ಹೀರೋ ಶಶಿಕುಮಾರ್ ಹಾಡನ್ನು ಎಸ್​ಪಿಬಿ ಹಾಡುವುದೆಂದು ನಿರ್ಧರಿಸಲಾಯಿತು. ಆದರೆ, ಎಸ್​ಪಿಬಿ ತಮ್ಮ ಪಾತ್ರದ ಹಾಡನ್ನು ಬೇರೊಬ್ಬ ಗಾಯಕರು ಹಾಡಬೇಕು ಎಂದು ಬೇಡಿಕೆ ಇಟ್ಟರು. ಆದರೆ, ಆಗ ನೆನಪಾಗಿದ್ದು ರಾಜ್​ಕುಮಾರ್. ಆದರೆ, ಹಾಡಲು ಅಣ್ಣಾವ್ರು..

ಕನ್ನಡದ ಮೇರು ನಟ, ಪದ್ಮಭೂಷಣ ಡಾ ರಾಜ್​ಕುಮಾರ್ (Dr Rajkumar) ಅವರ ಅದ್ಭುತ ಗಾಯನ ಪ್ರತಿಭೆಯ ಬಗ್ಗೆ ಎಲ್ಲರಿಗೂ ಗೊತ್ತು. ಹಾಗೇ, ಎಸ್‌ಪಿ ಬಾಲಸುಬ್ರಹ್ಮಣ್ಯಂ (SP Balasubrahmanyam) ಅವರ ಕಂಠಸಿರಿ ಹಾಗೂ ದೈತ್ಯ ಪ್ರತಿಭೆ ಬಗ್ಗೆ ಇಡೀ ಜಗತ್ತಿಗೇ ತಿಳಿದಿದೆ. ಎಸ್​ಪಿಬಿ ನಟಿಸಿದ್ದ ‘ಮುದ್ದಿನ ಮಾವ’ ಚಿತ್ರಕ್ಕಾಗಿ ರಾಜ್​ಕುಮಾರ್ ಅವರು ಹಾಡಿದ್ದರು. ಅದ್ಯಾಕೆ ಆ ಚಿತ್ರದಲ್ಲಿ ಎಸ್‌ಪಿಬಿ ಪಾತ್ರಕ್ಕೆ ಡಾ ರಾಜ್‌ಕುಮಾರ್ ಹಾಡಿದ್ದರು ಗೊತ್ತಾ? ಎಸ್​ಪಿಬಿ ಅವರೇ ಸ್ವತಃ ತಮ್ಮ ಪಾತ್ರದ ಹಾಡನ್ನು ರಾಜ್​ಕುಮಾರ್ ಹಾಡಬೇಕೆಂದು ಬಯಸಿದ್ದರು. ಅದಕ್ಕೇ ಅಣ್ಣಾವ್ರು ಹಾಡಿದ್ದರು.

ಆದರೆ, ಸ್ವತಃ ಡಾ ರಾಜ್​ಕುಮಾರ್ ಅವರಿಗೆ, ತಾವು ಹಾಡಿದ ಬಳಿಕ, ಆ ಹಾಡು ಜನರಿಗೆ ಇಷ್ಟವಾಗುತ್ತದೆಯೇ ಎಂಬ ಆತಂಕ ಇತ್ತು. ಈ ಮಾತನ್ನು ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಆ ಸುದ್ದಿ ಸ್ವತಃ ಎಸ್‌ಪಿಬಿ ಅವರಿಗೂ ತಲುಪಿತ್ತು. ರಾಜ್​ಕುಮಾರ್ ಕಂಠ ಸಿರಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಅದ್ಭುತವಾಗಿ ಹಾಡುತ್ತಿದ್ದರು. ಅವರ ಕಂಠದಿಂದ ಮೂಡಿ ಬಂದ ಹಾಡನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹಾಗೂ, ಇದಕ್ಕೆ ಅವರಿಗೆ ಅವಾರ್ಡ್​ಗಳೂ ಕೂಡ ಸಂದಿವೆ. ಒಮ್ಮೆ ಎಸ್​ಪಿಬಿ ನಟಿಸಿದ್ದ ಸಿನಿಮಾಗಾಗಿ ರಾಜ್​ಕುಮಾರ್ ಹಾಡಿದ್ದರು.

