ಸ್ಲಂನಿಂದ ಬಂದ ಕೀರ್ತಿ ಗೌಡ ತಂದೆ ಯಾರು ಅಂತ ಗೊತ್ತಾ?
ಹಲ್ಲೆ ಹಾಗೂ ಅಪಹರಣ ಪ್ರಕರಣದ ಮೇಲೆ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಜೈಲಿಗೆ ಹೋಗಿ ಬಂದ ಮೇಲೆ, ನಟನ ಇಬ್ಬರು ಪತ್ನಿಯರ ಜಗಳ ತಾರಕಕ್ಕೇರಿದೆ. ಒಬ್ಬರ ಮೇಲಿನ ಆರೋಪ ಹಾಗೂ ಪ್ರತ್ಯಾರೋಪ ಹೆಚ್ಚುತ್ತಿದೆ. ಪ್ರೆಸ್ಮೀಟ್ ನಡೆಸಿದ ನಾಗರತ್ನ, ಕೀರ್ತಿ ಅವರ ಮೇಲೆ ಹೇಳಿದ್ದೇನು?
ಬೆಂಗಳೂರು: ಮದುವೆ, ಸಂಸಾರದ ಹೆಸರಿನಲ್ಲಿ ನನ್ನ ಗಂಡ ವಿಜಯ್ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ಕೀರ್ತಿ ಗೌಡ ಎಂಥವಳು ಎಂಬುದು ನನಗೆ ಗೊತ್ತು. ಆಕೆ ಎಷ್ಟುನಿರ್ಮಾಪಕರ ಜತೆ ಹೋಗಿದ್ದಾಳೆ, ಎಷ್ಟುದುಡ್ಡು ತೆಗೆದುಕೊಳ್ಳುತ್ತಿದ್ದಳು, ಆಕೆಗೆ ಎಷ್ಟುಮಂದಿ ಬಾಯ್ಫ್ರೆಂಡ್ಗಳಿದ್ದಾರೆ ಎಂಬುದಕ್ಕೆ ನನ್ನ ಬಳಿ ದಾಖಲೆಗಳಿವೆ ಎಂದು ನಟ ವಿಜಯ್ ಪತ್ನಿ ನಾಗರತ್ನ ಗಂಭೀರವಾಗಿ ಕೀರ್ತಿ ಗೌಡ ಮೇಲೆ ಆರೋಪ ಮಾಡಿದ್ದಾರೆ.
ತಮ್ಮ ಗಂಡನ ಜತೆ ಮದುವೆ ಹೆಸರಿನಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿರುವ ಕೀರ್ತಿ ಗೌಡ ಕುರಿತು ಮಹತ್ತರವಾದ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿ ಬುಧವಾರ ಬೆಂಗಳೂರಿನ ಕತ್ತರಿಗುಪ್ಪೆಯಲ್ಲಿರುವ ತಮ್ಮ ನಿವಾಸದಲ್ಲಿ ನಾಗರತ್ನ ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ, ಪತ್ರಿಕಾಗೋಷ್ಠಿಯಲ್ಲಿ ಯಾವುದೇ ದಾಖಲೆ ನೀಡದೆ ಕೀರ್ತಿ ಗೌಡ ವಿರುದ್ಧ ಅರೋಪಗಳನ್ನು ಮಾಡಿದರು.
ಸ್ಲಂನಿಂದ ಬಂದ ಕೀರ್ತಿ ಗೌಡ ತಂದೆ ಯಾರು ಅಂತ ಗೊತ್ತಾ? ಆಕೆಯ ಹಿನ್ನೆಲೆ ಯಾರಿಗಾದರೂ ಗೊತ್ತಾ? ಅತ್ಯಂತ ದುರುದ್ದೇಶದಿಂದಲೇ ನನ್ನ ಗಂಡನ ಜತೆ ಸೇರಿಕೊಂಡು ನನ್ನ ಮತ್ತು ನನ್ನ ಮಕ್ಕಳ ಬದುಕನ್ನು ಬೀದಿಗೆ ತರುತ್ತಿದ್ದಾಳೆ. ‘ವಿಜಯ್ ನನ್ನ ಗಂಡ’ ಎನ್ನುತ್ತಿರುವ ಕೀರ್ತಿಗೆ ನಟ ವಿಜಯ್ ಒಬ್ಬರೇ ಗಂಡ ಅಲ್ಲ. ಆಕೆಗೆ ಸುಮಾರು ಮಂದಿ ಇದ್ದಾರೆ. ಆದರೆ, ಸಹಾಯ ಕೇಳಿಕೊಂಡು ಬಂದವಳು ನನ್ನ ಗಂಡನನ್ನು ತನ್ನ ಗಂಡ ಅಂತ ಹೇಳಿಕೊಂಡು ನನ್ನ ಸಂಸಾರದಲ್ಲಿ ಹುಳಿ ಹಿಂಡಿದ್ದಾಳೆ. ಇಂಥವಳ ತಂದೆ ಯಾರು ಅಂತ ಯಾರಿಗೂ ಗೊತ್ತಿಲ್ಲ. ಕೇವಲ ದುಡ್ಡು ಮಾಡುವುದಕ್ಕಾಗಿಯೇ ನನ್ನ ಪತಿಯನ್ನು ಯಾಮಾರಿಸಿ ಸಂಬಂಧ ಇಟ್ಟುಕೊಂಡಿದ್ದಾಳೆ. ಈಕೆಗೆ ಸಂಸಾರ ಮಾಡುವುದಕ್ಕೆ ಗಂಡ ಬೇಕಿಲ್ಲ, ಮಜಾ ಮಾಡುವುದಕ್ಕೆ ಗಂಡ ಬೇಕು. ಇದು ಸಂಸಾರಸ್ಥ ಹೆಣ್ಣು ಮಕ್ಕಳು ಮಾಡುವ ಕೆಲಸ ಅಲ್ಲ ಎಂದು ನಾಗರತ್ನ ಕಿಡಿ ಕಾರಿದರು.
