ಮಂಡ್ಯದಲ್ಲಿ ಗೋ ಬ್ಯಾಕ್ ದರ್ಶನ್ ಘೋಷಣೆ
ನಟ ದರ್ಶನ್ ಹಾಗೂ ಯಶ್ ಸುಮಲತಾ ಬೆಂಬಲಕ್ಕೆ ನಿಂತಿದ್ದು ಇದರಿಂದ ಜೆಡಿಎಸ್ ಕಾರ್ಯಕರ್ಯರು ನಟರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಕಾರ್ಯಲರ್ತರು ಗೋ ಬ್ಯಾಕ್ ದರ್ಶನ್ ಅಭಿಯಾನ ನಡೆಸಿದ್ದಾರೆ.
ಮಂಡ್ಯ : ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಿಖಿಲ್ ರೋಡ್ ಶೋ ನಡೆಸುತ್ತಿದ್ದ ವೇಳೆ, ಜೆಡಿಎಸ್ ಯುವ ಕಾರ್ಯಕರ್ತರು ‘ಗೋ ಬ್ಯಾಕ್ ದರ್ಶನ್’ ಎಂದು ಘೋಷಣೆಗಳನ್ನು ಕೂಗಲು ಆರಂಭಿಸಿದರು.
ಈ ಮೂಲಕ ನಟ ದರ್ಶನ್ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಾಮಾಜಿಕ ತಾಣಗಳಲ್ಲಿ ಆರಂಭ ಗೊಂಡಿರುವ ‘ದರ್ಶನ್, ಯಶ್ ಗೋ ಬ್ಯಾಕ್’ ಅಭಿಯಾನ ಕುರಿತು ಮಾತನಾಡಿದ ನಿಖಿಲ್, ಜಾಲತಾಣಗಳಲ್ಲಿ ಯಾರೋ ನಾಲ್ಕು
ಜನ ಗೋ ಬ್ಯಾಕ್ ಎಂದರೆ ಚಿತ್ರಣ ಬದಲಾಗಲ್ಲ. ಯಾರೂ, ಯಾರಿಗೂ ಗೋ ಬ್ಯಾಕ್ ಎನ್ನುವುದು ಸರಿಯಲ್ಲ ಎಂದರು.
ಈ ಮೂಲಕ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸಿದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...