕ ಖಾತೆಗೆ ಜಮಾವಣೆ ಮಾಡಬೇಕು ಹಾಗೂ ಒಂದು ಕೋಟಿ ರೂಪಾಯಿ ಬ್ಯಾಂಕ್ ಗ್ಯಾರಂಟಿ ಒದಗಿಸುವಂತೆ ಆದೇಶ ನೀಡಿದೆ.