ಸುಮಲತಾಗೆ ನೋಟಿಸ್: ಎಡವಟ್ಟು ಮಾಡಿದ ಜಿಲ್ಲಾಧಿಕಾರಿ!
ಡೀಸಿಗೆ ‘ಸುಮಲತಾ’ ಗೊಂದಲ| ನೋಟೀಸ್ ನಲ್ಲಿ ಎಡವಟ್ಟು ಮಾಡಿದ ಜಿಲ್ಲಾಧಿಕಾರಿ!
ಮಂಡ್ಯ[ಮಾ.31]: ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಅವರಿಗೆ ನೀಡಿರುವ ನೋಟಿಸ್ನಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಎಡವಟ್ಟು ಮಾಡಿದ್ದು, ನೋಟಿಸ್ನ ಒಂದು ಕಡೆ ಎ.ಸುಮಲತಾ ಎಂದು ಹಾಗೂ ಮತ್ತೊಂದು ಕಡೆ ಎಂ. ಸುಮಲತಾ ಎಂದು ನಮೂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
‘ನಿಖಿಲ್ ನಾಮಪತ್ರ ಕ್ರಮಬದ್ಧವಾಗಿಲ್ಲ. ಅದನ್ನು ಸರಿಪಡಿಸಲು ಅಧಿಕಾರಿಗಳ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ನನಗೆ ಬಂದ ಮಾಹಿತಿಯ ಪ್ರಕಾರ ಖುದ್ದು ಸಿಎಂ ಅವರೇ ಜಿಲ್ಲಾಧಿಕಾರಿಯನ್ನು ಮನೆಗೆ ಕರೆಸಿಕೊಂಡು ಮಾತನಾಡಿದ್ದಾರೆ’ ಎಂದು ಸುಮಲತಾ ಹೇಳಿದ್ದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಜಿಲ್ಲಾಧಿಕಾರಿಗಳು, ಐಪಿಎಸ್ ಸೆಕ್ಷನ್ 189ರಡಿ ನಿಮ್ಮ ಮೇಲೆ ಏಕೆ ಕ್ರಮಕೈಗೊಳ್ಳಬಾರದು ಎಂದು ಪ್ರಶ್ನಿಸಿ ಸುಮಲತಾ ಅಂಬರೀಷ್ಗೆ ಶುಕ್ರವಾರ ನೋಟಿಸ್ ಜಾರಿ ಮಾಡಿದ್ದರು.
ಆದರೆ, ಇದೀಗ ಜಿಲ್ಲಾಧಿಕಾರಿಗಳು ನೀಡಿರುವ ನೋಟಿಸ್ನ ಆರಂಭದಲ್ಲಿ ಸುಮಲತಾ ಎಂ. ಎಂದು ಟೈಪ್ ಮಾಡಿ, ನಂತರ ಸುಮಲತಾ ಎ. ಎಂದು ತಿದ್ದಿ ಕಳುಹಿಸಿದ್ದಾರೆ. ನೋಟಿಸ್ನ ಕೊನೆಯಲ್ಲಿ ಎ.ಸುಮಲತಾ ಎಂದು ನಮೂದಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...