ಬಾಡಿಗೆ ಮಗು, ಬಾಡಿಗೆ ತಾಳಿ:
ಈ ಮೊದಲೇ ಮದುವೆಯಾಗಿರುವ ವ್ಯಕ್ತಿ ತನ್ನ ಮೊದಲ ಪತ್ನಿಗೆ ಡಿವೋರ್ಸ್ ಕೊಡದೆ ಮತ್ತೊಂದು ಮದುವೆ ಹೇಗೆ ಮಾಡಿಕೊಳ್ಳುತ್ತಾರೆ? ಕೀರ್ತಿ ಜತೆ ನನ್ನ ಪತಿ ವಿಜಯ್ ಮದುವೆಯೇ ಆಗಿಲ್ಲ. ಕೀರ್ತಿ ಸುಳ್ಳು ಹೇಳುತ್ತಿದ್ದಾಳೆ. ಬಾಡಿಗೆ ತಾಳಿ ಕಟ್ಟಿಕೊಂಡು, ಬಾಡಿಗೆ ಮಗು ಜತೆ ಮುದ್ದಾಡುತ್ತಿರುವ ಫೋಟೋಗಳನ್ನು ಮಾಧ್ಯಮಗಳಿಗೆ ಕೊಟ್ಟರೆ ಅದು ಮದುವೆ ಆಗುತ್ತದೆಯೇ? ಇಂಥ ನಾಟಕಗಳು ನನ್ನ ಬಳಿ ನಡೆಯಲ್ಲ. ಇಷ್ಟುದಿನ ಮಕ್ಕಳು, ಸಂಸಾರ, ಮಾನ- ಮರ್ಯಾದೆ ಅಂತ ಸುಮ್ಮನಿದ್ದೆ. ಆದರೆ, ಇಟ್ಟುಕೊಂಡಿರೋಳಿಗೆ ಈ ಮಟ್ಟಿಗೆ ಜಂಭ ಇರಬೇಕಾದರೆ, ಕಟ್ಟಿಕೊಂಡಿರುವ ನನಗೆ ಏಕಿರಬಾರದು? ಮೊದಲನೆ ಪತ್ನಿಗೆ ವಿಚ್ಛೇದನ ನೀಡದೆ ಮತ್ತೊಂದು ಮದುವೆ ಆಗಿದ್ದರೆ ಸಾಕ್ಷ್ಯ ತೋರಿಸಲಿ. ನಾನು ಕೋರ್ಟ್ಗೆ ಹೋಗುತ್ತೇನೆ ಎಂದು.
