ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದ ಯಶ್ ಅವರನ್ನು ಅಭಿಮಾನಿಗಳು ತಡೆದಿದ್ದಾರೆ! ಅರೆ ಹೌದು ಆದರೆ ಅವರು ತಡೆದಿದ್ದು ಪ್ರೀತಿಯಿಂದ.

ಮಂಡ್ಯ[ಏ. 03] ಸುಮಲತಾ ಪರ ಪ್ರಚಾರ ಮಾಡುತ್ತಿದ್ದ ಯಶ್ ಅನಿವಾರ್ಯವಾಗಿ ಅಭಿಮಾನಿಗಳ ಒತ್ತಡಕ್ಕೆ ಮಣಿಯಬೇಕಾಗಿದೆ. ಬಲ್ಲೆನಹಳ್ಳಿ ಊರ ಗ್ರಾಮಸ್ಥರು ಯಶ್ ಪ್ರಚಾರಕ್ಕೆ ಅಡ್ಡಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ನೀವು ಊರ ಒಳಗೆ ಬರಲೇಬೇಕು ಇಲ್ಲ ವೋಟು ಹಾಕೋದಿಲ್ಲ ಅಂತ ರಾಕಿ ಬಾಯ್ ಗೆ ಗ್ರಾಮಸ್ಥರು ವಾರ್ನಿಂಗ್ ಕೊಟ್ಟಿದ್ದಾರೆ. ಅಂಬಿ ಅಣ್ಣ ಬಂರ್ತಿದ್ರು ನೀವು ಬನ್ನಿ ಎಂದು ಕಾರು‌ ಅಡ್ಡ ಗಟ್ಟಿ ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ.

ನಾಯ್ಡು ಹೇಳಿಕೆಗೆ ದರ್ಶನ್ ಕೊಟ್ಟ ಉತ್ತರ ಸಖತ್ತಾಗಿದೆ.

ನಂತರ ಅಭಿಮಾಣಿಗಳ ಒತ್ತಡಕ್ಕೆ ಮಣಿದ ಯಶ್ ಗ್ರಾಮದ ಒಳಗೆ ನಡೆದಿದ್ದಾರೆ. ಬನ್ನಿ ಅಂಥ ಮ್ಯಾಂಡ್ ಮಾಡ್ತಿರಾ ಬನ್ನಿ ಅಂತ ಎಷ್ಟು ಲೀಡಿಂಗ್ ಕೊಡ್ತಿರಾ ನೋಡ್ತಿನಿ ಎಂದು ತಮಾಷೆಯಾಗಿಯೇ ಯಶ್ ಪ್ರಶ್ನೆ ಮಾಡಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.