ಸಿದ್ದು ಸಂಧಾನ ಸಕ್ಸಸ್, ತುಮಕೂರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಮಪತ್ರ ವಾಪಸ್
ಅಂತಿಮವಾಗಿ ದೇವೇಗೌಡರು ತುಮಕೂರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಗೌಡರಿಗೆ ಅಲ್ಲಿ ಬಂಡಾಯದ ಬಿಸಿ ನಿರ್ಮಾಣವಾಗಿತ್ತು. ಇದೀಗ ಸಿದ್ದರಾಮಯ್ಯ ಸಂಧಾನದ ಮೂಲಕ ಒಬ್ಬ ಅಭ್ಯರ್ಥಿ ಹಿಂದಕ್ಕೆ ಸರಿಯುವುದು ಪಕ್ಕಾ ಆಗಿದೆ.
ತುಮಕೂರು(ಮಾ. 28) ದೇವೇಗೌಡರರಿಗೆ ಎದುರಾಗಿದ್ದ ಒಂದು ಆತಂಕ ನಿವಾರಣೆಯಾಗಿದೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಉಮೇದುವಾರಿಕೆ ಹಿಂದಕ್ಕೆ ಪಡೆಯಲು ಒಪ್ಪಿದ್ದಾರೆ.
ಸಿದ್ದರಾಮಯ್ಯ ಸಂಧಾನದ ಬಳಿಕ ನಾಮ ಪತ್ರ ವಾಪಾಸಿಗೆ ಒಪ್ಪಿಕೊಂಡ ರಾಜಣ್ಣ ಒಪ್ಪಿಕೊಂಡಿದ್ದಾರೆ. ತುಮಕೂರಿನಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಜಣ್ಣ ದೋಸ್ತಿ ಅಭ್ಯರ್ಥಿ ದೇವೇಗೌಡರ ವಿರುದ್ಧ ಸ್ಪರ್ಧೆಗೆ ಇಳಿದಿದ್ದರು.
ಯಶ್ ಮೇಲೆ ಐಟಿ ದಾಳಿ ಯಾರಿಗೆ ಲಿಂಕ್ ಮಾಡ್ಲಿ? ಕುಟುಕಿದ ಸುಮಲತಾ
ರಾಜಣ್ಣ ಮಾ.29 ರಂದು ನಾಮಪತ್ರ ಹಿಂದಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ. ಇನ್ನು ಹಾಲಿ ಸಂಸದ ಇನ್ನೊಬ್ಬ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮುದ್ದಹನುಮೇಗೌಡರಿಗೂ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ ನಾಮಪತ್ರ ಹಿಂದಕ್ಕೆ ಪಡೆಯಲು ಕೋರಿದ್ದಾರೆ. ಆದರೆ ಮುದ್ದಹನುಮೇಗೌಡರು ಯಾವುದೆ ಸ್ಪಷ್ಟ ಉತ್ತರ ನೀಡಿಲ್ಲ.