Asianet Suvarna News Asianet Suvarna News

ಕೈ ಗೆಲುವು ಕಸಿದ ಬಿಎಸ್ಪಿ, ಬಿಜೆಪಿಗೆ ಕೇವಲ 838  ಮತಗಳ ಗೆಲುವು

ಇಡೀ ರಾಜ್ಯದಲ್ಲಿ ಫಿಫ್ಟಿ-ಫಿಫ್ಟಿ, ನೆಕ್ ಕು ನೆಕ್ ಫೈಟ್ ಎಂದು ಪರಿಗಣಿಸಿದ್ದ ಕ್ಷೇತ್ರಗಳೆಲ್ಲ ತಲೆಕೆಳಗಾಗಿದೆ. ಅಂತಿಮವಾಗಿ  ಪೋಟೋ ಫಿನಿಶ್ ಆಗಿದ್ದು ಬಿಜೆಪಿ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ 838 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

loksabha election results 2019 V Srinivas Prasad Victory BJP Chamarajanagar
Author
Bengaluru, First Published May 23, 2019, 5:55 PM IST

ಚಾಮರಾಜನಗರ(ಮೇ.23) ಹಗ್ಗ ಜಗ್ಗಾಟ, ಗಡಿಯಾರದ ಲೋಲಕದಂತೆ ಅತ್ತಿಂದ ಇತ್ತ ಇತ್ತಿಂದ ಅತ್ತ  ಹೊರಳಾಡುತ್ತಿದ್ದ ವಿಜಯದ ಮಾಲೆ ಅಂತಿಮವಾಗಿ ಬಿಜೆಪಿಯ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಹೆಗಲಿಗೆ ಬಿದ್ದಿದೆ.

ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಸಂಸದ ಹಾಗೂ ದೋಸ್ತಿ ಅಭ್ಯರ್ಥಿ ಧ್ರುವನಾರಾಯಣ ಹಳೆಯ ರಾಜಕೀಯ ಗುರು ಶ್ರೀನಿವಾಸ್ ಪ್ರಸಾದ್ ಎದುರು ಮಂಡಿಯೂರಿ ವಿರೋಚಿತ ಸೋಲು ಕಂಡಿದ್ದಾರೆ. 

ದೇವೇಗೌಡರ ಕುಟುಂಬಕ್ಕೆ ದೊಡ್ಡ ಹೊಡೆತ ಬೀಳಲು ಕಾರಣಿಕರ್ತ ಯಾರು?

ಗುರು -ಶಿಷ್ಯರ ನಡುವಿನ ಕದನ ಜೋರಾಗಿದ್ದು, 20ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಹಾಲಿ ಸಂಸದ ಧ್ರುವನಾರಾಯಣ ವಿರುದ್ಧ ಮುನ್ನಡೆ ಸಾಧಿಸಿದ್ದರು. ಕೆಲ ಗೊಂದಲಗಳಿದ್ದರೂ ಅದನ್ನು ನಿವಾರಿಸಿಕೊಂಡು ಮತ ಎಣಿಕೆ ಮುಂದುವರಿಸಲಾಯಿತು. ಅಂತಿಮವಾಗಿ ಶ್ರೀನಿವಾಸ್ ಪ್ರಸಾದ್ ಅವರೊಗೆ 838 ಮತಗಳ ಅಂತರದ ಗೆಲುವು ದಕ್ಕಿದೆ.  ಬಿಎಸ್ ಪಿ ಯ ಅಭ್ಯರ್ಥಿ ಎಂಭತ್ತಾರು ಸಾವಿರ ಮತ ಪಡೆದುಕೊಂಡಿದ್ದು ಕಾಂಗ್ರೆಸ್ ಗೆ ಮುಳುವಾಯಿತು.

Follow Us:
Download App:
  • android
  • ios