ನನಗೆ ಹೈ ಕಮಾಂಡ್ ಸರ್ಪ್ರೈಸ್ ಕೊಟ್ಟಿದೆ : ಶಾಮನೂರು
ಕಾಂಗ್ರೆಸ್ ಹೈ ಕಮಾಂಡ್ ನನಗೆ ಸರ್ಪ್ರೈಸ್ ನೀಡಿದೆ ಎಂದು ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆ: ನನಗೆ ವಯಸ್ಸಾಗಿದೆ ಅಂತ ಹೇಳುತ್ತಲೇ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಿಸಿರುವ ಹೈಕಮಾಂಡ್ ಸರ್ಪ್ರೈಸ್ ಕೊಟ್ಟಿದೆ.
ಕ್ಷೇತ್ರದಲ್ಲಿ ಬಿಜೆಪಿಯ ಜಿ.ಎಂ.ಸಿದ್ದೇಶ್ವರ ಅವರ ಠೇವಣಿ ಕಳೆಯುತ್ತೇನೆ ಎಂದು ಮಾಜಿ ಸಚಿವ, ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಮಾಹಿತಿ ಇಲ್ಲದೆ ನನ್ನ ಹೆಸರು ಘೋಷಣೆ ಯಾಗಿದೆ. ಹಿಂದೆ ವಿಧಾನಸಭೆಗೆ ಟಿಕೆಟ್ಗೇ ನನಗೆ ವಯಸ್ಸಾಗಿದೆಯನ್ನುತ್ತಿದ್ದರು. ಈಗ ಅದೇ ನಾಯಕರು ಟಿಕೆಟ್ ಘೋಷಿಸಿದ್ದಾರೆ ಎಂದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...