ಬೆಂಕಿ ಅನಾಹುತದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ'ಗೆ ಗಾಯ
ಮಾಲ್'ನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಬೈಕ್'ನಲ್ಲಿ ವೇದಿಕೆಗೆ ಎಂಟ್ರಿಯಾಗುತ್ತಿದ್ದ ವೇಳೆ ಬೈಕ್'ನಲ್ಲಿ ಅಳವಡಿಸಿದ್ದ ಫೈರ್ ಕ್ರಾಕರ್ ಎಡಗೈ'ಗೆ ತಾಗಿ ಗಾಯವಾಗಿದೆ.
ಮಂಗಳೂರು(ಡಿ.22): ಕರಾವಳಿ ನಗರ ಮಂಗಳೂರಿನ ಫೋರಂ ಮಾಲ್'ನಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ'ಗೆ ಗಾಯವಾಗಿದೆ.
ಮಾಲ್'ನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಬೈಕ್'ನಲ್ಲಿ ವೇದಿಕೆಗೆ ಎಂಟ್ರಿಯಾಗುತ್ತಿದ್ದ ವೇಳೆ ಬೈಕ್'ನಲ್ಲಿ ಅಳವಡಿಸಿದ್ದ ಫೈರ್ ಕ್ರಾಕರ್ ಎಡಗೈ'ಗೆ ತಾಗಿ ಗಾಯವಾಗಿದೆ. ನಂತರ ಪ್ರಥಮ ಚಿಕಿತ್ಸೆ ಬಳಿಕ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.