ವಿಷ್ಣು ಪುಣ್ಯತಿಥಿ : ಅಭಿಮಾನಿಗಳಿಂದ ಅನ್ನದಾನ, ರಕ್ತದಾನ
ವಿಶೇಷ ಅಂದ್ರೆ ಈ ಬಾರಿ ನಗರದಲ್ಲಿ ವಿಷ್ಣು ಅವರ ಮೂರು ಪ್ರತಿಮೆಗಳು ಅನಾವರಣ ಆಗಲಿವೆ.
ಸಾಹಸಸಿಂಹ ಡಾ.ವಿಷ್ಣುವರ್ಧನ್ ರ 8ನೇ ಪುಣ್ಯತಿಥಿಯ ಅಂಗವಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಸ್ಮಾರಕಕ್ಕೆ ಪೂಜೆ, ಅನ್ನದಾನ,ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದಾರೆ.
ನಾಡಿನ ಎಲ್ಲಾ ಕಡೆಯಿಂದ ಅಭಿಮಾನಿಗಳಿಂದು ವಿಷ್ಣು ಸ್ಮಾರಕದ ಬಳಿ ಬರ್ತಿದ್ದಾರೆ. ವಿಶೇಷ ಅಂದ್ರೆ ಈ ಬಾರಿ ನಗರದಲ್ಲಿ ವಿಷ್ಣು ಅವರ ಮೂರು ಪ್ರತಿಮೆಗಳು ಅನಾವರಣ ಆಗಲಿವೆ. ಈ ಬಾರಿಯು ವಿಷ್ಣು ಕುಟುಂಬ, ಭಾರತಿವಿಷ್ಣುವರ್ಧನ್ ಸಮಾಧಿ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಕಡಿಮೆ. ಹತ್ತುವರೆಯಿಂದ ಹನ್ನೊಂದು ಗಂಟೆಗೆ ಅಭಿಮಾನಿಗಳಿಂದ ಸ್ಮಾರಕಕ್ಕೆ ಪೂಜೆ ನಡೆಯಿತು.