ಬಿಗ್ ಬಾಸ್ ಮನೆಯಿಂದ ಹೊರಬಂದ ಜಯಶ್ರೀ ಸೂಪರ್ ಸಂಡೇ  ಸಂಜೆಯಲ್ಲಿ ಸುದೀಪ್ ಜತೆ ಮಾತನಾಡಿದರು. ಮನೆಯಲ್ಲಿ ಕಳೆದ 63 ದಿನಗಳ ಅಭಿಪ್ರಾಯ ಹಂಚಿಕೊಂಡರು.

ಬಿಗ್ ಬಾಸ್ ಮನೆಯಲ್ಲಿ ದೀರ್ಘ ಕಾಲ ಕಳೆದ ಜಯಶ್ರೀ ಮನೆಯವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಜಯಶ್ರೀ ಪ್ರಕಾರ ಫೈನಲ್‌ನಲ್ಲಿ ಯಾರಿರುತ್ತಾರೆ? ಮನೆಯಲ್ಲಿ ಅತಿ ಹೆಚ್ಚು ನಾಟಕ ಮಾಡುವವರು ಯಾರು? ಎಂಬುದನ್ನು ಹೇಳಿ ಅಚ್ಚರಿ ಮೂಡಿಸಿದ್ದಾರೆ.

Add Asianetnews Kannada as a Preferred SourcegooglePreferred

ರಶ್ಮಿಗೆ ತಲೆ ಸಂಪೂರ್ಣ ಕೆಟ್ಟು ಹೋಗಿದ್ದು ಬಿಗ್‌ಬಾಸ್ ಮನೆಯಿಂದ ನೇರವಾಗಿ ಮಾನಸಿಕ ಚಿಕಿತ್ಸಕರ ಬಳಿಗೆ ಹೋಗುವುದು ಒಳ್ಳೆಯದು ಎಂದು ಹೇಳಿದರು. ನವೀನ್, ಧನರಾಜ್, ಆ್ಯಂಡಿ, ಶಶಿ ಫೈನಲ್ ನಲ್ಲಿ ಇರುತ್ತಾರೆ ಎಂದು ಹೇಳಿದರು.

ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್.. ಬೇಕಿತ್ತಾ!

ನವೀನ್ ಗೆಲ್ಲುತ್ತಾರೆ ಎಂದು ಸದ್ಯಕ್ಕೆ ಅನಿಸುತ್ತಿದೆ. ಆದರೆ ಧನರಾಜ್ ಗೆಲ್ಲಬೇಕು ಎಂದು ಹೇಳಿದರು. ಕವಿತಾ ಮನೆಯಲ್ಲಿ ಅತಿ ಹೆಚ್ಚು ನಾಟಕ ಮಾಡುವವಳು ಎಂದು ಹೇಳಲು ಮರೆಯಲಿಲ್ಲ. ನನ್ನದೇ ಪ್ರೊಡಕ್ಷನ್ ಹೌಸ್ ಇದೆ, ಅಭಿನಯದ ಕೇರಿಯರ್ ಸರಿದೂಗಿಸಿಕೊಂಡು ಹೋಗಬೇಕು ಎಂದು ಹೇಳಿದರು.