ಮಂಡ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ಪೈಪೋಟಿ ತಾರಕಕ್ಕೇರಿದೆ. ಪರಸ್ಪರ ಟೀಕೆ-ಪ್ರತಿ ಟೀಕೆಗಳು, ಗಿಮಿಕ್ಗಳು ನಡೆಯುತ್ತಿದೆ.
ಮೈಸೂರು (ಮಾ. 29): ನಿಖಿಲ್ ಹೆಸರಲ್ಲಿ ಬೇರೆ ನಿಲ್ಲಿಸುವಂತೆ ನನಗೂ ಕೆಲವರು ಸಲಹೆ ನೀಡಿದ್ದರು. ಆದರೆ ಬೇಡವೆಂದು ನಾನು ಹೇಳಿದ್ದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಟೀಕಿಸಿದರು.
ತೇಜಸ್ವಿ ಪರ ತೇಜಸ್ವಿನಿ ಪ್ರಚಾರ ಇಲ್ಲ?
ಸುಮಲತಾ ಹೆಸರಿನ ಇನ್ನು 3 ಮಂದಿ ಮಂಡ್ಯ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಕುರಿತು ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಹ ನಿಖಿಲ್ ಹೆಸರಿನ 9 ಮಂದಿಯನ್ನು ಕಣಕ್ಕಿಳಿಸಬಹುದಿತ್ತು. ಆದರೆ, ಈ ರೀತಿಯ ಕುತಂತ್ರ ರಾಜಕಾರಣವನ್ನು ನಾನು ಮಾಡಲ್ಲ. ನೇರ ಹೋರಾಟ ಮಾಡುತ್ತೇನೆ. ನಾನು ಅಂಬರೀಷ್ ಅವರ ಪತ್ನಿ, ಅವರ ರೀತಿಯೇ ರಾಜಕಾರಣ ಮಾಡುತ್ತೇನೆ ಎಂದರು.
ಪಕ್ಷದಿಂದ ಹೊರ ಹಾಕುವ ಎಚ್ಚರಿಕೆ ನೀಡಿದ ಎಚ್ಡಿಡಿ
ದರ್ಶನ್ ಮತ್ತು ಯಶ್ ಈ ರಾಜ್ಯದ ಆಸ್ತಿ. ಅವರನ್ನು ಅಲ್ಲಿಗೆ ಬರಬೇಡಿ, ಇಲ್ಲಿಗೆ ಹೋಗಬೇಡಿ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಮೇ 23ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 29, 2019, 8:54 AM IST