ಮೈಸೂರನ್ನು ಸ್ವಚ್ಛ ನಗರ ಮಾಡಲು ಯಶ್ ಪಣ: ಬನ್ನಿ, ಸಹಕರಿಸಿ
ಯಶ್ರಿಂದ ಮತ್ತೊಂದು ಸಮಾಜ ಕಾರ್ಯ | ಮೈಸೂರನ್ನು ಸ್ವಚ್ಛ ನಗರವನ್ನಾಗಿ ಮಾಡಲು ಯತ್ನ | ಸಹಕರಿಸಲು ಸಾರ್ವಜನಿಕರಿಗೆ ಮನವಿ
ಬೆಂಗಳೂರು (ಜ.27): ರಾಕಿಂಗ್ ಸ್ಟಾರ್ ಯಶ್ ಸಮಾಜಸೇವೆಯಲ್ಲಿ ಸದಾ ಮುಂದು. ಯಶೋಮಾರ್ಗದ ಮೂಲಕ ಜನ ಸಾಮಾನ್ಯರನ್ನು ತಲುಪುವ ಪ್ರಯತ್ನದಲ್ಲಿದ್ದಾರೆ.
ಇದುವರೆಗೂ ಕೆಜಿಎಫ್ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
ಕೇವಲ ಸಿನಿಮಾ ಮಾತ್ರವಲ್ಲ ಜನರ ಕಷ್ಟಗಳಿಗೂ ಸ್ಪಂದಿಸುತ್ತಾರೆ. ಇದೀಗ ಮೈಸೂರನ್ನು ನಂಬರ್ 1 ಮಾಡಲು ಮುಂದಾಗಿದ್ದಾರೆ. ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಭಾಗಿಯಾಗಲು ಯಶ್ ಜನರ ಬಳಿ ಮನವಿ ಮಾಡಿದ್ದಾರೆ.
ಯಶ್ ಹೂಳೆತ್ತಿಸಿದ್ದ ಕೆರೆಯಿಂದಾಗಿ ಬರ ಮಾಯ!
2019 ರಲ್ಲಿ ಮೈಸೂರನ್ನು ಮತ್ತೆ ಸ್ವಚ್ಛ ನಗರವನ್ನಾಗಿ ಮಾಡಲು ಯಶ್ ಮುಂದಾಗಿದ್ದಾರೆ. ಇದಕ್ಕೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.