Asianet Suvarna News Asianet Suvarna News

ನಟ ರಜಿನಿಕಾಂತ್ ಗೆ ಎದುರಾಯ್ತು ಸಂಕಷ್ಟ

ತಮಿಳು ನಟ ರಜಿನಿಕಾಂತ್  ಅವರಿಗೆ ಸಂಕಷ್ಟ ಎದುರಾಗಿದೆ. ಅವರ ಹೊಸ ಚಿತ್ರಕ್ಕೆ ನೀಡಿದ ಪ್ರಮಾಣ ಪತ್ರ ಹಿಂಪಡೆಯಲು ಸಿಬಿಎಫ್‌ಸಿಗೆ ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಸಿಒಎಐ) ಸಂಸ್ಥೆ ದೂರು ದಾಖಲಿಸಿದೆ. 

Complaint Against Rajinikanth New Movie 2 0
Author
Bengaluru, First Published Nov 28, 2018, 10:25 AM IST

ಚೆನ್ನೈ: ರಜನೀಕಾಂತ್ ಅಭಿನಯದ 2.0 ಚಿತ್ರದ ಬಿಡುಗಡೆಗೆ 2 ದಿನಗಳ ಬಾಕಿಯಿರುವ ಉಳಿದಿರು ವಂತೆಯೇ, ಚಿತ್ರಕ್ಕೆ ನೀಡಲಾದ ಪ್ರಮಾಣ ಪತ್ರ ಹಿಂಪಡೆಯಬೇಕು ಎಂದು ಕೋರಿ ಸಿಬಿಎಫ್‌ಸಿಗೆ ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಸಿಒಎಐ) ಸಂಸ್ಥೆ ದೂರು 
ದಾಖಲಿಸಿದೆ. 

ಚಿತ್ರದಲ್ಲಿ ಪ್ರಾಣಿತಜ್ಞರಾದ ಅಕ್ಷಯ್ ಕುಮಾರ್, ಹಕ್ಕಿಗಳು ಮತ್ತು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುವ ವಾತಾವರಣಕ್ಕೆ ಮೊಬೈಲ್ ವಿಕಿರಣಗಳೇ ಕಾರಣ ಎಂದು ಮೊಬೈಲ್ ಬಳಕೆದಾರರನ್ನು ನಿಂದಿಸುತ್ತಾರೆ. 

ಇದರಿಂದ ಸಮಾಜಕ್ಕೆ ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂದು ಅದು ಹೇಳಿದೆ.

Follow Us:
Download App:
  • android
  • ios