ಬಿಜೆಪಿ ಗೆಲುವನ್ನು ವಿಭಿನ್ನವಾಗಿ ಬಣ್ಣಿಸಿದ RSS
ಲೋಕಸಭಾ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿಕ್ರಿಯೆ ನೀಡಿದೆ.
ಬೆಂಗಳೂರು[ಮೇ. 23] ದೇಶದಲ್ಲಿ ಮತ್ತೊಮ್ಮೆಸುಭದ್ರ ಸರಕಾರ ಬಂದಿದೆ. ಮತ್ತೊಮ್ಮೆ ಪ್ರಜಾಪ್ರಭುತ್ವಕ್ಕೆ ಜಯವಾಗಿದೆ ಎಂದು ಆರ್ ಎಸ್ ಎಸ್ ಬಣ್ಣಿಸಿದೆ. ಈ ಲೋಕ ಸಂಗ್ರಾಮದ ಫಲಿತಾಂಶನ್ನು ಇಡೀ ಜಗತ್ತೆ ನೋಡಿದೆ ಎಂದಿದೆ.
ಇದು ರಾಷ್ಟ್ರ ಸಂರಕ್ಷಣೆ ಮಾಡುವ ಶಕ್ತಿಗಳ ಗೆಲುವು. ಈ ಗೆಲುವಿಗೆ ಸಹಕರಿಸಿದ ಮತ್ತು ದುಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದೆ.
ಲೋಕಸಭೆ ಚುನಾವಣೆ ರಿಸಲ್ಟ್ 2019: ಕರ್ನಾಟಕದಲ್ಲಿ ಗೆದ್ದವರು, ಸೋತವರು
ಹೊಸ ಸರಕಾರ ಸಾಮಾನ್ಯ ಜನರ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು. ಮಾನವೀಯತೆ ಯ ಗೆಲುವನ್ನು ಇಲ್ಲಿ ಕಾಣಬೇಕಾಗಿದೆ ಎಂದು ಆರ್ ಎಸ್ ಎಸ್ ಸಹಕಾರ್ಯವಾಹಕ ಭಯ್ಯಾಜಿ ಜೋಷಿ ಹೇಳಿದ್ದಾರೆ.