"
ಆಕೆ ನನ್ನ ಮಕ್ಕಳಿಗೆ ಚಿಕ್ಕಮ್ಮ ಅಲ್ಲ:
ನನ್ನ ಮೂವರು ಮಕ್ಕಳ ಪೈಕಿ ಯಾರೂ ಕೂಡ ಕೀರ್ತಿಗೌಡ ಅವರನ್ನು ಒಪ್ಪಿಕೊಂಡಿಲ್ಲ. ಆಕೆ ತಮ್ಮ ಮನೆಗೆ ಯಾಕೆ ಬಂದಿದ್ದಾಳೆ ಎಂದು ಮಕ್ಕಳಿಗೂ ಗೊತ್ತಿಲ್ಲ. ಹೀಗಾಗಿ ದಯವಿಟ್ಟು ಕೀರ್ತಿಯನ್ನು ನನ್ನ ಮಕ್ಕಳಿಗೆ ಚಿಕ್ಕಮ್ಮ ಅಂತ ಹೇಳಬೇಡಿ. ಆಕೆ ಚಿಕ್ಕಮ್ಮ ಅಲ್ಲ, ನನ್ನ ಪತಿ ವಿಜಯ್ ಇಟ್ಟುಕೊಂಡವಳು. ಹೀಗಾಗಿ ಅವರ ಜತೆ ನನ್ನ ಮಕ್ಕಳಿಗೆ ಸಂಬಂಧ ಕಲ್ಪಿಸಬೇಡಿ. ನನ್ನ ಸಂಸಾರದ ಜತೆಗೆ ನನ್ನ ಮಕ್ಕಳನ್ನೂ ಸಹ ಬೀದಿಗೆ ತರಲಿಕ್ಕೇ ಆಕೆ ನನ್ನ ಗಂಡನ ಜತೆ ಸೇರಿಕೊಂಡಿದ್ದಾಳೆ. ಇದು ನನ್ನ ಮಕ್ಕಳಿಗೆ ಈಗೀಗ ಅರ್ಥವಾಗುತ್ತಿದೆ ಎಂದು ನಾಗರತ್ನ ದೂರಿದರು.
ವಿಜಯ್ ಜೈಲುಪಾಲಾಗಲು ಕೀರ್ತಿ ಕಾರಣ:
ನನಗೆ ಮತ್ತು ನನ್ನ ಮಕ್ಕಳ ಹೆಸರಿನಲ್ಲಿ ಆಸ್ತಿ ಬರೆದಿದ್ದೇನೆ ಎಂದು ನನ್ನ ಪತಿ ವಿಜಯ್ ಹೇಳುತ್ತಿರುವುದು ಸುಳ್ಳು. ನನ್ನ ಮಕ್ಕಳ ಹೆಸರಿನಲ್ಲಿ ಯಾವ ಆಸ್ತಿಯೂ ಬರೆದಿಲ್ಲ. ನಾನು ಈಗಿರುವ ಮನೆ ತುಂಬಾ ಹಿಂದೆಯೇ ನನ್ನ ಹೆಸರಿನಲ್ಲೇ ತೆಗೆದುಕೊಂಡಿರುವುದು. ಆಗ ನಾನೇ ಮೂರು ಮನೆಗಳನ್ನು ಖರೀದಿ ಮಾಡಿದ್ದೇನೆ. ಆ ಮನೆಗಳನ್ನು ಈಗ ಮಾರಾಟ ಮಾಡಿದ್ದಾರೆ. ಹೀಗಾಗಿ ಬಾಡಿಗೆ ಮನೆಯಲ್ಲಿರುವ ಪರಿಸ್ಥಿತಿ ಬಂದಿದೆಯೇ ಹೊರತು, ನನ್ನ ಮತ್ತು ನನ್ನ ಮಕ್ಕಳಿಗೆ ಆಸ್ತಿ ಕೊಟ್ಟು ಅವರು ಬಾಡಿಗೆ ಮನೆಯಲ್ಲಿಲ್ಲ. ನಾನೇ ತೆಗೆಸಿಕೊಟ್ಟಮೂರು ಮನೆ ಏನಾದವು? ಯಾಕೆ ಬಾಡಿಗೆ ಮನೆಯಲ್ಲಿದ್ದಾರೆ ಅಂತ ಉತ್ತರಿಸಲಿ. ನಾವು ಮಾಡಿದ್ದ ಆಸ್ತಿ ಮಾರಾಟ ಮಾಡಿಕೊಂಡು ಬಾಡಿಗೆ ಮನೆಯಲ್ಲಿರುವುದಕ್ಕೆ ಹಾಗೂ ವಿಜಯ್ ಇವತ್ತು ಜೈಲಿಗೆ ಹೋಗುವುದಕ್ಕೂ ಕೀರ್ತಿ ಗೌಡ ಅವರೇ ಕಾರಣ. ಆಕೆಯ ಮಾತುಗಳಿಗೆ ಮರುಳಾಗಿ ಎಲ್ಲವನ್ನೂ ನನ್ನ ಪತಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಹೊಟ್ಟೆಗಿಲ್ಲದಿದ್ದಾಗ ವಿಜಯ್ರನ್ನು ಮದುವೆ ಆದೆ:
