ದರ್ಶನ್ ಸಿಟ್ಟಾಗಿದ್ದು ಈ ಫೋಟೋ ಕಾರಣಕ್ಕಾ?
ದರ್ಶನ್ ಅಭಿನಯದ ಯಜಮಾನ ಚಿತ್ರೀಕರಣ ಬಹುತೇಕ ಪೂರ್ಣ | ಚಿತ್ರೀಕರಣ ಸಂದರ್ಭದಲ್ಲಿ ದರ್ಶನ್ ಮೇಲೆ ಹಲ್ಲೆ ಆರೋಪ | ಅಷ್ಟಕ್ಕೂ ದರ್ಶನ್ ಸಿಟ್ಟಾಗಿದ್ಯಾಕೆ?
ಬೆಂಂಗಳೂರು (ಸೆ. 01): ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ತಿಗೊಂಡಿದೆ.
ಈ ವಾರ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಚಿತ್ರದ ಹಾಡಿನ ಡಾನ್ಸ್ ಚಿತ್ರೀಕರಣ ನಡೆಯುತ್ತಿತ್ತು. ದರ್ಶನ್, ತಾನ್ಯಾ ಹೋಪ್ ಡಾನ್ಸ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಯಾರೋ ಒಬ್ಬರು ಫೋಟೋ ತೆಗೆದಿದ್ದು ಮತ್ತು ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದು ದೊಡ್ಡ ಸುದ್ದಿಯಾಗಿತ್ತು.
ಈಗ ತಾನ್ಯಾ ಹೋಪ್ ನರ್ತನದ ಫೋಟೋ ಸಿಕ್ಕಿದ್ದು, ಈ ಫೋಟೋ ಕಾರಣದಿಂದಾಗಿಯೇ ದರ್ಶನ್ ಸಿಟ್ಟಾಗಿದ್ದರಾ ಎಂಬ ಅನುಮಾನ ಮೂಡಿದೆ.
ಈ ಫೋಟೋದಲ್ಲಿ ಅದ್ಧೂರಿ ಸೆಟ್ನ ಮಧ್ಯೆ ತಾನ್ಯಾ ಹೋಪ್ ಡಾನ್ಸರ್ಗಳ ಜೊತೆ ನಿಂತಿರುವುದನ್ನು ಗಮನಿಸಬಹುದು. ಈ ಚಿತ್ರವನ್ನು ಪಿ. ಕುಮಾರ್ ನಿರ್ದೇಶಿಸುತ್ತಿದ್ದಾರೆ. ಬಿ.ಸುರೇಶ್, ಶೈಲಜಾನಾಗ್ ನಿರ್ಮಿಸುತ್ತಿದ್ದಾರೆ.