ಅರ್ಧ ಶತಕವನ್ನು ಮುಗಿಸಿದ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ನಾಮಿನೇಶನ್ ಪ್ರಕ್ರಿಯೆ ಮುಗಿದಿದೆ. ಸ್ಪರ್ಧಿಗಳು ಎಲ್ಲಿದ್ದಾರೋ ಅಲ್ಲಿಂದಲೇ ನಾಮಿನೇಶನ್ ಮಾಡುವಂತೆ ಬಿಗ್ ಬಾಸ್ ಸೂಚಿಸಿದ್ದರು.

ಮನೆಯಿಂದ ಕಳಿಸಿಬಿಡಿ ಎಂದು ನಾನು ಕನ್ಫೆಶನ್ ರೂಂಗೆ ಹೋಗುವ ತೀರ್ಮಾನ ಮಾಡಿದ್ದೆ. ನಮ್ಮ ಅಮ್ಮ ಕೂಡ ಅದೇ ಮಾತು ಹೇಳಿದ್ದರು ಎಂದು ಅಕ್ಷತಾ ಆ್ಯಂಡಿ ಬಳಿ ಅಳಲು ತೋಡಿಕೊಂಡರು.

Add Asianetnews Kannada as a Preferred SourcegooglePreferred

ಒಟ್ಟಿನಲ್ಲಿ ರಾಕೇಶ್‌, ಶಶಿ, ಅಕ್ಷತಾ, ಕವಿತಾ, ಜಯಶ್ರೀ, ನಯನಾ, ಧನರಾಜ್‌ ನಾಮಿಮೇಟ್ ಆದರು. ನಂತರ ಉತ್ತಮರು, ಅಧಮರು ಎಂಬುದನ್ನು ನಿರ್ಧರಿಸಲು ಬಿಗ್‌ ಬಾಸ್‌ ತಿಳಿಸಿದ್ದು, ಸ್ಪರ್ಧಿಗಳು ಖುಷಿಯಿಂದಲೇ ಆಡಿದರು.

'ಮುಂಗಾರು ಮಳೆ' ಸುದೀಪ್ ಮಾಡಿದ್ದರೆ ಏನಾಗುತ್ತಿತ್ತು? ಕಿಚ್ಚ ಹೇಳಿದ ಉತ್ತರ

ಈ ಮಧ್ಯೆ ನಾಮಿನೇಶನ್‌ಗೆ ಗುರಿಯಾದವರು ಈಜುಕೋಳದಲ್ಲಿ ಮುಳುಗಿ ಎದ್ದರು. ಇತ್ತ ನಾಮಿನೇಶನ್‌ಗೆ ಗುರಿಯಾದವರು ಈಗ ಆ್ಯಕ್ಟೀವ್‌ ಆಗಿದ್ದಾರೆ ಎಂದು ಆ್ಯಂಡಿ ಟಾಂಗ್ ಕೊಟ್ಟರು. ಒಟ್ಟಿನಲ್ಲಿ ಮನೆಯ ಒಳಗಿನ ಗ್ರೂಪ್‌ಗಳಿಂದ ಅತ್ತಲ್ಲೂ ಇಲ್ಲದ ಇತ್ತಲೂ ಇಲ್ಲದ ಆ್ಯಂಡಿ, ನಯನಾ ಮತ್ತು ಮುರಳಿ ಅವರಿಗೆ ಲಾಭ ಆಗುತ್ತಿರುವುದೆಂತೂ ಸತ್ಯ..