ಈ ಘಟನೆಯನ್ನು ಎಸ್​ಪಿಬಿ ಅವರು ಅಂದೊಂದು ದಿನ ನೆನಪಿಸಿಕೊಂಡಿದ್ದರು. ಬಾಲಸುಬ್ರಮಣ್ಯಂ ಅವರ ಜನ್ಮದಿನದ ಸಂದರ್ಭದಲ್ಲಿ ಆ ಘಟನೆಯನ್ನು ನೆನಪಿಸಿಕೊಳ್ಳೋಣ. ಎಸ್​ಪಿಬಿ ಹಾಗೂ ಶಶಿಕುಮಾರ್ ನಟನೆಯ 'ಮುದ್ದಿನ ಮಾವ' ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಶಶಿಕುಮಾರ್ ಮಾವನ ಪಾತ್ರದಲ್ಲಿ ಎಸ್​ಪಿಬಿ ನಟಿಸಿದ್ದರು. ಈ ಸಿನಿಮಾ ಮೆಚ್ಚುಗೆ ಪಡೆಯಿತು. ಈ ಚಿತ್ರದ ತೂಕ ಹೆಚ್ಚಲು ರಾಜ್​ಕುಮಾರ್ ಹಾಡೂ ಕೂಡ ಕಾರಣ ಆಯಿತು. ಈ ಸಿನಿಮಾಗಾಗಿ ರಾಜ್​ಕುಮಾರ್ ಅವರು ‘ದೀಪಾವಳಿ.. ದೀಪಾವಳಿ..’ ಹಾಡು ಹಾಗೂ ‘ಶಿವನೆ..’ ಹಾಡನ್ನು ಹಾಡಿದ್ದರು.

ಹೀರೋ ಶಶಿಕುಮಾರ್ ಹಾಡನ್ನು ಎಸ್​ಪಿಬಿ ಹಾಡುವುದೆಂದು ನಿರ್ಧರಿಸಲಾಯಿತು. ಆದರೆ, ಎಸ್​ಪಿಬಿ ತಮ್ಮ ಪಾತ್ರದ ಹಾಡನ್ನು ಬೇರೊಬ್ಬ ಗಾಯಕರು ಹಾಡಬೇಕು ಎಂದು ಬೇಡಿಕೆ ಇಟ್ಟರು. ಆದರೆ, ಆಗ ನೆನಪಾಗಿದ್ದು ರಾಜ್​ಕುಮಾರ್. ಆದರೆ, ಹಾಡಲು ಅವರು ಒಪ್ಪಬೇಕಲ್ಲ..! ಇದೇ ಅಂಜಿಕೆಯಲ್ಲಿ ಚಿತ್ರತಂಡದವರು ರಾಜ್​ಕುಮಾರ್ ಅವರನ್ನು ಸಂಪರ್ಕಿಸಿದರು.

ಎಸ್​ಪಿಬಿ ಅವರು ರಾಘವೇಂದ್ರ ರಾಜ್​ಕುಮಾರ್ ಬಳಿ ತಮ್ಮ ಇಂಗಿತ ಹೊರಹಾಕಿದರು. ಅವರು ಹೋಗಿ ರಾಜ್​ಕುಮಾರ್ ಬಳಿ ಈ ವಿಚಾರ ಹೇಳಿದರು. ಇದನ್ನು ಕೇಳಿದ ರಾಜ್​ಕುಮಾರ್ ಅವರು 'ಗಂಗೆ ಬಂದು ಒಂದು ಬಟ್ಟಲಲ್ಲಿ ನೀರು ಕೊಡಿ' ಅಂತ ಕೇಳಿದ ಹಾಗಾಯ್ತು ಎಂದು ಹೇಳಿಕೊಂಡಿದ್ದರಂತೆ.

ಹಾಡು ಹಾಡಿದ ಬಳಿಕ ಚಿತ್ರತಂಡಕ್ಕೆ ರಾಜ್​ಕುಮಾರ್ ಕರೆ ಮಾಡಿ ಹಾಡು ಹೇಗಿದೆ? ಎಲ್ಲಾದರೂ ತಪ್ಪಾಗಿದೆಯಾ? ಎಂದೆಲ್ಲ ಕೇಳಿದ್ದರಂತೆ. ಡಾ ರಾಜ್‌ಕುಮಾರ್ ಅವರು ತಾವು ಗಾಯಕರಾಗಿದ್ದೂ ಸಹ ತಮಗಿಂತ ಖ್ಯಾತ ಗಾಯಕರಾಗಿದ್ದ ಎಸ್‌ಪಿಬಿ ಅವರ ಪಾತ್ರಕ್ಕೆ ಹಾಡಿದ್ದರಿಂದ ಜನರು ಇದ್ದನ್ನು ಒಪ್ಪಿಕೊಳ್ಳುತ್ತಾರಾ ಎನ್ನುವ ಭಯ ಅವರಿಗೆ ಇತ್ತು. ಈ ಘಟನೆಯನ್ನು ಎಸ್​ಪಿಬಿ ಅವರು ಈ ಮೊದಲು ನೆನಪಿಸಿಕೊಂಡಿದ್ದರು.

ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರು ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರು ಹಲವು ಭಾಷೆಗಳಲ್ಲಿ ಹಾಡಿರುವ ಒಟ್ಟೂ 50 ಸಾವಿರಕ್ಕೂ ಹಾಡಿರುವ ಹಾಡುಗಳ ಸಂಖ್ಯೆ ಗಿನ್ನಿಸ್ ದಾಖಲೆ ಸೇರಿದೆ. ಅವರಿಗೆ ಇಂದು (ಜೂನ್ 4) ಜನ್ಮದಿನ. ಎಸ್‌ಪಿಬಿ ಅವರ ಹುಟ್ಟುಹಬ್ಬದ ಈ ದಿನ ಅವರ ಹಾಡುಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಎಸ್​ಪಿಬಿ ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇತ್ತು.