ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಬಿಜೆಪಿ ಸೇರ್ಪಡೆ
ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ನಾಮಪತ್ರ ಸಲ್ಲಿಕೆ ಯಾತ್ರೆ| ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಬಿಜೆಪಿ ಸೇರ್ಪಡೆ
ಕಲಬುರಗಿ[ಏ.04]: ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಬುಧವಾರ ಬಿಜೆಪಿ ಸೇರ್ಪಡೆಗೊಂಡರು.
ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ನಾಮಪತ್ರ ಸಲ್ಲಿಕೆ ರಾರಯಲಿಯ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ರತ್ನಪ್ರಭಾ ಬಿಜೆಪಿಗೆ ಸೇರ್ಪಡೆಯಾದರು.
ರತ್ನಪ್ರಭಾ ಬಿಜೆಪಿ ಅಭ್ಯರ್ಥಿಯಾಗಿ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕೆಲ ತಿಂಗಳಿಂದ ಕ್ಷೇತ್ರದಲ್ಲಿ ಹಬ್ಬಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ಉಮೇಶ ಜಾಧವ ಅವರ ಪಾಲಾಗಿತ್ತು. ಈ ನಡುವೆ ಇನ್ನೂ ಕೆಲವು ಪಕ್ಷಗಳು ರತ್ನಪ್ರಭಾ ಅವರನ್ನು ಸಂಪರ್ಕಿಸಿದ್ದವು.
Karnataka's Mass Leader and @BJP4Karnataka chief Shri @BSYBJP Ji welcomed retired CS of Karnataka @Ratnaprabha_IAS to #BJP today.
— Chowkidar Shiva Ashtagi (@shivaashtagi) April 3, 2019
MP Candidate @UmeshJadhav_BJP#Kalaburagi Dist BJP VP #Ambaraya_Ashtagi #BJP Mahila President #Divya_Hagargi, Yash Ashtagi Shiva Ashtagi were present pic.twitter.com/UnPyQjRnSk
‘ಜನರ ಸೇವ ಮಾಡಲು ರಾಜಕೀಯ ಪ್ರವೇಶಿಸುತ್ತಿರುವೆ’ ಎಂದು ತಿಳಿಸಿದ ರತ್ನಪ್ರಭಾ, ‘ಪ್ರಧಾನಿ ಮೋದಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ನಿವೃತ್ತಿರಾದ ಮೇಲೆ ಜನಸೇವೆ ಮಾಡುವ ಬಯಕೆಯಿತ್ತು. ಅದರಂತೆ ಹೈ-ಕ ಭಾಗದ ಪ್ರಮುಖ ನಗರಿ ಕಲಬುರಗಿಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದೇನೆ. ಇದು ನನಗೆ ಹೆಮ್ಮೆಯ ಸಂಗತಿ’ ಎಂದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...