ಬಿಗ್ಬಾಸ್ ಸ್ಪರ್ಧಿಯಾಗಿ ಖ್ಯಾತರಾದ 'ಅಕ್ಕಾ' ನಟಿ ಅನುಪಮಾ ಗೌಡ, ಕನ್ನಡ ಕೋಗಿಲೆಯ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಈ ರಿಯಾಲಿಟಿ ಶೋ ಬಿಟ್ಟು ಮತ್ತೊಂದು ಕಾರ್ಯಕ್ರಮಕ್ಕೆ ನಿರೂಪಕಿಯಾಗುಯಾಗುತ್ತಿದ್ದಾರೆ.
ವಾರದಲ್ಲಿ ಐದು ದಿನ ಟಿವಿ ಮುಂದೆ ಕೂತು ಮಜಾ ಮಾಡುವ ಕಾರ್ಯಕ್ರಮ 'ಮಜಭಾರತ'ಕ್ಕೆ ಬಿಗ್ಬಾಸ್ ಖ್ಯಾತಿಯ ಮೂಗುತಿ ಸುಂದರಿ ಅನುಪಮಾ ಗೌಡ ನಿರೂಪಣೆಗೆ ಆಯ್ಕೆ ಆಗಿದ್ದಾರೆ.
ಈ ಹಿಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ 'ಕನ್ನಡ ಕೋಗಿಲೆ' ರಿಯಾಲಿಟಿ ಶೋ ಮೂಲಕ ನಿರೂಪಣೆ ಆರಂಭಿಸಿದ ಕಿರುತರೆ ನಟಿ ಅನುಪಮಾ ಈಗ ಮತ್ತೊಂದು ಶೋಗೆ ನಿರೂಪಣೆ ಮಾಡಲು ಮುಂದಾಗಿದ್ದಾರೆ.
ತನ್ನ ತುಂಟ ಮಾತು ಅಲ್ಲೊಂದು, ಇಲ್ಲೊಂದು ಚಂದನ್ ಶೆಟ್ಟಿ ಜೊತೆಗಿನ ಕಾಮಿಡಿ ಕಾರ್ಯಕ್ರಮಕ್ಕೆ ಹೊಸದೊಂದು ಕಳೆ ಕೊಟ್ಟಿತ್ತು.
ಮಜಾಭಾರತ ಸೀಸನ್ 3 ತೀರ್ಪುಗಾರರಾದ ರಚಿತಾ ರಾಮ್ ಹಾಗು ಗುರುಕಿರಣ್ ಈ ಸೀಸನ್ನಲ್ಲೂ ತೀರ್ಪು ನೀಡಲಿದ್ದಾರೆ. ಆದರೆ ನಿರೂಪಕನಾಗಿ ನಿರಂಜನ್ ದೇಶಪಾಂಡೆ ಹೊರ ನಡೆದಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ತುತ್ತ-ಮುತ್ತಾ ಶೋ ಅನ್ನು ನಿರೂಪಿಸಲಿದ್ದಾರೆ ದೇಶಪಾಂಡೆ.
ಇನ್ನು ಮೊದಲನೇ ಸೀಸನ್ ನಿರೂಪಕರಾಗಿ ಶೀತಲ್ ಶೆಟ್ಟಿ ಹಾಗೂ ನಿರಂಜನ್ ದೇಶಪಾಂಡೆ ಕಾರ್ಯ ನಿರ್ವಹಿಸಿದ್ರು. ಇದಕ್ಕೆ ನಟಿ ಶ್ರುತಿ ಹಾಗು ಎನ್ ನಾರಾಯಣ್ ಪೀರ್ಪುಗಾರರಾಗಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 22, 2019, 4:07 PM IST