ನಾನು ನಟ ವಿಜಯ್ ಅವರ ಆಸ್ತಿಗಾಗಿ ಇಷ್ಟೆಲ್ಲ ಗಲಾಟೆ ಮಾಡುತ್ತಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದೆಲ್ಲ ಸುಳ್ಳು. ನನಗೆ ಯಾವ ಆಸ್ತಿಯೂ ಬೇಕಾಗಿಲ್ಲ. ಬೇಕಿರುವುದು ನನ್ನ ಗಂಡ ವಿಜಯ್ ಮಾತ್ರ. ನೆಮ್ಮದಿಯ ಸಂಸಾರ, ನನ್ನ ಮಕ್ಕಳ ಭವಿಷ್ಯ ಮಾತ್ರ. ಯಾಕೆಂದರೆ ನಾನು ವಿಜಯ್ ಅವರನ್ನು ಮದುವೆಯಾಗಿದ್ದು ಯಾವ ಪರಿಸ್ಥಿತಿಯಲ್ಲಿ ಅಂತ ಗೊತ್ತಿದೆಯಾ? ವಿಜಯ್ಗೆ ತಿನ್ನಕ್ಕೆ ಅನ್ನ ಇಲ್ಲದಿದ್ದ ಹೊತ್ತಿನಲ್ಲಿ ನಾನು ಅವರ ಕೈಹಿಡಿದು ಜೀವನ ಮಾಡಲು ಒಪ್ಪಿ ಅವರನ್ನು ಮದುವೆಯಾದವಳು. ಈಗ ಅವರ ಆಸ್ತಿಗಾಗಿ ಇಷ್ಟೆಲ್ಲ ಗಲಾಟೆ ಮಾಡುತ್ತಿದ್ದೇನೆ ಎಂದು ನನ್ನ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ. ನಾನೇನು, ನನ್ನ ಪತಿ ವಿಜಯ್ ಏನು ಅಂತ ನನಗೆ ಗೊತ್ತಿದೆ. ಈ ಬಗ್ಗೆ ನಾನು ಕೀರ್ತಿ ಗೌಡ ಅವರಿಂದ ಪಾಠ ಮಾಡಿಸಿಕೊಳ್ಳಬೇಕಿಲ್ಲ.
ನಾನು ಮಾಡಿರುವ ಈ ಎಲ್ಲ ಆರೋಪಗಳಿಗೂ ನನ್ನ ಬಳಿ ದಾಖಲೆಗಳಿವೆ. ನಮ್ಮ ಲಾಯರ್ ಜತೆ ಮಾತನಾಡಿ ಅವುಗಳನ್ನು ಎರಡು ದಿನಗಳೊಳಗೆ ಬಿಡುಗಡೆ ಮಾಡುತ್ತೇನೆ. ತಾನು ವಿಜಯ್ ಪತ್ನಿ ಎಂದು ನಾಟಕ ಆಡುತ್ತಿರುವ ಕೀರ್ತಿ ಗೌಡ ಬಣ್ಣ ಬಯಲು ಮಾಡುತ್ತೇನೆ. ನನ್ನ ಪತಿ ವಿಜಯ್ಗೂ ಸತ್ಯ ಗೊತ್ತಾಗುತ್ತದೆ ಎಂದು ನಾಗರತ್ನ ಹೇಳಿದರು.
ವಿಜಯ್ ರಕ್ತ ಕಣ್ಣೀರು ಸಿನಿಮಾ ನೋಡಲಿ
ತಿಂಗಳಿಗೆ, ವರ್ಷಕ್ಕೊಬ್ಬರ ಜತೆ ಸಂಬಂಧ ಇಟ್ಟುಕೊಳ್ಳುವ ನನ್ನ ಪತಿ ನಟ ವಿಜಯ್ ಅವರಿಗೆ ಒಮ್ಮೆ ರಕ್ತಕಣ್ಣೀರು ಸಿನಿಮಾ ನೋಡುವುದಕ್ಕೆ ಹೇಳಿ. ಬೇಕಾದರೆ ನಾನೇ ಚಿತ್ರದ ಸೀಡಿ ತರಿಸಿ ಕೊಡುತ್ತೇನೆ. ನೋಡಿ ಬುದ್ಧಿ ಕಲಿಯಲಿ ಎಂದು ದುನಿಯಾ ವಿಜಯ್ ಪತ್ನಿ ನಾಗರತ್ನ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗರತ್ನ, ವಿಜಯ್ ಅವರಿಗೂ ಬುದ್ಧಿ ಮಾತುಗಳನ್ನು ಹೇಳುತ್ತ, ಹೀಗೆ ಕಂಡ ಕಂಡವರ ಜತೆಗೆ ಸಂಬಂಧ ಇಟ್ಟುಕೊಂಡು ಹೋದರೆ ಏನಾಗುತ್ತದೆ, ಎಂಥ ಪರಿಸ್ಥಿತಿ ಬರುತ್ತದೆ ಎಂಬುದನ್ನು ತಿಳಿಯಬೇಕಿದ್ದರೆ ಒಮ್ಮೆ ‘ರಕ್ತ ಕಣ್ಣೀರು’ ಸಿನಿಮಾ ನೋಡಲಿ ಎಂದರು.